ಆ್ಯಪ್ನಗರ

ಬಂಗಾಳ ಕೊಲ್ಲಿ: ವಾಯುಭಾರ ಕುಸಿತ ಸಾಧ್ಯತೆ

ವಾಯು ಚಂಡಮಾರುತ ಅವಧಿಯಲ್ಲಿ ದಕ್ಷಿಣ ಕನ್ನಡದಲ್ಲಿ ಸುರಿದ ಮಳೆಯನ್ನು ಬಿಟ್ಟರೆ ಮುಂಗಾರು ಪ್ರವೇಶದ ಬಳಿಕ ಜಿಲ್ಲೆಯಲ್ಲಿ ಒಂದೆಡರಡು ಮಳೆ ಬಿಟ್ಟರೆ ಅವ್ಯಾಹತವಾಗಿ ಮಳೆ ಸುರಿದಿಲ್ಲ.

Vijaya Karnataka Web 16 Jun 2019, 7:40 pm
ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಉಂಟಾದ ’ವಾಯು’ ಚಂಡಮಾರುತ ತಣ್ಣಗಾಗುವಷ್ಟರಲ್ಲಿ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಗಳಿವೆ. ಈ ನಡುವೆ ಜಿಲ್ಲೆಯಲ್ಲಿ ಮೂರನೇ ದಿನವಾದ ಭಾನುವಾರ ಕೂಡ ಮುಂಗಾರು ದುರ್ಬಲವಾಗಿತ್ತು.
Vijaya Karnataka Web Rain


ಬಂಗಾಳ ಕೊಲ್ಲಿಯಲ್ಲಿ ಉಂಟಾಗುವ ವಾಯುಭಾರ ಕುಸಿತ ಸ್ಪಷ್ಟ ಚಿತ್ರಣ ಜೂ.18ರ ಬಳಿಕ ಸಿಗಲಿದೆ. ಜಿಲ್ಲೆಯಲ್ಲಿ ಇನ್ನೆರಡು ದಿನ ಕೂಡ ಮುಂಗಾರು ಕ್ಷೀಣವಾಗಲಿದ್ದು, ಶುಷ್ಕ ವಾತಾವರಣ ಮುಂದುವರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಎಸ್.ಎಸ್. ಎಂ. ಗಾವಸ್ಕರ್ ಭಾನುವಾರ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

ವಾಯು ಚಂಡಮಾರುತ ಅವಧಿಯಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯನ್ನು ಬಿಟ್ಟರೆ ಮುಂಗಾರು ಪ್ರವೇಶದ ಬಳಿಕ ಜಿಲ್ಲೆಯಲ್ಲಿ ಒಂದೆಡರಡು ಮಳೆ ಬಿಟ್ಟರೆ ಅವ್ಯಾಹತವಾಗಿ ಮಳೆ ಸುರಿದಿಲ್ಲ. ಜಿಲ್ಲೆಯಲ್ಲಿ ಮತ್ತೆ ಬಿಸಿಲಿನ ಧಗೆಯ ವಾತಾವರಣ ಮುಂದುವರಿದೆ.

ಜಿಲ್ಲೆಯಲ್ಲಿ ಜೂ.15ರ ಬೆಳಗ್ಗೆ 9 ಗಂಟೆಯಿಂದ ಜೂ.16ರ ಬೆಳಗ್ಗೆ 9 ಗಂಟೆ ವರೆಗೆ ಕೇವಲ 9.5 ಮಿಮೀ. ಮಳೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ