ಆ್ಯಪ್ನಗರ

ಮೂಡುಬಿದಿರೆ ಬಿಜೆಪಿಯಿಂದ ಸುಷ್ಮಾ ಸ್ವರಾಜ್‌ಗೆ ಶ್ರದ್ಧಾಂಜಲಿ

ಬಿಜೆಪಿಯ ಪ್ರಬಲ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ನಿಧನದ ಹಿನ್ನೆಲೆಯಲ್ಲಿ ಮೂಡುಬಿದಿರೆ ಬಿಜೆಪಿ ಕಚೇರಿಯಲ್ಲಿ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Vijaya Karnataka 8 Aug 2019, 5:00 am
ಮೂಡುಬಿದಿರೆ: ಬಿಜೆಪಿಯ ಪ್ರಬಲ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ನಿಧನದ ಹಿನ್ನೆಲೆಯಲ್ಲಿ ಮೂಡುಬಿದಿರೆ ಬಿಜೆಪಿ ಕಚೇರಿಯಲ್ಲಿ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Vijaya Karnataka Web MNR-7MDBSUSHMA


ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ ನುಡಿನಮನ ಸಲ್ಲಿಸಿ, ಸುಷ್ಮಾ ಸ್ವರಾಜ್‌ ಬಿಜೆಪಿ ಮಹಾನಕ್ಷ ತ್ರದಂತಿದ್ದು ಆ ನಕ್ಷ ತ್ರ ಈಗ ಕಳಚಿದೆ. ಅಪ್ಪಟ ಭಾರತೀಯ ನಾರಿಯ ಪ್ರತೀಕವಾಗಿದ್ದರು. ಅವರಲ್ಲಿ ತಾಯಿ ಭಾವನೆ ಕಾಣುವ ವ್ಯಕ್ತಿತ್ವವಿತ್ತು. ನೇರ ನಡೆನುಡಿ, ದಿಟ್ಟತನವನ್ನು ಹೊಂದಿದ್ದ ಅವರು ನಾಲ್ಕು ದಶಕಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನಾನಾ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರ ಆದರ್ಶದ ಕೆಲಸವನ್ನು ಮುಂದುವರೆಸಿಕೊಂಡು ಹೋಗುವುದೇ ನಾವು ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದರು.

ಮಂಡಲ ಅಧ್ಯಕ್ಷ ಈಶ್ವರ ಕಟೀಲು ಅವರು ಸುಷ್ಮಾ ಸ್ವರಾಜ್‌ ರಾಜಕೀಯದಲ್ಲಿ ಸಾಗಿ ಬಂದ ಹಾದಿಯನ್ನು ವಿವರಿಸಿದರು. ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜೋಯ್ಲಸ್‌ ಡಿಸೋಜ, ಹಿರಿಯ ಮುಖಂಡ ಬಾಹುಬಲಿ ಪ್ರಸಾದ್‌, ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ‍್ಯದರ್ಶಿ ಹರೀಶ್‌ ಎಂ.ಕೆ. ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ‍್ಯದರ್ಶಿ ಸುಕೇಶ್‌ ಶೆಟ್ಟಿ ಕಾರ‍್ಯಕ್ರಮ ನಿರ್ವಹಿಸಿದರು.

ಮಂಡಲ ಕಾರ‍್ಯದರ್ಶಿ ಲಕ್ಷ ್ಮಣ ಪೂಜಾರಿ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ