ಆ್ಯಪ್ನಗರ

ವಳಚ್ಚಿಲ್: ನೆರೆ ನೀರಿಗೆ ಬಿದ್ದು ಮಸೀದಿ ಸಿಬ್ಬಂದಿ ಸಾವು

ದಕ್ಷಿಣ ಕನ್ನಡದಲ್ಲಿ ಪ್ರವಾಹಕ್ಕೆ ಮಸೀದಿಯ ಸಿಬ್ಬಂದಿಯೊಬ್ಬರು ಬಲಿಯಾಗಿದ್ದಾರೆ.

Vijaya Karnataka Web 10 Aug 2019, 2:19 pm
ಮಂಗಳೂರು: ವಳಚ್ಚಿಲ್ ಕೇಂದ್ರ ಜುಮ್ಮಾ ಮಸೀದಿಗೆ ಬೆಳಗ್ಗಿನ ಊಪಾಹಾರ ಕೊಂಡೊಯ್ಯುತ್ತಿದ್ದ ಮಸೀದಿಯ ಸಹಾಯಕ, ಉಪ್ಪಿನಂಗಡಿ ಆತೂರು ನಿವಾಸಿ ಮುಅದ್ದಿನ್ (45) ನೇತ್ರಾವತಿ ನದಿ ನೆರೆ ನೀರಿಗೆ ಜಾರಿ ಬಿದ್ದು ಮೃತಪಟ್ಟಿದ್ದಾರೆ.
Vijaya Karnataka Web Death


ಮಸೀದಿಯಿಂದ ಶನಿವಾರ ಬೆಳಗ್ಗೆ 9ಗಂಟೆ ಸುಮಾರು ವಳಚ್ಚಿಲ್ ಬಿ.ಎಚ್. ಸ್ಟೋರ್ ಸಮೀಪವಿರುವ ಮನೆಗೆ ಉಪಹಾರ ಕೊಂಡೊಯ್ಯಲು ಹೋಗಿದ್ದರು. ಮರಳಿ ಬರುವಾಗ ಕಾಲುದಾರಿಯಲ್ಲೇ ತೋಡಿನ ನೆರೆ ನೀರು ತುಂಬಿ ಹರಿಯುತ್ತಿತ್ತು. ಈ ಸಂದರ್ಭ ದಾರಿಯ ಅರಿವಾಗದೆ ಕಾಲು ಜಾರಿ ತೋಡಿಗೆ ಬಿದ್ದಿದ್ದಾರೆ.

ಸ್ಥಳೀಯರು ಗಮನಿಸಿ ಕೂಡಲೇ ಅವರನ್ನು ರಕ್ಷಣೆ ಮಾಡುವ ಪ್ರಯತ್ನಪಟ್ಟರು. ಆದರೆ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮುಅದ್ದೀನ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮಂಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇವರು ಈ ಹಿಂದೆ ಕುದ್ರೋಳಿ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ