ಆ್ಯಪ್ನಗರ

ಎಂಆರ್‌ಪಿಎಲ್‌ ವಿರುದ್ಧ ಪೊರಕೆ ಹಿಡಿದು ಪ್ರತಿಭಟನೆ

ಕೋಕ್‌ ಸಲ್ಫರ್‌ ಘಟಕದಿಂದ ಉಂಟಾಗಿರುವ ಮಾಲಿನ್ಯದಿಂದ ಊರಿನ ಪರಿಸರವನ್ನು ರಕ್ಷಿಸಲು ಸರಕಾರ ಹೊರಡಿಸಿರುವ ಆರು ಅಂಶಗಳ ಪರಿಹಾರ ಜಾರಿಗೊಳಿಸದಿರುವ ಎಂಆರ್‌ಪಿಎಲ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ, ಎಂಆರ್‌ಪಿಎಲ್‌ ವಿಸ್ತರಣೆ ಕೈಬಿಡುವಂತೆ ಆಗ್ರಹಿಸಿ ಜೋಕಟ್ಟೆ, ಕಳವಾರು, ತೋಕೂರು ಗ್ರಾಮಸ್ಥರು ನಗರದ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಗುರುವಾರ ಪೊರಕೆ ಹಿಡಿದು ಮೆರವಣಿಗೆ ನಡೆಸಿದರು.

Vijaya Karnataka 11 Jan 2019, 4:36 pm
ಮಂಗಳೂರು : ಕೋಕ್‌ ಸಲ್ಫರ್‌ ಘಟಕದಿಂದ ಉಂಟಾಗಿರುವ ಮಾಲಿನ್ಯದಿಂದ ಊರಿನ ಪರಿಸರವನ್ನು ರಕ್ಷಿಸಲು ಸರಕಾರ ಹೊರಡಿಸಿರುವ ಆರು ಅಂಶಗಳ ಪರಿಹಾರ ಜಾರಿಗೊಳಿಸದಿರುವ ಎಂಆರ್‌ಪಿಎಲ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ, ಎಂಆರ್‌ಪಿಎಲ್‌ ವಿಸ್ತರಣೆ ಕೈಬಿಡುವಂತೆ ಆಗ್ರಹಿಸಿ ಜೋಕಟ್ಟೆ, ಕಳವಾರು, ತೋಕೂರು ಗ್ರಾಮಸ್ಥರು ನಗರದ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಗುರುವಾರ ಪೊರಕೆ ಹಿಡಿದು ಮೆರವಣಿಗೆ ನಡೆಸಿದರು.
Vijaya Karnataka Web mrpl strike
ಎಂಆರ್‌ಪಿಎಲ್‌ ವಿರುದ್ಧ ಪೊರಕೆ ಹಿಡಿದು ಪ್ರತಿಭಟನೆ


ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಧರಣಿಯಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಮಾತನಾಡಿ, ಪರಿಸರ ನಿಯಮಗಳನ್ನು ಉಲ್ಲಂಘಿಸಿ ಎಂಆರ್‌ಪಿಎಲ್‌ ಜೋಕಟ್ಟೆಯ ಜನವಸತಿ ಪ್ರದೇಶದಲ್ಲಿ ಪೆಟ್‌ ಕೋಕ್‌, ಸಲ್ಫರ್‌ ಘಟಕ ಸ್ಥಾಪಿಸಿದೆ. ಕಂಪನಿಯ ವಿಷಕಾರಿ ಹಾರುಬೂದಿಯಿಂದ ಪರಿಸರದ ಗ್ಯಾಮಸ್ಥರ ಬದುಕು ನರಕವಾಗಿದೆ. ಈ ಕುರಿತು ಗ್ರಾಮಸ್ಥರು ನಡೆಸಿದ ಹೋರಾಟದ ಪರಿಣಾಮ ಸರಕಾರ ಪರಿಹಾರ ಕ್ರಮಗಳನ್ನು ಘೋಷಿಸಿದ್ದರೂ ಕಂಪನಿ ಅವುಗಳನ್ನು ಜಾರಿಗೆ ತರದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದರು.

ಸರಕಾರದ ಅದೇಶ ಅನುಷ್ಠಾನ ಸಂಬಂಧಿಸಿ ರಚನೆಯಾಗಿರುವ ಜಿಲ್ಲಾಧಿಕಾರಿ ಅಧ್ಯಕ್ಷ ತೆಯ ಸಮಿತಿ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕನಿಷ್ಠ ಸಭೆಯನ್ನೂ ಸೇರುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದ್ದ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಕಂಪನಿಯ ಹಿತ ಕಾಯುವುದರಲ್ಲಿ ನಿರತರಾಗಿದ್ದಾರೆ. ಧರ್ಮ- ಧರ್ಮಗಳ ನಡುವೆ ಎತ್ತಿಕಟ್ಟಿ ದೇವರನ್ನು ಬೀದಿಗೆ ತಂದು ಮತಗಳ ಧ್ರುವೀಕರಣ ನಡೆಸಿ ಗೆಲುವಿನ ರುಚಿ ಹಿಡಿದಿರುವ ಕಟೀಲ್‌ ಅವರಿಗೆ ಜೋಕಟ್ಟೆಯಲ್ಲಿ ಕೆಮಿಕಲ್‌ ಮಾಲಿನ್ಯದಿಂದ ಹತಾಶರಾಗಿರುವ ಹಿಂದು ಮುಸ್ಲಿಂ ಅಮ್ಮಂದಿರ ಕಣ್ಣೀರು ಈ ಬಾರಿಯ ಚುನಾವಣೆಯಲ್ಲಿ ಶಾಪವಾಗಿ ಕಾಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

10 ದಿನಗಳ ಒಳಗಡೆ ಸರಕಾರ ಆದೇಶಿಸಿದ ಆರು ಅಂಶಗಳ ಪರಿಹಾರ ಕ್ರಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ನಿರ್ಣಾಯಕ ಕ್ರಮ ಕೈಗೊಳ್ಳದಿದ್ದಲ್ಲಿ ಜೋಕಟ್ಟೆ, ತೋಕೂರು ಗ್ರಾಮ ವ್ಯಾಪ್ತಿಯಲ್ಲಿ ಎಂಆರ್‌ಪಿಎಲ್‌, ಎಸ್‌ಇಝೆಡ್‌ ಕಾಮಗಾರಿಯನ್ನು ತಡೆಹಿಡಿಯುವ ಹೋರಾಟ ಹಮ್ಮಿಕೊಳ್ಳುವುದಾಗಿ ಮುನೀರ್‌ ಎಚ್ಚರಿಸಿದರು.

ಹೋರಾಟ ಸಮಿತಿಯ ಬಿ.ಕೆ. ಇಮ್ತಿಯಾಜ್‌, ಬಿ.ಎಸ್‌. ಹುಸೈನ್‌, ಅಬೂಬಕ್ಕರ್‌ ಬಾವ, ಮೊಯ್ದಿನ್‌ ಶರೀಫ್‌, ಶ್ರೀನಾಥ್‌ ಕುಲಾಲ್‌, ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್‌. ಬಶೀರ್‌, ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆಯ ಟಿ.ಆರ್‌. ಭಟ್‌, ಹೇಮಲತಾ ಭಟ್‌ ಮಾತನಾಡಿದರು.

ಶೇಖರ್‌ ಅಂಚನ್‌, ಚಂದ್ರಶೇಖರ ಜೋಕಟ್ಟೆ, ಸಿಲ್ವಿಯಾ ಡಿಸೋಜ, ಲಾನ್ಸಿ ಡಿಸೋಜ, ರೋನಿ, ಯಮುನಾ, ಕವಿತಾ ಜೋಕಟ್ಟೆ, ಆಮಿನಮ್ಮ, ಕೊಡುಂಗೆ ಮೋನು, ಗ್ರಾಪಂ ಉಪಾಧ್ಯಕ್ಷ ಶಂಸು ಇದಿನಬ್ಬ ಮತ್ತಿತರರು ಹೋರಾಟದ ನೇತೃತ್ವ ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ