ಆ್ಯಪ್ನಗರ

ಮೂಲ್ಕಿ: ಕನ್‌ಸ್ಟ್ರಕ್ಷ ನ್‌ ಸೈಟ್‌ನಲ್ಲಿ ಮಳೆ ನೀರು ಸಂಗ್ರಹ ಮುಗಿಯದ ತೆರವು ಕಾರ್ಯಾಚರಣೆ

ಇಲ್ಲಿನ ಪಂಚಮಹಲ್‌ ರಸ್ತೆಯ ನಿರ್ಮಾಣ ಹಂತದ ಕಟ್ಟಡದ ನೆಲ ಅಂತಸ್ತಿನಲ್ಲಿ ಸಂಗ್ರಹಗೊಂಡ ಮಳೆ ನೀರು ತೆರವು ಕಾರ್ಯಾಚರಣೆ ಶನಿವಾರವೂ ಮುಂದುವರಿದಿದ್ದು, ಸಂಜೆವರೆಗೂ ತೆರವು ಕಾರ್ಯಾಚರಣೆ ಪೂರ್ಣಗೊಂಡಿಲ್ಲ.

Vijaya Karnataka 4 Aug 2019, 5:00 am
ಮೂಲ್ಕಿ : ಇಲ್ಲಿನ ಪಂಚಮಹಲ್‌ ರಸ್ತೆಯ ನಿರ್ಮಾಣ ಹಂತದ ಕಟ್ಟಡದ ನೆಲ ಅಂತಸ್ತಿನಲ್ಲಿ ಸಂಗ್ರಹಗೊಂಡ ಮಳೆ ನೀರು ತೆರವು ಕಾರ್ಯಾಚರಣೆ ಶನಿವಾರವೂ ಮುಂದುವರಿದಿದ್ದು, ಸಂಜೆವರೆಗೂ ತೆರವು ಕಾರ್ಯಾಚರಣೆ ಪೂರ್ಣಗೊಂಡಿಲ್ಲ.
Vijaya Karnataka Web MNR-03MLK2


ಗುರುವಾರ ವಿಜಯ ಕರ್ನಾಟಕ ಈ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಮೂಲ್ಕಿ ನಪಂ ನೀರು ತೆರವುಗೊಳಿಸಲು ಕಟ್ಟಡ ಮಾಲೀಕರಿಗೆ ಗಡುವು ನೀಡಿತ್ತು. ಶುಕ್ರವಾರದಿಂದ 5 ಎಚ್‌ಪಿ ಪಂಪ್‌ ಬಳಸಿ ತೆರವು ಕಾರ್ಯಾಚರಣೆ ಆರಂಭಗೊಂಡಿದ್ದರೂ ಬೃಹತ್‌ ಪ್ರಮಾಣದಲ್ಲಿ ನೀರಿದ್ದ ಕಾರಣ ಶನಿವಾರ ಸಂಜೆವರೆಗೆ ಮುಕ್ಕಾಲಂಶ ಮಾತ್ರ ನೀರು ತೆರವಿಗೆ ಸಾಧ್ಯವಾಗಿದೆ.

ನಪಂ ಮುಖ್ಯಾಧಿಕಾರಿ ಪಿ.ಚಂದ್ರ ಪೂಜಾರಿ, ಎಂಜಿನಿಯರ್‌ ಅಶ್ವಿನಿ, ಆರೋಗ್ಯ ನಿರೀಕ್ಷ ಕಿ ಲಿಲ್ಲಿ ನಾಯರ್‌ ಶನಿವಾರ ಸ್ಥಳಕ್ಕೆ ಆಗಮಿಸಿ ನೀರನ್ನು ಸಂಪೂರ್ಣ ತೆರವು ಮಾಡುವಂತೆ ಆದೇಶಿಸಿದ್ದಾರೆ.

ಕಟ್ಟಡದ ಸುತ್ತ ಬೆಳೆದಿದ್ದ ಪೊದೆಗಳನ್ನು ಶನಿವಾರ ತೆರವುಗೊಳಿಸಿ ಅಲ್ಲೇ ಪೇರಿಸಿಡಲಾಗಿದೆ. ಇದನ್ನೂ ತೆರವುಗೊಳಿಸುವಂತೆ ಆದೇಶಿಸಲಾಗಿದೆ. ಭಾನುವಾರವೂ ಪಂಪ್‌ ಬಳಸಿ ನೀರನ್ನು ತೆರವುಗೊಳಿಸುವಂತೆ ತಿಳಿಸಿದ್ದಾರೆ.

ಕಟ್ಟಡದ ನೆಲ ಅಂತಸ್ತಿನಲ್ಲಿ ಮಳೆ ನೀರು ಬೃಹತ್‌ ಪ್ರಮಾಣದಲ್ಲಿ ಸಂಗ್ರಹಗೊಂಡ ಕಾರಣ ಪರಿಸರದಲ್ಲಿ ಡೆಂಗೆ, ಮಲೇರಿಯಾ ಸಹಿತ ಸಾಂಕ್ರಾಮಿಕ ರೋಗ ಭೀತಿಯ ಬಗ್ಗೆ ಸ್ಥಳೀಯರು ನಪಂಗೆ ಮನವಿ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ