ಆ್ಯಪ್ನಗರ

ಜಾಮೀನು ಸಿಗದಿದ್ದರೂ ಕೊಲೆ ಆರೋಪಿಗಳು ರಿಲೀಸ್‌ ಜಿಲ್ಲಾ ಕೇಂದ್ರ ಕಾರಾಗೃಹ ಅಧಿಕಾರಿಗಳ ಎಡವಟ್ಟು * ವಕೀಲರ ಸಮಯಪ್ರಜ್ಞೆಯಿಂದ ಆರೋಪಿಗಳು ಮತ್ತೆ ಜೈಲಿಗೆ

ಸಾಮಾನ್ಯವಾಗಿ ಯಾವುದೇ ಪ್ರಕರಣದಲ್ಲಿ ಜೈಲುಪಾಲಾದ ವ್ಯಕ್ತಿ ಬಿಡುಗಡೆಯಾಗಬೇಕಾದರೆ ಕೋರ್ಟ್‌ ಜಾಮೀನು ನೀಡಬೇಕು, ಪರೋಲ್‌ ಮೇಲೆ ಹೋಗಬೇಕು ಅಥವಾ ಪ್ರಕರಣದಲ್ಲಿ ಖುಲಾಸೆಗೊಳ್ಳಬೇಕು. ಆದರೆ ದ.ಕ. ಜಿಲ್ಲಾ ಕೇಂದ್ರ ಕಾರಾಗೃಹದ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಇಬ್ಬರು ಕೊಲೆ ಆರೋಪಿಗಳಿಗೆ ಜಾಮೀನು ಸಿಗದಿದ್ದರೂ ಬಿಡುಗಡೆಗೊಳಿಸಿದ ಪ್ರಸಂಗ ನಡೆದಿದೆ.

Vijaya Karnataka 14 Jul 2019, 3:54 pm
ಮಂಗಳೂರು : ಸಾಮಾನ್ಯವಾಗಿ ಯಾವುದೇ ಪ್ರಕರಣದಲ್ಲಿ ಜೈಲುಪಾಲಾದ ವ್ಯಕ್ತಿ ಬಿಡುಗಡೆಯಾಗಬೇಕಾದರೆ ಕೋರ್ಟ್‌ ಜಾಮೀನು ನೀಡಬೇಕು, ಪರೋಲ್‌ ಮೇಲೆ ಹೋಗಬೇಕು ಅಥವಾ ಪ್ರಕರಣದಲ್ಲಿ ಖುಲಾಸೆಗೊಳ್ಳಬೇಕು. ಆದರೆ ದ.ಕ. ಜಿಲ್ಲಾ ಕೇಂದ್ರ ಕಾರಾಗೃಹದ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಇಬ್ಬರು ಕೊಲೆ ಆರೋಪಿಗಳಿಗೆ ಜಾಮೀನು ಸಿಗದಿದ್ದರೂ ಬಿಡುಗಡೆಗೊಳಿಸಿದ ಪ್ರಸಂಗ ನಡೆದಿದೆ.
Vijaya Karnataka Web murder accused released without bail
ಜಾಮೀನು ಸಿಗದಿದ್ದರೂ ಕೊಲೆ ಆರೋಪಿಗಳು ರಿಲೀಸ್‌ ಜಿಲ್ಲಾ ಕೇಂದ್ರ ಕಾರಾಗೃಹ ಅಧಿಕಾರಿಗಳ ಎಡವಟ್ಟು * ವಕೀಲರ ಸಮಯಪ್ರಜ್ಞೆಯಿಂದ ಆರೋಪಿಗಳು ಮತ್ತೆ ಜೈಲಿಗೆ


ಕದ್ರಿ ಜಾರ್ಜ್‌ ಮಾರ್ಟಿಸ್‌ ರಸ್ತೆ ನಿವಾಸಿಗಳಾದ, ಸೋದರರಾದ ಶಿವಾಜಿ(37) ಮತ್ತು ಜಗದೀಶ್‌(38) ಬಿಡುಗಡೆಗೊಂಡ ಆರೋಪಿಗಳು. ಇವರು 2016ರ ಮೇ 15ರಂದು ಬಿಜೈ ಕೆಎಸ್ಸಾರ್ಟಿಸಿ ಬಳಿ ನಡೆದ ಕದ್ರಿ ರೋಹಿತ್‌ ಕೋಟ್ಯಾನ್‌ ಎಂಬವರ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು.

ಬಯಲಿಗೆ ಬಂದಿದ್ದು ಹೇಗೆ?: ಕೊಲೆ ಪ್ರಕರಣದ ಆರೋಪಿಗಳಾದ ಕದ್ರಿ ಶಿವಾಜಿ ಮತ್ತು ಜಗದೀಶ್‌ಗೆ ಕೋರ್ಟ್‌ನಿಂದ ನೋಟಿಸ್‌ ಬಂದಿದ್ದು, ಇದನ್ನು ಜಾಮೀನು ಬಿಡುಗಡೆ ಆದೇಶ ಎಂದು ತಿಳಿದ ಜೈಲ್‌ನ ಅಧಿಕಾರಿಗಳು ಸೂಪರಿಂಟೆಂಡೆಂಟ್‌ ಅನುಮತಿ ಪಡೆದು ಜು.9ರಂದು ಬಿಡುಗಡೆಗೊಳಿಸಿದರು. ಜೈಲ್‌ನ ಎಲ್ಲ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಿ ನಿಯಮ ಪ್ರಕಾರವೇ ಬಿಡುಗಡೆ ಮಾಡಲಾಗಿತ್ತು. ಆರೋಪಿಗಳು ಖುಷಿಯಿಂದಲೇ ಮನೆಗೆ ಹೋಗಿದ್ದರು.

ಕೋರ್ಟ್‌ನಿಂದ ಆರೋಪಿಗಳು ಬಿಡುಗಡೆಯಾದ ಬಳಿಕ ತಮ್ಮ ವಕೀಲರ ಬಳಿ ಹೋಗಿದ್ದರು. ಈ ಸಂದರ್ಭ ವಕೀಲರಿಗೆ ಅಚ್ಚರಿಯಾಗಿದ್ದು, ಬಿಡುಗಡೆಯ ಮಾಹಿತಿ ಪಡೆದುಕೊಂಡರು. ಬಳಿಕ ಜೈಲಿನಲ್ಲಿ ಆದ ಎಡವಟ್ಟು ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ನಿಯಮ ಮೀರಿ ಬಂಧನ: ಕೊಲೆ ಆರೋಪಿಗಳನ್ನು ಕೋರ್ಟ್‌ ಜಾಮೀನು ನೀಡದೆ ಬಿಡುಗಡೆ ಮಾಡಿ ಎಡವಟ್ಟು ಮಾಡಿದ ಅಧಿಕಾರಿಗಳು ಮರು ಬಂಧನವಾಗುವಾಗಲೂ ಎಡವಟ್ಟು ಮಾಡಿದ್ದಾರೆ. ಇಂತಹ ಘಟನೆಗಳು ನಡೆದಾಗ ಸಾಮಾನ್ಯವಾಗಿ ಪೊಲೀಸರಿಗೆ ಮಾಹಿತಿ ನೀಡಿ ಆ ಮೂಲಕ ಬಂಧಿಸಬೇಕು. ಆದರೆ ಜೈಲು ಅಧಿಕಾರಿಗಳು ಕೊಲೆ ಆರೋಪಿಗಳ ಮನೆಗೆ ಹೋಗಿ ಕರೆದುಕೊಂಡು ಬಂದಿದ್ದಾರೆ. ಇಲ್ಲೂ ನಿಯಮ ಮೀರಿ ಅಧಿಕಾರಿಗಳು ನಡೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದೆ.

ಜೈಲಿನಲ್ಲಿ ನಡೆದಿತ್ತು ಹೊಡೆದಾಟ, ಕೊಲೆ
1999ರಲ್ಲಿ ಮಂಗಳೂರು ಜೈಲ್‌ನಲ್ಲಿ ನಾಲ್ವರು ಕ್ರಿಮಿನಲ್‌ಗಳ ಗ್ರೇಟ್‌ ಎಸ್ಕೇಪ್‌ ಪ್ರಕರಣ ನಡೆದಿತ್ತು. ಖೋಟಾನೋಟು ಪ್ರಕರಣದಲ್ಲಿ ಬಂಧಿಯಾಗಿದ್ದ ಕುಖ್ಯಾತ ಕ್ರಿಮಿನಲ್‌ ಭಾಸ್ಕರನ್‌ ನಾಯರ್‌, ವಿದ್ಯಾರ್ಥಿನಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿ ಮಿಲಿಟ್ರಿ ಅಶ್ರಫ್‌, ನಟೋರಿಯಸ್‌ ಕ್ರಿಮಿನಲ್‌ ಆಕಾಶಭವನ ಇಬ್ರಾಹಿಂ, ಅತ್ಯಾಚಾರ ಆರೋಪಿ ಜಿನ್ನಪ್ಪ ಪರವ, ಬಾರ್‌ಬೆಂಡರ್‌ ಮೋಹನ್‌ ಸೇರಿ 10ಕ್ಕೂ ಹೆಚ್ಚು ಮಂದಿ ಪರಾರಿಯಾದ ಇತಿಹಾಸ ಜಿಲ್ಲಾ ಜೈಲಿಗಿದೆ. 2015ರ ನ.2ರಂದು ಮಾಡೂರು ಇಸುಬು ಹಾಗೂ ಛೋಟಾ ಶಕೀಲ್‌ ಸಹಚರ ಗಣೇಶ್‌ ಶೆಟ್ಟಿ ಎಂಬವರನ್ನು ಕೊಲೆ ಮಾಡಲಾಗಿತ್ತು.

ಸೂಪರಿಂಟೆಂಡೆಂಟ್‌ಗೂ ಹಲ್ಲೆಯಾಗಿತ್ತು: ವರ್ಷದ ಹಿಂದೆ ಜಿಲ್ಲಾ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್‌ ಆಗಿದ್ದ ಪರಮೇಶ್ವರ್‌ ಅವರ ಮೇಲೆಯೂ ಆರೋಪಿಗಳು ಹಲ್ಲೆ ಮಾಡಿದ್ದರು. ಇಂತಹ ಕ್ರಿಮಿನಲ್‌ ಹಿನ್ನೆಲೆಯುಳ್ಳವರು ಜೈಲ್‌ನಲ್ಲಿರುವಾಗ ಅಧಿಕಾರಿಗಳ ಈ ನಿರ್ಲಕ್ಷ್ಯ ಹಲವರಿಗೆ ಹುಬ್ಬೇರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ