ಆ್ಯಪ್ನಗರ

ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಹ್ಯಾಂಡ್‌ಬಾಲ್‌ ಪಂದ್ಯಾವಳಿ ಚಿಕ್ಕಮಗಳೂರು, ಕೊಡಗು, ಮಂಡ್ಯಕ್ಕೆ ಪ್ರಶಸ್ತಿ

ಮಂಡ್ಯ ಬಾಲಕರ ಹಾಗೂ ಬಾಲಕಿಯರ ತಂಡಗಳು ಉಳ್ಳಾಲ ಭಾರತ್‌ ಪ್ರೌಢಶಾಲೆಯಲ್ಲಿನಡೆದ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಟ್ಟದ 14 ವರ್ಷದೊಳಗಿನ ವಿಭಾಗದ ಪ್ರಶಸ್ತಿ ಹಾಗೂ ಚಿಕ್ಕಮಗಳೂರು ಬಾಲಕರ ತಂಡ ಮತ್ತು ಕೊಡಗು ಬಾಲಕಿಯರ ತಂಡ 17 ವರ್ಷದೊಳಗಿನ ವಿಭಾಗದ ಪ್ರಶಸ್ತಿ ತನ್ನದಾಗಿಸಿಕೊಂಡಿವೆ. ದ

Vijaya Karnataka 8 Nov 2019, 10:20 pm
ತೊಕ್ಕೊಟ್ಟು: ಮಂಡ್ಯ ಬಾಲಕರ ಹಾಗೂ ಬಾಲಕಿಯರ ತಂಡಗಳು ಉಳ್ಳಾಲ ಭಾರತ್‌ ಪ್ರೌಢಶಾಲೆಯಲ್ಲಿನಡೆದ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಟ್ಟದ 14 ವರ್ಷದೊಳಗಿನ ವಿಭಾಗದ ಪ್ರಶಸ್ತಿ ಹಾಗೂ ಚಿಕ್ಕಮಗಳೂರು ಬಾಲಕರ ತಂಡ ಮತ್ತು ಕೊಡಗು ಬಾಲಕಿಯರ ತಂಡ 17 ವರ್ಷದೊಳಗಿನ ವಿಭಾಗದ ಪ್ರಶಸ್ತಿ ತನ್ನದಾಗಿಸಿಕೊಂಡಿವೆ.
Vijaya Karnataka Web mysore zone handball tournament
ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಹ್ಯಾಂಡ್‌ಬಾಲ್‌ ಪಂದ್ಯಾವಳಿ ಚಿಕ್ಕಮಗಳೂರು, ಕೊಡಗು, ಮಂಡ್ಯಕ್ಕೆ ಪ್ರಶಸ್ತಿ

ದಕ್ಷಿಣ ಕನ್ನಡ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ, ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಉಳ್ಳಾಲದ ಅನುದಾನಿತ ಭಾರತ್‌ ಪ್ರೌಢಶಾಲೆ ಉಳ್ಳಾಲ ಆಶ್ರಯದಲ್ಲಿನಡೆದ ಈ ಪಂದ್ಯಾವಳಿಯಲ್ಲಿ14 ವರ್ಷದೊಳಗಿನ ಬಾಲಕರು ಹಾಗೂ ಬಾಲಕಿಯರಲ್ಲಿಕೊಡಗು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ.
17 ವರ್ಷದೊಳಗಿನ ವಿಭಾಗದ ಬಾಲಕರಲ್ಲಿಮೈಸೂರು ಹಾಗೂ ಬಾಲಕಿಯರಲ್ಲಿಮಂಡ್ಯ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ. 14 ವರ್ಷದೊಳಗಿನ ಬಾಲಕರಲ್ಲಿಅತ್ಯುತ್ತಮ ಗೋಲ್‌ಕೀಪರ್‌ ಹಾಗೂ ಶೂಟರ್‌ ಪ್ರಶಸ್ತಿಯನ್ನು ಮಂಡ್ಯದ ಡೇನಿಯಲ್‌ ಹಾಗೂ ಪವನ್‌ ಕುಮಾರ್‌ ಪಡೆದರೆ, ಸವ್ಯಸಾಚಿ ಪ್ರಶಸ್ತಿ ಕೊಡಗಿನ ಶ್ವಾಲಿ ಪಾಲಾಯಿತು. ಬಾಲಕಿಯರಲ್ಲಿಅತ್ಯುತ್ತಮ ಗೋಲ್‌ಕೀಪರ್‌ ಹಾಗೂ ಶೂಟರ್‌ ಪ್ರಶಸ್ತಿ ಮಂಡ್ಯದ ಬಬಿತಾ ಹಾಗೂ ಸಂಯುಕ್ತ ಪಡೆದರೆ, ಕೊಡಗಿನ ಸಮಧ್ಯಾ ಸವ್ಯಸಾಚಿಯಾಗಿ ಮೆರೆದರು. 17 ವರ್ಷದೊಳಗಿನ ಬಾಲಕರಲ್ಲಿಉತ್ತಮ ಗೋಲ್‌ಕೀಪರ್‌ ಹಾಗೂ ಸವ್ಯಸಾಚಿ ಪ್ರಶಸ್ತಿಯನ್ನು ಚಿಕ್ಕಮಗಳೂರು ತಂಡದ ದರ್ಶನ್‌ ಹಾಗೂ ಗೋಕುಲ್‌ ಪಡೆದರೆ, ಮೈಸೂರು ತಂಡದ ಮಂಜುನಾಥ ಉತ್ತಮ ಶೂಟರ್‌ ಪ್ರಶಸ್ತಿ ಪಡೆದರು. ಬಾಲಕಿಯರಲ್ಲಿಉತ್ತಮ ಗೋಲ್‌ಕೀಪರ್‌ ಹಾಗೂ ಸವ್ಯಸಾಚಿ ಪ್ರಶಸ್ತಿಯನ್ನು ಕೊಡಗಿನÜ ತನ್ವಿ ಹಾಗೂ ದೃಷ್ಟಿ ದೇವಮ್ಮ ಪಡೆದರೆ, ಉತ್ತಮ ಶೂಟರ್‌ ಪ್ರಶಸ್ತಿ ಮಂಡ್ಯ ತಂಡದ ಪೂರ್ವಿಕಾ ಪಾಲಾಯಿತು. ಸಮಾರೋಪದಲ್ಲಿಪ್ರೌಢಶಾಲಾ ಸಂಚಾಲಕ ಯಶವಂತ ಪಿ. ಅಮೀನ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಾರ್ಮಿಕ ಪರಿಷತ್‌ ಮಾಜಿ ಸದಸ್ಯ ಕೆ.ಟಿ. ಸುವರ್ಣ, ಚಂದ್ರಹಾಸ್‌ ಪಂಡಿತ್‌ಹೌಸ್‌, ಭಾರತ್‌ ಪ್ರೌಢಶಾಲೆಯ ಕಾರ್ಯದರ್ಶಿ ರಾಜೇಶ್‌ ಪುತ್ರನ್‌, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್‌, ಜಿಲ್ಲಾದೈಹಿಕ ಶಿಕ್ಷಣಾಧಿಕಾರಿ ರಘುನಾಥ, ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿ ಲಿಲ್ಲಿಪಾಯಸ್‌ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ