ಆ್ಯಪ್ನಗರ

ಉಳ್ಳಾಲ ನಗರಸಭೆ ವಿರುದ್ಧ ನಾಗರಿಕ ಸಮಿತಿ ಪ್ರತಿಭಟನೆ

ಉಳ್ಳಾಲದಲ್ಲಿಕ್ಷೇತ್ರದ ಮಾಜಿ ಸಚಿವರ ಪ್ರೇರಣೆಯಿಂದ ಅಧಿಕಾರಿಗಳು ದುರಾಡಳಿತ ನಡೆಸುತ್ತಾ ಮೂಲ ಸೌಕರ್ಯಗಳನ್ನು ಕಲ್ಪಿಸದೆ ಸೌಹಾರ್ದತೆಗೆ ಧಕ್ಕೆಯಾಗುವಂತೆ ಮಾಡುತ್ತಿದ್ದಾರೆ ಎಂದು ಉಳ್ಳಾಲ ನಾಗರಿಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ದಿನಕರ್‌ ಉಳ್ಳಾಲ ಆರೋಪಿಸಿದರು.

Vijaya Karnataka 12 Sep 2019, 5:00 am
ಉಳ್ಳಾಲ: ಉಳ್ಳಾಲದಲ್ಲಿಕ್ಷೇತ್ರದ ಮಾಜಿ ಸಚಿವರ ಪ್ರೇರಣೆಯಿಂದ ಅಧಿಕಾರಿಗಳು ದುರಾಡಳಿತ ನಡೆಸುತ್ತಾ ಮೂಲ ಸೌಕರ್ಯಗಳನ್ನು ಕಲ್ಪಿಸದೆ ಸೌಹಾರ್ದತೆಗೆ ಧಕ್ಕೆಯಾಗುವಂತೆ ಮಾಡುತ್ತಿದ್ದಾರೆ ಎಂದು ಉಳ್ಳಾಲ ನಾಗರಿಕ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ದಿನಕರ್‌ ಉಳ್ಳಾಲ ಆರೋಪಿಸಿದರು.
Vijaya Karnataka Web 11ULLAL PROTEST_40


ಉಳ್ಳಾಲ ನಗರಸಭೆಯಲ್ಲಿಅನ್ಯಾಯ ಹಾಗೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಉಳ್ಳಾಲ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಭಾನುವಾರ ಉಳ್ಳಾಲ ಅಬ್ಬಕ್ಕ ವೃತ್ತದಿಂದ ಉಳ್ಳಾಲ ನಗರಸಭೆ ಕಚೇರಿ ತನಕ ನಡೆದ ಪ್ರತಿಭಟನಾ ಜಾಥಾ ಹಾಗೂ ನಗರಸಭೆ ಮುಂಭಾಗದಲ್ಲಿನಡೆದ ಪ್ರತಿಭಟನಾ ಸಭೆಯಲ್ಲಿಮಾತನಾಡಿದರು.

ಕ್ಷೇತ್ರದ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಯನ್ನು ಬಿಟ್ಟು ದೇಶದ ಕುರಿತು ಮಾತನಾಡುತ್ತಾ ಮಾಧ್ಯಮಗಳಲ್ಲಿಪ್ರಚಾರ ಪಡೆಯುತ್ತಿದ್ದಾರೆ. ವಸತಿ ಹಾಗೂ ವಾಣಿಜ್ಯ ಸಂಕೀರ್ಣಗಳಿಗೆ ನಗರಸಭೆಯಿಂದ ಬೇಕಾಬಿಟ್ಟಿ ಅನುಮತಿ ನೀಡಿ ಅವರಿಗೆ ಒಳಚರಂಡಿ ಯೋಜನೆ ಕಲ್ಪಿಸದೆ ಉಳ್ಳಾಲದಲ್ಲಿಸಮುದಾಯಗಳ ನಡುವೆ ಅಶಾಂತಿಗೆ ಕಾರಣವಾಗುತ್ತಿದ್ದಾರೆ. ನಗರಸಭೆ ಆಡಳಿತ ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಜನರು ಆಯ್ಕೆ ಮಾಡಿದ 37 ಕೌನ್ಸಿಲರ್‌ಗಳು ಕೆಲಸವಿಲ್ಲದಂತಾಗಿದ್ದಾರೆ ಎಂದರು.

ವಾರ್ಡ್‌ಗಳ ಅಭಿವೃದ್ಧಿಯ ಕುರಿತು ಅಧಿಕಾರಿಗಳು ಸದಸ್ಯರಿಗೆ ಸ್ಪಂದಿಸುತ್ತಿಲ್ಲ. ನಗರಸಭೆ ಮೇಲ್ದರ್ಜೆಗೆ ಏರಿದ ಬಳಿಕ 5 ಕೋಟಿ ರೂ. ವಿಶೇಷ ಅನುದಾನ ಹಾಗೂ 14ನೇ ಹಣಕಾಸು ಯೋಜನೆ ಬಂದರೂ ಸಮರ್ಪಕವಾಗಿ ಜಾರಿಯಾಗಿಲ್ಲ. ಕೇವಲ

2ಸಾವಿರ ರೂ. ವೆಚ್ವದ ದಾರಿದೀಪ ಹಾಕುವಲ್ಲಿಯೂ ನಗರಸಭೆ ಕಮಿಷನರ್‌ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಝಾಕಿರ್‌ ಹುಸೈನ್‌ ಮಾತನಾಡಿ, ಸ್ವಯಂಘೋಷಿತ ಆಸ್ತಿ ತೆರಿಗೆಯನ್ನು ರಾಜಕೀಯ ಪ್ರೇರಿತವಾಗಿ ಜಾರಿ ಮಾಡಲಾಗಿದೆ.ಅದು ಶಾಸಕರ ಹಾಗೂ ಅಧಿಕಾರಿಯ ಖಜಾನೆ ಸೇರುತ್ತಿದೆ ಎಂದು ಆರೋಪಿಸಿದರು.

ಅಧ್ಯಕ್ಷ ಯು.ಕೆ. ಮಹಮ್ಮದ್‌ ಮುಸ್ತಾಫ, ಸಮಿತಿ ಉಪಾಧ್ಯಕ್ಷ ಯಶವಂತ ಅಮೀನ್‌, ಭಗವಾನ್‌ ದಾಸ್‌, ಮುಸ್ತಾಕ್‌ ಅಹಮ್ಮದ್‌ ಪಟ್ಲ, ಹಮೀದ್‌ ಉಳ್ಳಾಲ್‌, ನಮಿತಾ ಗಟ್ಟಿ, ಅಶ್ರಫ್‌ ಬಾವಾ ಕೋಡಿ, ಶಬೀರ್‌ ಕಾಸಿಂ, ಇಮ್ತಿಯಾಝ್‌ ಕೋಟೆಪುರ ಹಾಗೂ ಕಬೀರ್‌ ಉಳ್ಳಾಲ ಉಪಸ್ಥಿತರಿದ್ದರು.

ತೊಕ್ಕೊಟ್ಟು ಜಂಕ್ಷನ್‌ ಬಳಿ ಸಾರ್ವಜನಿಕ ಶೌಚಾಲಯಕ್ಕಾಗಿ 1.5 ಲಕ್ಷ ರೂ.ಗಳ 2 ಬಿಲ್‌ ಪಾವತಿಯಾಗಿದೆ ಎಂದು ನಗರಸಭೆ ಹೇಳುತ್ತಿದೆ. ಇದುವರೆಗೆ ಶೌಚಾಲಯ ಆಗಿಲ್ಲ.
-ಭಗವಾನ್‌ ದಾಸ್‌

ಉಳ್ಳಾಲದ ಸಹಾಯಕ ಪೊಲೀಸ್‌ ಆಯುಕ್ತರು ಸಂಯಮದಿಂದ ವರ್ತಿಸಲಿ. ಉಳ್ಳಾಲ ಠಾಣಾಧಿಕಾರಿ ಅವರನ್ನು ನೋಡಿ ಕಲಿಯಲಿ. ಮೂಲ ವ್ಯವಸ್ಥೆ ಕುರಿತು ಕೇಳುವಾಗ ಉದ್ಧಟತನದಿಂದ ವರ್ತಿಸದಿರಿ.
-ಯಶವಂತ ಅಮೀನ್‌

ಮೂಲಸೌಕರ್ಯ ನೀರು ಬೇಕಾಗಿದೆ. ಕುಡಿಯುವ ನೀರಿನಲ್ಲಿರಾಜಕೀಯ ಮಾಡದಿರಿ. ಸೌಹಾರ್ದಯುತ ಪ್ರದೇಶ ಉಳ್ಳಾಲ
ಅಧಿಕಾರಿಗಳು ವರ್ತನೆಯನ್ನು ಹತೋಟಿಯಲ್ಲಿಟ್ಟುಕೊಂಡು ಹೋಗುವುದು ಸೂಕ್ತ.
-ಚಂದ್ರಹಾಸ್‌ ಪಂಡಿತ್‌ ಹೌಸ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ