ಆ್ಯಪ್ನಗರ

ನೆಲಮಂಗಲದಲ್ಲಿ ಭೀಕರ ರಸ್ತೆ ಅಪಘಾತ ಕಟೀಲು ದೇವಳ ಅರ್ಚಕರ ಪುತ್ರ ಸಹಿತ ಇಬ್ಬರು ಯುವಕರು ಮೃತ್ಯು

ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ತಾವರೆಕೆರೆ ಎಂಬಲ್ಲಿ ಬುಧವಾರ ಮುಂಜಾನೆ ಕಾರೊಂದಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಟೀಲು ದೇವಳದ ಪ್ರಧಾನ ಅರ್ಚಕರ ಪುತ್ರ ಸೇರಿದಂತೆ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Vijaya Karnataka 26 Jul 2018, 4:17 pm
ಬಜಪೆ/ಕೈಕಂಬ: ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ತಾವರೆಕೆರೆ ಎಂಬಲ್ಲಿ ಬುಧವಾರ ಮುಂಜಾನೆ ಕಾರೊಂದಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಟೀಲು ದೇವಳದ ಪ್ರಧಾನ ಅರ್ಚಕರ ಪುತ್ರ ಸೇರಿದಂತೆ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Vijaya Karnataka Web nelamangala road accident two died
ನೆಲಮಂಗಲದಲ್ಲಿ ಭೀಕರ ರಸ್ತೆ ಅಪಘಾತ ಕಟೀಲು ದೇವಳ ಅರ್ಚಕರ ಪುತ್ರ ಸಹಿತ ಇಬ್ಬರು ಯುವಕರು ಮೃತ್ಯು


ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಅವರ ಪುತ್ರ ಶ್ರೀನಿಧಿ ಆಸ್ರಣ್ಣ(20) ಹಾಗೂ ಗುರುಪುರ ಕೈಕಂಬದ ಹೋಟೆಲ್‌ ಮಾಲೀಕ ಹರಿ ಭಟ್‌ ಅವರ ಪುತ್ರಿ, ತುಮಕೂರಿನಲ್ಲಿರುವ ವಿದ್ಯಾಲಕ್ಷ್ಮೀ-ಗುರುಪ್ರಸಾದ್‌ ಬಲ್ಲಪುರಾಯ ದಂಪತಿಯ ಪುತ್ರ ಪ್ರಜ್ವಲ್‌ ಉಡುಪ(22) ಮೃತರು.

ಹರಿ ಭಟ್‌ ಅವರ ಇನ್ನೊಬ್ಬ ಪುತ್ರಿ ಪ್ರೇಮಲತಾ ಮತ್ತು ಕಟೀಲು ಭಾಸ್ಕರ ಉಡುಪ ಅವರ ಪುತ್ರ ಶರತ್‌ ಕಾರು ಚಲಾಯಿಸುತ್ತಿದ್ದು, ಘಟನೆಯಲ್ಲಿ ಅವರು ಗಂಭೀರ ಗಾಯಗೊಂಡಿದ್ದಾರೆ. ಉಳಿದಿಬ್ಬರಿಗೆ ಅಲ್ಪಸ್ವಲ್ಪ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಮೂಡುಬಿದಿರೆ ಸಮೀಪದ ಮಿಜಾರ್‌ನಲ್ಲಿರುವ ಯೆನೆಪೋಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರ್‌ ವ್ಯಾಸಂಗ ಮಾಡುತ್ತಿರುವ ಶರತ್‌ ಇಂಟರ್ನ್‌ಶಿಪ್‌ಗೆಂದು ಬೆಂಗಳೂರಿಗೆ ತೆರಳುವವನಿದ್ದ. ಬೆಂಗಳೂರಿಗೆ ತೆರಳುವ ಮುನ್ನ ಇವರೆಲ್ಲರೂ ತುಮಕೂರಿಗೆ ತೆರಳಿದ್ದರು. ಅಲ್ಲಿಂದ ಬೆಂಗಳೂರಿಗೆ ಕಾರಿನಲ್ಲಿ ವಾಪಸಾಗುತ್ತಿದ್ದಾಗ ನೆಲಮಂಗಲದ ತಾವರೆಕೆರೆ ಎಂಬಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ದುರ್ಘಟನೆ ನಡೆದಿದೆ.

ಪ್ರತಿಭಾವಂತ ಶ್ರೀನಿಧಿ: ಮೃತ ಶ್ರೀನಿಧಿ ಆಸ್ರಣ್ಣ ಕಟೀಲು ಶಿಕ್ಷ ಣ ಸಂಸ್ಥೆಗಳಲ್ಲಿ ಪಿಯುಸಿವರೆಗೆ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಯಕ್ಷ ಗಾನದ ಸವ್ಯಸಾಚಿ ಕಲಾವಿದ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದಲ್ಲಿ ಪ್ರಮುಖ ವೇಷಧಾರಿಯಾಗಿ, ಚೆಂಡೆ-ಮದ್ಧಳೆ ವಾದಕನಾಗಿಯೂ ಗಮನ ಸೆಳೆದಿದ್ದ. ಯಾವುದೇ ಯಕ್ಷ ಗಾನ ಬಯಲಾಟಗಳಲ್ಲಿ ಚೆಂಡೆ-ಮದ್ದಳೆಗಳನ್ನು ಸುಲಲಿತವಾಗಿ ನುಡಿಸಬಲ್ಲ ಉತ್ತಮ ಕಲಾವಿದನಾಗಿ ಗುರುತಿಸಿಕೊಂಡಿದ್ದ. ರಾಜ್ಯಮಟ್ಟದ ಕಬಡ್ಡಿ ಆಟಗಾರನಾಗಿದ್ದ ಶ್ರೀನಿಧಿ ಸ್ಥಳೀಯ ಬಜಪೆಯ ಪ್ರಸಿದ್ಧ ಜಾಗ್ವಾರ್‌ ಫ್ರೆಂಡ್ಸ್‌ ಕಬಡ್ಡಿ ತಂಡವೊಂದರ ಕಾಯಂ ಆಟಗಾರನಾಗಿದ್ದ. ಸದ್ಯ ನಿಟ್ಟೆ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಕಲಿಯುತ್ತಿದ್ದ.

ಕಟೀಲು ಬಂದ್‌, ಪ್ರತಿಭಾ ಕಾರಂಜಿ ಸ್ಥಳಾಂತರ: ಜನಸಾಮಾನ್ಯರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಆಕರ್ಷಕ ವ್ಯಕ್ತಿತ್ವದ ಶ್ರೀನಿಧಿ ಆಸ್ರಣ್ಣ ನಿಧನದ ಪ್ರಯುಕ್ತ ಕಟೀಲಿನ ಎಲ್ಲ ಶಿಕ್ಷ ಣ ಸಂಸ್ಥೆಗಳಿಗೆ ರಜೆ ಸಾರಲಾಗಿದೆ. ಅಲ್ಲದೆ ಕಟೀಲಿನ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದು, ಕಟೀಲಿನಲ್ಲಿ ನೀರವ ಮೌನ ಆವರಿಸಿದೆ.

ಈ ಮಧ್ಯೆ ಕಟೀಲು ಶಾಲೆಯಲ್ಲಿ ಬುಧವಾರ ನಡೆಯಬೇಕಾಗಿದ್ದ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಕಿನ್ನಿಗೋಳಿ ಶಾಲೆಗೆ ಸ್ಥಳಾಂತರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ