ಆ್ಯಪ್ನಗರ

ನೆಲ್ಲಿತೀರ್ಥ ಗುಹೆಯಲ್ಲಿತೀರ್ಥಸ್ನಾನ ಪ್ರಾರಂಭ

ಮಂಗಳೂರು ತಾಲೂಕು ಮುಚ್ಚೂರು ಗ್ರಾ.ಪಂ. ವ್ಯಾಪ್ತಿಯ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ದೇವಾ ಲಯಕ್ಕೊಳಪಟ್ಟ ನೆಲ್ಲಿತೀರ್ಥ ಗುಹಾಲಯ ದಲ್ಲಿ ಗುರುವಾರ ತುಲಾ ಸಂಕ್ರಮಣದ ಶುಭ ಮುಹೂರ್ತದಲ್ಲಿಗುಹಾಪ್ರವೇಶ ಹಾಗೂ ಗುಹಾ ತೀರ್ಥಸ್ನಾನಕ್ಕೆ ವಿಧಿಪೂರ್ವಕ ಚಾಲನೆ ನೀಡಲಾಯಿತು.

Vijaya Karnataka 18 Oct 2019, 5:00 am
ಬಜಪೆ: ಮಂಗಳೂರು ತಾಲೂಕು ಮುಚ್ಚೂರು ಗ್ರಾ.ಪಂ. ವ್ಯಾಪ್ತಿಯ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ದೇವಾ ಲಯಕ್ಕೊಳಪಟ್ಟ ನೆಲ್ಲಿತೀರ್ಥ ಗುಹಾಲಯ ದಲ್ಲಿ ಗುರುವಾರ ತುಲಾ ಸಂಕ್ರಮಣದ ಶುಭ ಮುಹೂರ್ತದಲ್ಲಿಗುಹಾಪ್ರವೇಶ ಹಾಗೂ ಗುಹಾ ತೀರ್ಥಸ್ನಾನಕ್ಕೆ ವಿಧಿಪೂರ್ವಕ ಚಾಲನೆ ನೀಡಲಾಯಿತು.
Vijaya Karnataka Web 17VM NELLITHEERTHA (2)_40

ಕ್ಷೇತ್ರದ ತಂತ್ರಿ ಮಜಲು ಸುಬ್ರಹ್ಮಣ್ಯ ತಂತ್ರಿಗಳು ಹಾಗೂ ಶ್ರೀ ಕ್ಷೇತ್ರ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳದ ಅರ್ಚಕ ಲಕ್ಷಿತ್ರ್ಮೕನಾರಾಯಣ ಆಸ್ರಣ್ಣ ದೀಪಬೆಳಗಿಸಿ ಗುಹಾಪ್ರವೇಶಕ್ಕೆ ಹಾಗೂ ಗುಹಾತೀರ್ಥ ಸ್ನಾನಕ್ಕೆ ಚಾಲನೆ ನೀಡಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಕೊಡೆತ್ತೂರು ಭುವನಾಭಿರಾಮ ಉಡುಪ, ಅರ್ಚಕ ಗಣಪತಿ ಭಟ್‌, ಪ್ರಸನ್ನ ಭಟ್‌ ನೆಲ್ಲಿತೀರ್ಥ, ಎನ್‌. ವೆಂಕಟರಾಜ ಭಟ್‌, ಎನ್‌.ವಿ.ಜಿ.ಕೆ.ಭಟ್‌, ನೆಲ್ಲಿತೀರ್ಥ ಶ್ರೀನಿವಾಸ ಭಟ್‌, ಆನಂದ ಕಾವ ಸಾಂತ್ರಬೈಲು, ಶೇಖರ ಅಜೆಕಾರು ಮತ್ತಿತರರು ಉಪಸ್ಥಿತರಿದ್ದರು.
ಗುಹೆ ಪ್ರವೇಶಕ್ಕೆ ಪ್ರತಿದಿನ ಬೆಳಗ್ಗೆ 6.30ರಿಂದ ಮಧ್ಯಾಹ್ನ 12.30ರವರೆಗೂ ಅವಕಾಶವಿದ್ದು ಗುಹೆಯ ಮೇಲ್ಪದರದಿಂದ ದೊಡ್ಡ ನೆಲ್ಲಿಕಾಯಿ ಗಾತ್ರದ ನೀರಹನಿಗಳು ತೊಟ್ಟಿಕ್ಕುತ್ತಲೇ ಇರುತ್ತದೆ. ಪೂರ್ತಿ ಗುಹೆ ಕ್ರಮಿಸಿದ ಬಳಿಕ ತೀರ್ಥ ಸ್ನಾನ ಮಾಡಿ ಅಲ್ಲಿರುವ ಶಿವಲಿಂಗಕ್ಕೆ ತೀರ್ಥ ನೀರು ಸಿಂಚನ ಮಾಡುವುದು ಕ್ರಮ. ಗುಹಾ ಪ್ರವೇಶಕ್ಕೂ ಮುನ್ನ ನಾಗಪ್ಪ ಕೆರೆಯಲ್ಲಿಮಿಂದು ಒದ್ದೆಬಟ್ಟೆಯಲ್ಲಿಮುಂಭಾಗದಲ್ಲಿದೊಂದಿ ಬೆಳಕು ಹಿಡಿದು ಸಾಗುವ ವ್ಯಕ್ತಿಯನ್ನು ಅನುಸರಿಸಿ ಹೋಗಬೇಕು. ಏಪ್ರಿಲ್‌ ತಿಂಗಳ ಸಂಕ್ರಮಣದಂದು ಗುಹಾಪ್ರವೇಶ ಮುಕ್ತಾಯಗೊಳ್ಳುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ