ಆ್ಯಪ್ನಗರ

ಘಟ್ಟದಲ್ಲಿ ಮಳೆಯಾಗದೆ ನೇತ್ರಾವತಿ ಬತ್ತಿದೆ, ಧರ್ಮಸ್ಥಳ ಕ್ಷೇತ್ರ ದರ್ಶನ ಮುಂದೂಡಿ: ಯಾತ್ರಿಕರಿಗೆ ಡಾ. ಹೆಗ್ಗಡೆ ಮನವಿ

ನಮಗೆ ಪಶ್ಚಿಮ ಘಟ್ಟದ ಮೇಲ್ಭಾಗದಿಂದ ನೀರು ಹರಿದು ಬರಬೇಕು. ಆದ್ರೆ ಅಲ್ಲಿ ಮಳೆಯಾಗದೇ ಇರುವ ಕಾರಣ ನಮಗೆ ನೀರಿಲ್ಲ. ಹವಾಮಾನ ಇಲಾಖೆ ಇನ್ನೂ ಹತ್ತು ದಿನ ಮಳೆ ಬರಲ್ಲ ಎಂದು ಸೂಚನೆ ಕೊಟ್ಟಿದೆ. ಹೀಗಾಗಿ ಕ್ಷೇತ್ರ ದರ್ಶನ ಮುಂದೂಡಿ ಎಂದು ಭಕ್ತರಲ್ಲಿ ವಿನಂತಿ ಮಾಡ್ತೇವೆ ಎಂದು ಹೆಗ್ಗಡೆ ಅವರು ಹೇಳಿದರು. ನೇತ್ರಾವತಿ ಸ್ನಾನ ಘಟ್ಟದ ಬಳಿ ಕಿಂಡಿ ಅಣೆಕಟ್ಟು ಕಟ್ಟಿದ ಕಾರಣ ತೀರ್ಥ ಮತ್ತು ಅಭಿಷೇಕಕ್ಕೆ ನೀರಿದೆ. ತೀರ್ಥ ಗುಂಡಿಯಲ್ಲೂ ನಾಲ್ಕು ಗುಂಡಿಗಳಲ್ಲಿ ನೀರು ಕಡಿಮೆ ಆಗಿದೆ. ಸ್ವಲ್ಪ ದಿನಗಳ ಕಾಲ ಸಾಕಾಗುತ್ತದೆ. ನೀರಿನ ಹರಿವು ಕಡಿಯಾಗುತ್ತಾ ಇದೆ. ಈ ಹಿಂದೆಯೂ ಈ ರೀತಿ ಆಗಿದೆ, ಇಷ್ಟು ತೀವ್ರವಾಗಿ ಆಗಿಲ್ಲ ಎಂದರು.

Vijaya Karnataka Web 18 May 2019, 1:15 pm
ಬೆಳ್ತಂಗಡಿ: ಇಡೀ ರಾಜ್ಯದಲ್ಲಿ ಬರದ ಲಕ್ಷಣವಿದ್ದು, ನೀರಿನ ಕೊರತೆಯಿದ್ದು, ಈ ವರ್ಷ ದ.ಕ ಜಿಲ್ಲೆಯಲ್ಲಿ ಭಾರೀ ನೀರಿನ ಕೊರತೆಯಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಶನಿವಾರ ಹೇಳಿದರು.
Vijaya Karnataka Web Nethravathi river


ನಮಗೆ ಪಶ್ಚಿಮ ಘಟ್ಟದ ಮೇಲ್ಭಾಗದಿಂದ ನೀರು ಹರಿದು ಬರಬೇಕು. ಆದ್ರೆ ಅಲ್ಲಿ ಮಳೆಯಾಗದೇ ಇರುವ ಕಾರಣ ನಮಗೆ ನೀರಿಲ್ಲ. ಹವಾಮಾನ ಇಲಾಖೆ ಇನ್ನೂ ಹತ್ತು ದಿನ ಮಳೆ ಬರಲ್ಲ ಎಂದು ಸೂಚನೆ ಕೊಟ್ಟಿದೆ. ಹೀಗಾಗಿ ಕ್ಷೇತ್ರ ದರ್ಶನ ಮುಂದೂಡಿ ಎಂದು ಭಕ್ತರಲ್ಲಿ ವಿನಂತಿ ಮಾಡ್ತೇವೆ ಎಂದು ಹೆಗ್ಗಡೆ ಅವರು ಹೇಳಿದರು.

ನೇತ್ರಾವತಿ ಸ್ನಾನ ಘಟ್ಟದ ಬಳಿ ಕಿಂಡಿ ಅಣೆಕಟ್ಟು ಕಟ್ಟಿದ ಕಾರಣ ತೀರ್ಥ ಮತ್ತು ಅಭಿಷೇಕಕ್ಕೆ ನೀರಿದೆ. ತೀರ್ಥ ಗುಂಡಿಯಲ್ಲೂ ನಾಲ್ಕು ಗುಂಡಿಗಳಲ್ಲಿ ನೀರು ಕಡಿಮೆ ಆಗಿದೆ. ಸ್ವಲ್ಪ ದಿನಗಳ ಕಾಲ ಸಾಕಾಗುತ್ತದೆ. ನೀರಿನ ಹರಿವು ಕಡಿಯಾಗುತ್ತಾ ಇದೆ. ಈ ಹಿಂದೆಯೂ ಈ ರೀತಿ ಆಗಿದೆ, ಇಷ್ಟು ತೀವ್ರವಾಗಿ ಆಗಿಲ್ಲ ಎಂದರು.

ಧರ್ಮಸ್ಥಳ ಯಾತ್ರಾರ್ಥಿಗಳಿಗೆ ಡಾ. ವೀರೇಂದ್ರ ಹೆಗ್ಗಡೆ ಮನವಿ


ಕೃಷಿಗೆ ಹೆಚ್ಚು ನೀರು ಬೇಕಾಗಿದ್ದು, ಇದು ಪ್ರಕೃತಿ ಮತ್ತು ಜನಜೀವನದ ಮಧ್ಯೆ ಪೈಪೋಟಿ. ನೀರಿನ ಬಳಕೆ ಕಡಿಮೆ ಮಾಡಿ ಜನರು ನೀರು ಉಳಿಸಬೇಕು.
ನೇತ್ರಾವತಿ ನದಿಯ ಪೂರಕ ನದಿಗಳಲ್ಲಿ ನೀರು ಇಂಗುತ್ತಿದೆ. ಉಪನದಿಗಳ ನೀರು ಇಂಗುತ್ತಿರುವ ಪರಿಣಾಮ ನೀರಿಗೆ ಸಮಸ್ಯೆ ‌ಆಗಿದೆ. ಕಾಡು ಉಳಿಸದೇ ಇರುವ ಕಾರಣ ಈ ಸಮಸ್ಯೆ ಎದುರಾಗಿದೆ ಎಂದರು.

ಸರ್ಕಾರ ಮತ್ತು ಜಲತಜ್ಞರು ಈ ಬಗ್ಗೆ ಯೋಜನೆ ಮಾಡಬೇಕು. ಅರಣ್ಯನಾಶ, ಸಕಲೇಶಪುರದ ಬಳಿ ಪಶ್ಚಿಮ ಘಟ್ಟ ಅರಣ್ಯದ ನಾಶ, ಉಪನದಿ ಹೇಮಾವತಿಯನ್ನು ಬರಡುಗೊಳಿಸಿದೆ ಅನ್ನೊದನ್ನು ಒಪ್ಪುತ್ತೇನೆ. ಮುಂದಿನ 15-20 ವರ್ಷಗಳ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ