ಆ್ಯಪ್ನಗರ

ಮಂಗಳೂರು: ನೂರಾರು ಕನಸು ಕಂಡಿದ್ದ ಕುಂಪಳದ ನವವಿವಾಹಿತ ಹೃದಯಾಘಾತದಿಂದ ಸಾವು!

ಮದುವೆ ಅಂದರೆ ಹೊಸ ಜೀವನದ ಆರಂಭ ಎನ್ನುತ್ತಾರೆ. ಹೀಗೆ ಹೊಸ ಜೀವನವನ್ನು ಆರಂಭಿಸಿದ ಅವರ ಜೀವನ ಈಗ ಕಣ್ಣೀರಿನಲ್ಲಿದೆ. ಹೌದು, ನವವಿವಾಹಿತ ಹೃದಯಾಘಾತದಿಂದ ಮೃತಪಟ್ಟಿದ್ದು, ತಾಯಿ, ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳೀಯವಾಹಿ ಎಲೆಕ್ಟ್ರೀಷಿಯನ್‌ ಕೆಲಸ ಮಾಡುತ್ತಿದ್ದ ಲವಿತ್‌ ಮೃತ ದುರ್ದೈವಿ.

Vijaya Karnataka Web 9 Mar 2021, 2:48 pm
ಮಂಗಳೂರು: ಅವರು ಮದುವೆಯಾಗಿ ನೂರಾರು ಕನಸು ಕಂಡಿದ್ದರು. ಉತ್ತಮವಾದ ಜೀವನ, ಮಗು, ಹೀಗೆ ನೂರಾರು ಕನಸುಗಳ ಭವಿಷ್ಯದ ಕನಸು ಕಂಡವರ ಜೀವನದಲ್ಲಿ ಜವರಾಯ ರುದ್ರ ತಾಂಡವ ಆಡಿಬಿಟ್ಟಿದ್ದಾನೆ. ಹೌದು, ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಕುಂಪಲದ ಬಾರ್ದೆ ನಿವಾಸಿ ಲವಿತ್ ಕುಮಾರ್ (34) ಸೋಮವಾರ ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದು ಕುಂಪಲ ಪರಿಸರ ಶೋಕ ಸಾಗರದಲ್ಲಿ ಮುಳುಗಿದೆ.
Vijaya Karnataka Web Lavith


ಎಲೆಕ್ಟ್ರೀಷಿಯನ್ ವೃತ್ತಿ ನಡೆಸುತ್ತಿದ್ದ ಲವಿತ್ ಕುಮಾರ್ ಕಳೆದ ಜ. 18ರಂದು ಸವಿತಾ ಎಂಬಾಕೆಯನ್ನು ವಿವಾಹವಾಗಿದ್ದರು. ಸೋಮವಾರ ರಾತ್ರಿ ಲವಿತ್ ಅವರಿಗೆ ತೀವ್ರ ಎದೆ ನೋವು ಕಾಣಿಸಿದ್ದು ಕೂಡಲೇ ತೊಕ್ಕೊಟ್ಟಿನ ನೇತಾಜಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಆದರೆ ಅಲ್ಲಿ ಲವಿತ್ ಕೊನೆಯುಸಿರೆಳೆದಿದ್ದಾರೆ. ಲವಿತ್ ಅವರ ಅಕಾಲಿಕ ಮರಣದಿಂದಾಗಿ ಆಘಾತಕ್ಕೊಳಗಾಗಿರುವ ತಾಯಿ,ಪತ್ನಿ ,ತಮ್ಮನ ಆಕ್ರಂದನ ಮುಗಿಲು ಮುಟ್ಟಿದೆ. ಇವರ ಊರು ನೀರವ ಸ್ಮಶಾನಕ್ಕೆ ಜಾರಿದೆ. ಸಂತೋಷದ ಮನೆಯಲ್ಲಿ ಕಣ್ಣೀರು ತಾಂಡವ ಆಡುತ್ತಿದೆ.

ಸುಳ್ಯ: ವೇದ ಪಾಠ ಕಲಿಯಲು ಬಂದಿದ್ದ ಯುವಕ ಸ್ನಾನಕ್ಕೆ ತೆರಳಿದಾಗ ನೀರಿನಲ್ಲಿ ಮುಳುಗಿ ಸಾವು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ