ಆ್ಯಪ್ನಗರ

ಪೆರಾಜೆಯಲ್ಲಿ ಸ್ಮಶಾನವಿಲ್ಲದೆ ಅಂತ್ಯಸಂಸ್ಕಾರಕ್ಕೆ ಪರದಾಟ

ಅಸೌಖ್ಯದಿಂದ ಮೃತಪಟ್ಟ ಪೆರಾಜೆಯ ವ್ಯಕ್ತಿಯೊಬ್ಬರನ್ನು ಗ್ರಾಮ ವ್ಯಾಪ್ತಿಯಲ್ಲಿ ಅಂತ್ಯಕ್ರಿಯೆ ನಡೆಸಲು ಜಾಗವಿಲ್ಲದೆ, ಬಳಿಕ ಸುಳ್ಯಕ್ಕೆ ತಂದು ಕೊಡಿಯಾಲಬೈಲಿನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

Vijaya Karnataka Web 20 May 2020, 10:45 am
ಸುಳ್ಯ: ಅಸೌಖ್ಯದಿಂದ ಮೃತಪಟ್ಟ ಪೆರಾಜೆಯ ವ್ಯಕ್ತಿಯೊಬ್ಬರನ್ನು ಗ್ರಾಮ ವ್ಯಾಪ್ತಿಯಲ್ಲಿ ಅಂತ್ಯಕ್ರಿಯೆ ನಡೆಸಲು ಜಾಗವಿಲ್ಲದೆ, ಬಳಿಕ ಸುಳ್ಯಕ್ಕೆ ತಂದು ಕೊಡಿಯಾಲಬೈಲಿನ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
Vijaya Karnataka Web -


ಪೆರಾಜೆ ಗ್ರಾಮದ ಇಂದಿರಾ ಆವಾಜ್‌ ಕಾಲನಿ ನಿವಾಸಿ ದೇರಣ್ಣ ಗೌಡ ಮಾವಂಜಿ(72)ಎಂಬವರು ಅಸೌಖ್ಯದಿಂದ ಮೇ 17ರಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತದೇಹವನ್ನು ಪೆರಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಡಲು ಸ್ಮಶಾನದ ವ್ಯವಸ್ಥೆ ಇಲ್ಲದಿರುವುದರಿಂದ ಅಕ್ಕ ಪಕ್ಕದವರು ಗ್ರಾ.ಪಂ.ಗೆ ವಿಷಯ ತಿಳಿಸಿದರು. ಗ್ರಾ.ಪಂ. ಅಧ್ಯಕ್ಷೆ, ಉಪಾಧ್ಯಕ್ಷರು, ಸದಸ್ಯರೂ ಸ್ಥಳಕ್ಕೆ ಬಂದು ಚರ್ಚಿಸಿದರು.

ವಿಷಯ ತಿಳಿದ ತಾ.ಪಂ. ಸದಸ್ಯ ನಾಗೇಶ್‌ ಕುಂದಲ್ಪಾಡಿ, ಮಡಿಕೇರಿ ತಹಸೀಲ್ದಾರ್‌ಗೆ ಫೋನ್‌ ಮಾಡಿ ಸ್ಮಶಾನಕ್ಕೆ ಗ್ರಾಮ ವ್ಯಾಪ್ತಿಯಲ್ಲಿ ಜಾಗ ಇನ್ನೂ ಗುರುತು ಮಾಡದಿರುವುದನ್ನು ಹೇಳಿ ತರಾಟೆಗೆ ತೆಗೆದುಕೊಂಡರು. ಬಳಿಕ ಪಂಚಾಯಿತಿಯಲ್ಲಿ ಸಮಾಲೋಚನೆ ನಡೆಸಿ, ಸುಳ್ಯದ ಕೊಡಿಯಾಲಬೈಲಿನಲ್ಲಿರುವ ಮುಕ್ತಿಧಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು.

ದೇರಣ್ಣ ಗೌಡ ಮಾವಂಜಿ ಮೂಲತಃ ಮಂಡೆಕೋಲು ಗ್ರಾಮದವರು. ಕೆಲ ವರ್ಷಗಳ ಹಿಂದೆ ಮಂಡೆಕೋಲಿನಿಂದ ಪೆರಾಜೆಗೆ ಬಂದು ಇಂದಿರಾ ಆವಾಜ್‌ ಕಾಲನಿಯಲ್ಲಿ ಮೂರು ಸೆಂಟ್ಸ್‌ ಜಾಗದಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ