ಆ್ಯಪ್ನಗರ

ಮುಳುಗಡೆಯಾದ ಡ್ರೆಜ್ಜರ್‌ನಿಂದ ಅಪಾಯವಿಲ್ಲ: ರಮಣ್‌

ನವ ಮಂಗಳೂರು ಬಂದರಿನಿಂದ 2.5 ನಾಟಿಕಲ್‌ ಮೈಲು ದೂರದಲ್ಲಿಲಂಗರು ಹಾಕಿದ್ದ ತ್ರಿದೇವ್‌ ಪ್ರೇಮ್‌ ಡ್ರೆಜ್ಜರ್‌ ಮುಳುಗಡೆಯಾಗಿದ್ದು, ಇದರಲಿ ತೈಲ ಸೋರಿಕೆ ಸೇರಿದಂತೆ ಯಾವುದೇ ಅಪಾಯ ಸಾಧ್ಯತೆ ಇಲ್ಲಎಂದು ಮಂಗಳೂರು ಬಂದರು ಮಂಡಳಿ ಅಧ್ಯಕ್ಷ ಎ.ವಿ. ರಮಣ್‌ ತಿಳಿಸಿದ್ದಾರೆ.

Vijaya Karnataka 7 Sep 2019, 5:17 pm
ಮಂಗಳೂರು: ನವ ಮಂಗಳೂರು ಬಂದರಿನಿಂದ 2.5 ನಾಟಿಕಲ್‌ ಮೈಲು ದೂರದಲ್ಲಿಲಂಗರು ಹಾಕಿದ್ದ ತ್ರಿದೇವ್‌ ಪ್ರೇಮ್‌ ಡ್ರೆಜ್ಜರ್‌ ಮುಳುಗಡೆಯಾಗಿದ್ದು, ಇದರಲಿ ತೈಲ ಸೋರಿಕೆ ಸೇರಿದಂತೆ ಯಾವುದೇ ಅಪಾಯ ಸಾಧ್ಯತೆ ಇಲ್ಲಎಂದು ಮಂಗಳೂರು ಬಂದರು ಮಂಡಳಿ ಅಧ್ಯಕ್ಷ ಎ.ವಿ. ರಮಣ್‌ ತಿಳಿಸಿದ್ದಾರೆ.
Vijaya Karnataka Web 6m-raman nmpt


ನವಮಂಗಳೂರು ಬಂದರಿನಲ್ಲಿಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ, ಸೆ.2ರ ರಾತ್ರಿ 2.30ರ ವೇಳೆಗೆ ಡ್ರೆಜ್ಜರ್‌ ಅವಘಡಕ್ಕೀಡಾಗಿದ್ದು, ತಕ್ಷಣ ಬಂದರು ಮಂಡಳಿ, ಕೋಸ್ಟ್‌ಗಾರ್ಡ್‌ನ 13 ಸಿಬ್ಬಂದಿ ಹಾಗೂ ದುರಸ್ತಿಗೆ ತೆರಳಿದ್ದ 7 ಕಾರ್ಮಿಕರನ್ನು ರಕ್ಷಿಸಲಾಗಿದೆ. ಸದ್ಯದ ಹವಾಮಾನ ಪರಿಸ್ಥಿತಿಯಲ್ಲಿಅವಶೇಷ ತೆರವು ಕಾರ್ಯಾಚರಣೆ ಕಷ್ಟ ಸಾಧ್ಯವಾಗಿದ್ದು, ಇದಕ್ಕೆ ಕಾಲಾವಕಾಶ ಬೇಕಾಗಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ನೌಕಾಪಡೆಯ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಲಾಗಿದೆ ಎಂದರು.

ಪ್ರತಿನಿತ್ಯ ನೀರು ಪರಿಶೀಲನೆ: ಸಮುದ್ರದ ನೀರನ್ನು ಪ್ರತಿದಿನ ಪರಿಶೀಲನೆಗೆ ಒಳಪಡಿಸಲಾಗುತ್ತಿದ್ದು, ತೈಲ ಜಿಡ್ಡಿನ ಅಂಶ ಪತ್ತೆಯಾಗಿಲ್ಲ. ಎಂಆರ್‌ಪಿಎಲ್‌, ಕೊಚ್ಚಿನ್‌ ಸಹಿತ ತಜ್ಞರ ನೆರವು ಯಾಚಿಸಲಾಗಿದೆ. ಈಗಾಗಲೇ ಡ್ರೆಜ್ಜಿಂಗ್‌ ಸಂಸ್ಥೆಯಾದ ಮರ್ಕೆಟರ್‌ ಸಂಸ್ಥೆಯ ನಿರ್ಲಕ್ಷ್ಯದ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.

ಡ್ರೆಜ್ಜರ್‌ನಲ್ಲಿ2-3 ತೈಲ ಸಂಗ್ರಹ ಟ್ಯಾಂಕ್‌ಗಳಿದ್ದು, ಅದರಲ್ಲಿತಲಾ 3 ಕಿಲೋ ಲೀಟರ್‌ ತೈಲ ಸಂಗ್ರಹವಿರುತ್ತದೆ. ಆದರೆ ಅವುಗಳು ಸೀಲ್ಡ್‌ ಆಗಿರುವ ಕಾರಣ ತೈಲ ಸೋರಿಕೆ ಅಥವಾ ತೈಲ ಹೊರಬರುವ ಸಾಧ್ಯತೆಯಿಲ್ಲ. ಸಿಂಗಪುರ ಮೂಲದ ಬಿಎಂಸಿ ಅವಶೇಷ ತೆರವು ಸಂಸ್ಥೆಯಿಂದ ಅವಶೇಷಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಮುಳುಗು ತಜ್ಞರು ಬಂದು ಈ ಟ್ಯಾಂಕ್‌ಗಳನ್ನು ಯಾವ ರೀತಿ ತೆರವುಗೊಳಿಸಬಹುದು ಎಂದು ಪರಿಶೀಲನೆ ನಡೆಸಲಿದ್ದಾರೆ ಎಂದರು.

ಚೆನ್ನೈ ಡೈರೆಕ್ಟರ್‌ ಜನರಲ್‌ ವಿಭಾಗದ ತಜ್ಞ ಅಧಿಕಾರಿ ಡಾ. ಆರ್‌.ಡಿ. ತ್ರಿಪಾಠಿ ಮಾತನಾಡಿ, ಡ್ರೆಜ್ಜರ್‌ನಲ್ಲಿರುವ ಡೀಸೆಲ್‌ನಿಂದ ಅಪಾಯವಿಲ್ಲ. ಮುಳುಗಿದ ಸ್ಥಳದಲ್ಲಿಆಂಧ್ರದ ಇಸ್ರೋ ಕೇಂದ್ರದ ಮೂಲಕ ಸ್ಯಾಟಲೈಟ್‌ ನಿಗಾ ಇರಿಸಲಾಗಿದೆ. ಡ್ರೆಜ್ಜರ್‌ ಹಡಗಿನ ಮಾಲೀಕತ್ವದ ಸಂಸ್ಥೆ ಮರ್ಕೆಟರ್‌ ಲಿ.ಗೆ ಹಡಗಿನ ಅವಶೇಷ ಹೊರ ತೆಗೆಯಲು ಬೇಕಾದ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಮೀನುಗಾರರಿಗೆ ಸೂಚನಾ ಗುರುತು
ಡ್ರೆಜ್ಜರ್‌ ಮುಳುಗಿರುವ ಪ್ರದೇಶದ ಸುತ್ತಮುತ್ತ ಮೀನುಗಾರಿಕೆ ಹಡಗುಗಳಿಗೆ ಯಾವುದೇ ತೊಂದರೆಯಾಗದಂತೆ ಅಪಾಯದ ಸಂಕೇತ ಅಳವಡಿಸಲಾಗಿದೆ. ರಾತ್ರಿ ಹಗಲು ಕೂಡ ಈ ಸಂಕೇತಗಳು ಗೋಚರವಾಗುತ್ತವೆ ಎಂದು ಮಂಗಳೂರು ಬಂದರು ಮಂಡಳಿ ಅಧ್ಯಕ್ಷ ಎ.ವಿ. ರಮಣ್‌ ತಿಳಿಸಿದ್ದಾರೆ.

ಅರ್ಧದಲ್ಲೇ ವಾಪಸ್‌: ಪತ್ರಕರ್ತರ ಜತೆ ಎರಡು ಟಗ್‌ ಮೂಲಕ ಚೆನ್ನೈ ಡೈರೆಕ್ಟರ್‌ ಜನರಲ್‌ ವಿಭಾಗದ ತಜ್ಞ ಅಧಿಕಾರಿ ಡಾ. ಆರ್‌.ಡಿ. ತ್ರಿಪಾಠಿ ಹಾಗೂ ಎನ್‌ಎಂಪಿಟಿ ಅಧಿಕಾರಿಗಳು ಡ್ರೆಜ್ಜಿಂಗ್‌ ಮುಳುಗಿದ ಸ್ಥಳದ ಸುತ್ತಮುತ್ತ ಪರಿಶೀಲನೆ ತೆರಳಿದರು. ಆದರೆ ಕಡಲಬ್ಬರ ಜೋರಾಗಿದ್ದಲ್ಲದೆ, ಡ್ರೆಜ್ಜಿಂಗ್‌ ಶುಕ್ರವಾರ ಸಂಪೂರ್ಣ ಮುಳುಗಡೆಯಾಗಿತ್ತು. ಈ ಹಿನ್ನೆಲೆಯಲ್ಲಿಅರ್ಧದಿಂದಲೇ ಟಗ್‌ ಹಿಂದಕ್ಕೆ ಪ್ರಯಾಣ ಬೆಳಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ