ವಿಜಯ್ ಕೋಟ್ಯಾನ್ ಮಂಗಳೂರು
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿ ಉತ್ತಮ ಫಸಲು ಕಂಡು ಬಂದಿದ್ದು, ಭತ್ತದ ಗದ್ದೆಗಳು ನಳನಳಿಸುತ್ತಿದೆ. ಕೊರೊನಾ ಆತಂಕದ ನಡುವೆ ಭತ್ತ ಕೃಷಿಯತ್ತ ಕರಾವಳಿಯ ಜನತೆ ಉತ್ಸುಕತೆ ತೋರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ 10,260 ಹೆಕ್ಟೇರ್ ಭತ್ತಕ್ಕೆ ಮೀಸಲಿರಿಸಲಾಗಿತ್ತು. ಆದರೆ 11,228.6 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಈ ವರ್ಷ 35,756 ಹೆಕ್ಟೇರ್ನಲ್ಲಿ ಭತ್ತದ ಕೃಷಿ ಮಾಡಲಾಗಿದೆ. ಈ ಬಾರಿ ಉತ್ತಮ ಮಳೆ, ಸಕಾಲದಲ್ಲಿ ಮುಂಗಾರು ಆಗಮನ ಹಾಗೂ ಭತ್ತದ ಕೃಷಿಯತ್ತ ಹೆಚ್ಚಿನ ಒಲವು ವ್ಯಕ್ತವಾಗಿರುವುದು ಭತ್ತದ ನಾಟಿಯಲ್ಲಿ ಉತ್ತಮ ಪ್ರಗತಿ ಕಂಡಿತ್ತು.
ಮಳೆ ಆತಂಕ
ಜೂನ್ ಅಂತ್ಯದಲ್ಲಿ ನಾಟಿಯಾದ ಭತ್ತದ ಬೆಳೆ ಸಾಮಾನ್ಯವಾಗಿ ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಈ ಬಾರಿ ಜೂನ್ ಪ್ರಾರಂಭದಲ್ಲೇ ಮಳೆಯಾದ ಕಾರಣ ಭತ್ತದ ತೆನೆ ಬಾಗಿ ನಿಂತಿದೆ. ಆದರೆ ಮಳೆ ಬಂದ ಕಾರಣ ಭತ್ತ ಕಟಾವು ಮಾಡಲಾಗದೆ ರೈತರು ತೊಂದರೆಗೊಳಗಾಗಿದ್ದಾರೆ. ಇದೇ ರೀತಿ ಒಂದು ವಾರ ಮುಂದುವರಿದರೆ ತೆನೆ ಉದುರಿ ಬೀಳಲು ಆರಂಭವಾಗಿ, ಕಷ್ಟಪಟ್ಟು ಬೆಳೆದ ಬೆಳೆ ಮಣ್ಣು ಸೇರಲಿದೆ ಎನ್ನುತ್ತಾರೆ ಭತ್ತ ಕೃಷಿಕ ಓಸ್ವಾಲ್ಡ್ ಬಂಟ್ವಾಳ.
ಕಾರ್ಮಿಕರ ಕೊರತೆ
ಒಂದೆಡೆ ಮಳೆ ಸಮಸ್ಯೆಯಾದರೆ ಭತ್ತ ಕೃಷಿ ಕಾರ್ಮಿಕರ ಸಮಸ್ಯೆ ಕಾಡುತ್ತಿದೆ. ಕರಾವಳಿ ಭಾಗದಲ್ಲಿ ಭತ್ತದ ಕೊಯ್ಲಿಗೆ ಕಳೆದೊಂದು ದಶಕದಿಂದ ಉತ್ತರ ಕರ್ನಾಟಕದ ಕಾರ್ಮಿಕರನ್ನು ಅವಲಂಬಿಸಲಾಗುತ್ತಿತ್ತು. ಆದರೆ ಈ ವರ್ಷ ಆ ಕಾರ್ಮಿಕರು ವಲಸೆ ಹೋದ ಕಾರಣ ಕಾರ್ಮಿಕರ ಕೊರತೆಯೂ ಕಾಡಲಾರಂಭವಾಗಿದೆ ಎನ್ನುತ್ತಾರೆ ಓಸ್ವಾಲ್ಡ್ ಬಂಟ್ವಾಳ.
ಬಿಟ್ಟೂ ಬಿಡದ ಮಳೆ: ಭತ್ತ ಕಟಾವಿಗೆ ಅಡಚಣೆ, ಅಡಕೆ ಬೆಳೆಗಾರರಿಗೂ ಸಮಸ್ಯೆ!
ಯಂತ್ರ ಬಳಸಿದರೆ ಬೈಹುಲ್ಲಿಗೆ ಕೊರತೆ
ಕರಾವಳಿ ಜಿಲ್ಲೆಯಲ್ಲೂ ಭತ್ತ ನಾಟಿ, ಕೊಯ್ಲಿಗೆ ಯಂತ್ರ ಬಳಸಲಾಗುತ್ತಿದೆ. ಆದರೆ ಭತ್ತದಲ್ಲಿ ಹೆಚ್ಚಿನ ಲಾಭವಿಲ್ಲದ ಕಾರಣ ರೈತರು ಕಾರ್ಮಿಕರನ್ನು ಬಳಸಿ ಕಟಾವು ಮಾಡಿ ಬೈಹುಲ್ಲು ಕಟ್ಟು ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ಹೀಗಾದಾಗ ಮಾತ್ರ ಭತ್ತ ಕೃಷಿ ರೈತನಿಗೆ ಸ್ವಲ್ಪ ಲಾಭದಾಯಕವಾಗಲು ಸಾಧ್ಯ. ಆದರೆ ಈ ಬಾರಿ ಕಾರ್ಮಿಕರ ಕೊರತೆಯಿಂದ ಯಂತ್ರ ಬಳಸಿ ಕಟಾವು ಮಾಡಿದರೆ ಉತ್ತಮ ಗುಣಮಟ್ಟದ ಬೈಹುಲ್ಲು ಸಿಗಲು ಸಾಧ್ಯವಿಲ್ಲ, ಬೇಡಿಕೆಯೂ ಇಳಿಕೆ. ಕಡಿಮೆ ದರಕ್ಕೆ ಮಾರಾಟ ಮಾಡಿ ನಷ್ಟ ಅನುಭವಿಸಬೇಕಾಗಬಹುದು. ಬಿರುಸಿನ ಮಳೆ ಬಂದು ಭತ್ತ ನೆಲ ಕಚ್ಚಿದರೆ ಯಂತ್ರದಲ್ಲೂ ಕೊಯ್ಲು ಸಾಧ್ಯವಿಲ್ಲ ಎನ್ನುತ್ತಾರೆ ಕೃಷಿಕ ಮೋಹನ್ ಗುರುಪುರ.
ಭಾರೀ ಮಳೆಗೆ ವಿಜಯಪುರದಲ್ಲಿ 160 ಮನೆ ಜಖಂ, ಬೆಳಗಾವಿಯಲ್ಲಿ ಜಮೀನಿನಲ್ಲೇ ಕೊಳೆಯುತ್ತಿದೆ ಫಸಲು
ವಾಯುಭಾರತ ಕುಸಿತದಿಂದ ಕರಾವಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಇದರಿಂದ ಭತ್ತದ ಕೃಷಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಭತ್ತ ಕಟಾವಿಗೆ ಅಣಿಯಾಗಿದ್ದರೂ ಮಳೆಯಿಂದ ಸಂಕಷ್ಟ ಎದುರಾಗಿದೆ. ಇನ್ನೊಂದೆಡೆ ಕಾರ್ಮಿಕರ ಕೊರತೆ ಈ ಬಾರಿಯೂ ಕಾಡುತ್ತಿದೆ. ಕರಾವಳಿ ಭಾಗದಲ್ಲಿ ಪ್ರತಿವರ್ಷ ಮಳೆಯಿಂದ ಕೃಷಿಕರು ತೊಂದರೆ ಅನುಭವಿಸುತ್ತಿದ್ದು, ಸರಕಾರ ಕರಾವಳಿ ಭಾಗದ ರೈತರನ್ನು ಉಳಿದ ಜಿಲ್ಲೆಗಳ ರೈತರಿಗೆ ಹೋಲಿಕೆ ಮಾಡದೆ ವಿಶೇಷ ಪರಿಹಾರ, ಅನುದಾನ ನೀಡಬೇಕು.
ಓಸ್ವಾಲ್ಡ್ ಪ್ರಕಾಶ್ ಫರ್ನಾಂಡಿಸ್, ಅಧ್ಯಕ್ಷರು, ರೈತ ಸಂಘ, ದ.ಕ.
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿ ಉತ್ತಮ ಫಸಲು ಕಂಡು ಬಂದಿದ್ದು, ಭತ್ತದ ಗದ್ದೆಗಳು ನಳನಳಿಸುತ್ತಿದೆ. ಕೊರೊನಾ ಆತಂಕದ ನಡುವೆ ಭತ್ತ ಕೃಷಿಯತ್ತ ಕರಾವಳಿಯ ಜನತೆ ಉತ್ಸುಕತೆ ತೋರಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ 10,260 ಹೆಕ್ಟೇರ್ ಭತ್ತಕ್ಕೆ ಮೀಸಲಿರಿಸಲಾಗಿತ್ತು. ಆದರೆ 11,228.6 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಈ ವರ್ಷ 35,756 ಹೆಕ್ಟೇರ್ನಲ್ಲಿ ಭತ್ತದ ಕೃಷಿ ಮಾಡಲಾಗಿದೆ. ಈ ಬಾರಿ ಉತ್ತಮ ಮಳೆ, ಸಕಾಲದಲ್ಲಿ ಮುಂಗಾರು ಆಗಮನ ಹಾಗೂ ಭತ್ತದ ಕೃಷಿಯತ್ತ ಹೆಚ್ಚಿನ ಒಲವು ವ್ಯಕ್ತವಾಗಿರುವುದು ಭತ್ತದ ನಾಟಿಯಲ್ಲಿ ಉತ್ತಮ ಪ್ರಗತಿ ಕಂಡಿತ್ತು.
ಮಳೆ ಆತಂಕ
ಜೂನ್ ಅಂತ್ಯದಲ್ಲಿ ನಾಟಿಯಾದ ಭತ್ತದ ಬೆಳೆ ಸಾಮಾನ್ಯವಾಗಿ ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಈ ಬಾರಿ ಜೂನ್ ಪ್ರಾರಂಭದಲ್ಲೇ ಮಳೆಯಾದ ಕಾರಣ ಭತ್ತದ ತೆನೆ ಬಾಗಿ ನಿಂತಿದೆ. ಆದರೆ ಮಳೆ ಬಂದ ಕಾರಣ ಭತ್ತ ಕಟಾವು ಮಾಡಲಾಗದೆ ರೈತರು ತೊಂದರೆಗೊಳಗಾಗಿದ್ದಾರೆ. ಇದೇ ರೀತಿ ಒಂದು ವಾರ ಮುಂದುವರಿದರೆ ತೆನೆ ಉದುರಿ ಬೀಳಲು ಆರಂಭವಾಗಿ, ಕಷ್ಟಪಟ್ಟು ಬೆಳೆದ ಬೆಳೆ ಮಣ್ಣು ಸೇರಲಿದೆ ಎನ್ನುತ್ತಾರೆ ಭತ್ತ ಕೃಷಿಕ ಓಸ್ವಾಲ್ಡ್ ಬಂಟ್ವಾಳ.
ಕಾರ್ಮಿಕರ ಕೊರತೆ
ಒಂದೆಡೆ ಮಳೆ ಸಮಸ್ಯೆಯಾದರೆ ಭತ್ತ ಕೃಷಿ ಕಾರ್ಮಿಕರ ಸಮಸ್ಯೆ ಕಾಡುತ್ತಿದೆ. ಕರಾವಳಿ ಭಾಗದಲ್ಲಿ ಭತ್ತದ ಕೊಯ್ಲಿಗೆ ಕಳೆದೊಂದು ದಶಕದಿಂದ ಉತ್ತರ ಕರ್ನಾಟಕದ ಕಾರ್ಮಿಕರನ್ನು ಅವಲಂಬಿಸಲಾಗುತ್ತಿತ್ತು. ಆದರೆ ಈ ವರ್ಷ ಆ ಕಾರ್ಮಿಕರು ವಲಸೆ ಹೋದ ಕಾರಣ ಕಾರ್ಮಿಕರ ಕೊರತೆಯೂ ಕಾಡಲಾರಂಭವಾಗಿದೆ ಎನ್ನುತ್ತಾರೆ ಓಸ್ವಾಲ್ಡ್ ಬಂಟ್ವಾಳ.
ಬಿಟ್ಟೂ ಬಿಡದ ಮಳೆ: ಭತ್ತ ಕಟಾವಿಗೆ ಅಡಚಣೆ, ಅಡಕೆ ಬೆಳೆಗಾರರಿಗೂ ಸಮಸ್ಯೆ!
ಯಂತ್ರ ಬಳಸಿದರೆ ಬೈಹುಲ್ಲಿಗೆ ಕೊರತೆ
ಕರಾವಳಿ ಜಿಲ್ಲೆಯಲ್ಲೂ ಭತ್ತ ನಾಟಿ, ಕೊಯ್ಲಿಗೆ ಯಂತ್ರ ಬಳಸಲಾಗುತ್ತಿದೆ. ಆದರೆ ಭತ್ತದಲ್ಲಿ ಹೆಚ್ಚಿನ ಲಾಭವಿಲ್ಲದ ಕಾರಣ ರೈತರು ಕಾರ್ಮಿಕರನ್ನು ಬಳಸಿ ಕಟಾವು ಮಾಡಿ ಬೈಹುಲ್ಲು ಕಟ್ಟು ಲೆಕ್ಕದಲ್ಲಿ ಮಾರಾಟ ಮಾಡುತ್ತಾರೆ. ಹೀಗಾದಾಗ ಮಾತ್ರ ಭತ್ತ ಕೃಷಿ ರೈತನಿಗೆ ಸ್ವಲ್ಪ ಲಾಭದಾಯಕವಾಗಲು ಸಾಧ್ಯ. ಆದರೆ ಈ ಬಾರಿ ಕಾರ್ಮಿಕರ ಕೊರತೆಯಿಂದ ಯಂತ್ರ ಬಳಸಿ ಕಟಾವು ಮಾಡಿದರೆ ಉತ್ತಮ ಗುಣಮಟ್ಟದ ಬೈಹುಲ್ಲು ಸಿಗಲು ಸಾಧ್ಯವಿಲ್ಲ, ಬೇಡಿಕೆಯೂ ಇಳಿಕೆ. ಕಡಿಮೆ ದರಕ್ಕೆ ಮಾರಾಟ ಮಾಡಿ ನಷ್ಟ ಅನುಭವಿಸಬೇಕಾಗಬಹುದು. ಬಿರುಸಿನ ಮಳೆ ಬಂದು ಭತ್ತ ನೆಲ ಕಚ್ಚಿದರೆ ಯಂತ್ರದಲ್ಲೂ ಕೊಯ್ಲು ಸಾಧ್ಯವಿಲ್ಲ ಎನ್ನುತ್ತಾರೆ ಕೃಷಿಕ ಮೋಹನ್ ಗುರುಪುರ.
ಭಾರೀ ಮಳೆಗೆ ವಿಜಯಪುರದಲ್ಲಿ 160 ಮನೆ ಜಖಂ, ಬೆಳಗಾವಿಯಲ್ಲಿ ಜಮೀನಿನಲ್ಲೇ ಕೊಳೆಯುತ್ತಿದೆ ಫಸಲು
ವಾಯುಭಾರತ ಕುಸಿತದಿಂದ ಕರಾವಳಿ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಇದರಿಂದ ಭತ್ತದ ಕೃಷಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಭತ್ತ ಕಟಾವಿಗೆ ಅಣಿಯಾಗಿದ್ದರೂ ಮಳೆಯಿಂದ ಸಂಕಷ್ಟ ಎದುರಾಗಿದೆ. ಇನ್ನೊಂದೆಡೆ ಕಾರ್ಮಿಕರ ಕೊರತೆ ಈ ಬಾರಿಯೂ ಕಾಡುತ್ತಿದೆ. ಕರಾವಳಿ ಭಾಗದಲ್ಲಿ ಪ್ರತಿವರ್ಷ ಮಳೆಯಿಂದ ಕೃಷಿಕರು ತೊಂದರೆ ಅನುಭವಿಸುತ್ತಿದ್ದು, ಸರಕಾರ ಕರಾವಳಿ ಭಾಗದ ರೈತರನ್ನು ಉಳಿದ ಜಿಲ್ಲೆಗಳ ರೈತರಿಗೆ ಹೋಲಿಕೆ ಮಾಡದೆ ವಿಶೇಷ ಪರಿಹಾರ, ಅನುದಾನ ನೀಡಬೇಕು.
ಓಸ್ವಾಲ್ಡ್ ಪ್ರಕಾಶ್ ಫರ್ನಾಂಡಿಸ್, ಅಧ್ಯಕ್ಷರು, ರೈತ ಸಂಘ, ದ.ಕ.