ಆ್ಯಪ್ನಗರ

ಈ ಬಾರಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಭತ್ತ ಬೆಳೆಗಾರರ ಕನಸಿಗೆ ಕೊಳ್ಳಿಯಿಟ್ಟ ಅಕಾಲಿಕ ಮಳೆ!

ಕರಾವಳಿ ಭಾಗದಲ್ಲಿ ಈಗ ಬಹುತೇಕ ಮನೆಗಳಲ್ಲಿ ಭತ್ತದ ಕಟಾವು ಪ್ರಕ್ರಿಯೆಯನ್ನು ಯಂತ್ರಗಳೇ ಮಾಡುತ್ತಿವೆ. ಬಿಟ್ಟು ಬಿಡದೆ ಕಾಡುವ‌ ಮಳೆರಾಯನಿಂದಾಗಿ ರೈತ ಈ ಯಂತ್ರಗಳಿಗೆ‌ ಒಗ್ಗಿಕೊಂಡಿದ್ದು, ಆದಷ್ಟು ಬೇಗ ಪಾರಾಗುವ‌ ಸಲುವಾಗಿ ಬೇಡಿಕೆ ಯಂತ್ರಗಳನ್ನು ಅವಲಂಬಿಸಿದ್ದಾನೆ. ಆದರೆ‌ ಈ ಬೇಡಿಕೆ‌ ಯಂತ್ರ‌ ಕಟಾವಿನಿಂದ‌ ಬೆಳೆ‌ ಕೈಗೆ‌ ಸಿಗುವುದು ಬಹಳ ಕಡಿಮೆ. ಅಷ್ಟಲ್ಲಾ ತಿಂಗಳು ನಾಟಿ ಮಾಡಿ, ಸಂಭ್ರಮಿಸುತ್ತಿದ್ದ, ರೈತನಿಗೆ ಕೊಯ್ಲಿನ ಸಮಯದಲ್ಲಿ ಸಮಸ್ಯೆಯಾದರೆ ಕೈಗೆ‌ ಬಂದ ತುತ್ತು ಬಾಯಿಗೆ‌ ಬರದಂತಾಗುತ್ತದೆ. ಹಾಗಾಗಿ ರೈತರು ಯಂತ್ರವನ್ನೇ ಅವಲಂಬಿಸುತ್ತಾರೆ.

Vijaya Karnataka Web 26 Oct 2021, 2:28 pm
ಮಂಗಳೂರು: ಕಟಾವಿಗೆ ಬಂದಿರೋ ಭತ್ತದ ತೆನೆ ಗದ್ದೆಯಲ್ಲಿ ಬಂಗಾರದಂತೆ ಹೊಳೆಯುತ್ತಿದೆ. ಬೆವರನ್ನು ರಕ್ತವನ್ನಾಗಿ ಹರಿಸಿ ಭತ್ತ ಬೆಳೆದ ರೈತ ಇನ್ನೇನು ಹಾಕಿದ ಬಂಡವಾಳ ಬಂದೇ ಬಿಡುತ್ತೆ ಅನ್ನೋವಷ್ಟರಲ್ಲಿ ಸುರಿದ ಧಾರಾಕಾರ ಮಳೆ ಬೆಳೆಗಾರನ ಕನಸಿಗೆ ಕೊಲ್ಲಿಯಿಟ್ಟಿದೆ. ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಭತ್ತದ ತೆನೆಗಳೆಲ್ಲ ಹೊಲದಲ್ಲಿ ಬೋರಲಾಗಿ ಮಲಗಿಬಿಟ್ಟಿದೆ. ಈ ಬಾರಿ ಕೊರೊನ ಸಂಕಷ್ಟ ಕಾಲದಲ್ಲೂ ಕರಾವಳಿಯ ರೈತರು ಪಡೀಲ್(ಹಡಿಲು) ಬಿದ್ದ ಗದ್ದೆಯನ್ನು ಖುಷಿಯಿಂದಲೇ ಉಳುಮೆ ಮಾಡಿದ್ದರು. ಆದರೆ‌ ಕಟಾವು ಮಾಡುವ ಸಮಯದಲ್ಲಿ ಸುರಿದ ಮಳೆಯ ಅವಾಂತರದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಜೊತೆಗೆ ನಿರಂತರ ತೈಲ ಬೆಲೆ ಏರಿಕೆಯಿಂದಾಗಿ ಖಾಸಗಿ ಕಟಾವು ಯಂತ್ರದ ಬೆಲೆ‌ ಕೂಡ ಈ ಬಾರಿ ಗಗನಕ್ಕೇರಿದ್ದು, ಕಟಾವು ಯಂತ್ರ ಕೂಡ ದುಬಾರಿ ಎನಿಸಿದೆ.
Vijaya Karnataka Web Paddy Growers


ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 11,774 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಉಡುಪಿಯಲ್ಲಿ 35,726 ಹೆಕ್ಟೇರ್ ಪ್ರದೇಶ ಭತ್ತಕ್ಕಾಗಿ ಮೀಸಲಿಡಲಾಗಿದೆ. ಈ ಬಾರಿ ಸಾವಿರಾರು ಹೆಕ್ಟೇರ್ ಪ್ರದೇಶಗಳಲ್ಲಿ ಭತ್ತ ಬೆಳೆಯಲಾಗಿದೆ. ಇದಕ್ಕೆ ಸೆಡ್ಡು ಹೊಡೆಯುವಂತೆ ಕಟಾವು ಶುರುವಾಗುವ ಸಮಯದಲ್ಲಿ ಅಕಾಲಿಕ ಮಳೆ ಆರ್ಭಟವು ಗುಡುಗು ಸಿಡಿಲಿನೊಂದಿಗೆ ಹೆಚ್ಚಳವಾಗಿದೆ. ವಾಯುಭಾರ ಕುಸಿತದ ಕಾರ ಸುರಿದ ಅಕಾಲಿಕ ಮಳೆಯಿಂದಾಗಿ ಕೆಲ ರೈತರು ಭತ್ತ ಕಟಾವು ಮಾಡುವುದನ್ನೇ ಸ್ಥಗಿತಗೊಳಿಸಿದ್ದಾರೆ. ಮಳೆ ಇನ್ನೂ ಮುಂದುವರಿದರೆ ಭತ್ತ ಕಟಾವು ಅಸಾಧ್ಯ. ಗದ್ದೆಯಲ್ಲೇ ಕೊಳೆತು ಹೋಗುವ ಸಾಧ್ಯತೆಗಳು ಜಾಸ್ತಿ ಇದೆ. ಅದರಲ್ಲೂ ಭತ್ತಕ್ಕೆ ಬಿಸಿಲು ಸೋಕದೆ ಫಸಲು ಹಳದಿ ಬಣ್ಣಕ್ಕೆ‌ ತಿರುಗಿಲ್ಲ. ಇದು ರೈತನ ಸಂಕಷ್ಟಕ್ಕೆ‌ ಇನ್ನಷ್ಟು ಎಡೆಮಾಡಿಕೊಟ್ಟಿದೆ.
ರೈತನ ಆರ್ಥಿಕ ಚಿತ್ತ ಕೆಡಿಸಿದ ಹಸ್ತ ಮಳೆ; ವರುಣಾರ್ಭಟಕ್ಕೆ ದಾಣಗೆರೆಯಲ್ಲಿ 2.50 ಕೋಟಿ ಬೆಳೆ ನಷ್ಟ!
ಸಾಂಪ್ರದಾಯಿಕ ಪಡಿಮಂಚದಿಂದ ದುಬಾರಿ ಕಟಾವು ಯಂತ್ರದೆಡೆಗೆ!
ಅಕಾಲಿಕ ಮಳೆಯ ಕಾರಣದಿಂದ ರೈತರು ಬೆಳೆಯನ್ನು ಬೇಗನೆ ಕಟಾವು ಮಾಡುವತ್ತ ಗಮನ ಹರಿಸುತ್ತಾರೆ. ಹಿಂದಿನ ಕಾಲದಲ್ಲಿ ಕರಾವಳಿ ಭಾಗದಲ್ಲಿ ಭತ್ತ ಒಡೆಯುವ ಪಡಿಮಂಚ ಇಟ್ಟು ಅದಕ್ಕೆ‌ ನಮಸ್ಕರಿಸಿ ಆ ದಿನದ ಕಾರ್ಯವನ್ನು ಸಂತೋಷದಿಂದ ಮಾಡುತ್ತಿದ್ದರು. ಕೃಷಿಯಾಧಾರಿತ ಕುಟುಂಬದ ಮನೆಯ ಸದಸ್ಯರೆಲ್ಲರ ಜೊತೆ ಊರಿನ ಆಳುಗಳೂ ಕೈ ಜೋಡಿಸಿ ಸಂತಸದಿಂದ ಭತ್ತದ ಕೆಲಸವನ್ನು ಮಾಡುತ್ತಿದ್ದರು. ಮರದಿಂದ ಮಾಡುವ ನಾಲ್ಕು ಕಾಲಿನ ಪಡಿಮಂಚದ ಆರು ಭಾಗದಲ್ಲಿ ಆರು ಜನರು ಭತ್ತದ ಕಟ್ಟನ್ನು ಒಡೆಯುತ್ತಿದ್ದರು. ಎಂತಹದ್ದೇ ಬಿಸಿಲನ್ನು ಲೆಕ್ಕಿಸದೆ ಭತ್ತ ಕಟಾವಿನ ಕಾರ್ಯವನ್ನುವು ತಮ್ಮ ಕೆಲಸವನ್ನು ಸಂತೋಷದಿಂದ ಮಾಡುತ್ತಿದ್ದರು. ಆದರೆ ಇದೀಗ ಕಾಲ ಬದಲಾದಂತೆ‌ ಇದೀಗ ಆ ಪಡಿಮಂಚದ ಜಾಗವನ್ನು ಯಂತ್ರಗಳು ಆಕ್ರಮಿಸಿಕೊಂಡಿವೆ. ಕರಾವಳಿ ಭಾಗದಲ್ಲಿ ಈಗ ಬಹುತೇಕ ಮನೆಗಳಲ್ಲಿ ಭತ್ತದ ಕಟಾವು ಪ್ರಕ್ರಿಯೆಯನ್ನು ಯಂತ್ರಗಳೇ ಮಾಡುತ್ತಿವೆ. ಬಿಟ್ಟು ಬಿಡದೆ ಕಾಡುವ‌ ಮಳೆರಾಯನಿಂದಾಗಿ ರೈತ ಈ ಯಂತ್ರಗಳಿಗೆ‌ ಒಗ್ಗಿಕೊಂಡಿದ್ದು, ಆದಷ್ಟು ಬೇಗ ಪಾರಾಗುವ‌ ಸಲುವಾಗಿ ಬೇಡಿಕೆ ಯಂತ್ರಗಳನ್ನು ಅವಲಂಬಿಸಿದ್ದಾನೆ. ಆದರೆ‌ ಈ ಬೇಡಿಕೆ‌ ಯಂತ್ರ‌ ಕಟಾವಿನಿಂದ‌ ಬೆಳೆ‌ ಕೈಗೆ‌ ಸಿಗುವುದು ಬಹಳ ಕಡಿಮೆ. ಅಷ್ಟಲ್ಲಾ ತಿಂಗಳು ನಾಟಿ ಮಾಡಿ, ಸಂಭ್ರಮಿಸುತ್ತಿದ್ದ, ರೈತನಿಗೆ ಕೊಯ್ಲಿನ ಸಮಯದಲ್ಲಿ ಸಮಸ್ಯೆಯಾದರೆ ಕೈಗೆ‌ ಬಂದ ತುತ್ತು ಬಾಯಿಗೆ‌ ಬರದಂತಾಗುತ್ತದೆ. ಹಾಗಾಗಿ ರೈತರು ಯಂತ್ರವನ್ನೇ ಅವಲಂಬಿಸುತ್ತಾರೆ.
ದೀಪಾವಳಿಗೆ ವಸ್ತುಗಳ ಬೆಲೆ ಏರಿಕೆ ಗಿಫ್ಟ್; ಗಗನಕ್ಕೇರಿದ ತರಕಾರಿ, ಅಗತ್ಯ ವಸ್ತುಗಳ ಬೆಲೆ!
ಪಡಿಮಂಚದ ಕಟಾವು ಆಧುನಿಕ ರೈತರಿಗೆ ತಿಳಿದಿಲ್ಲದ‌ ಕಾರಣ ಯಂತ್ರವನ್ನು ಅವಲಂಬಿಸಿದ್ದಾರೆ. ಈ ಯಂತ್ರದ ದುಬಾರಿ ವೆಚ್ಚ ಹೇಳತೀರದು. ಕಟಾವು ಯಂತ್ರಕ್ಕೆ ಸಾಮಾನ್ಯವಾಗಿ ಗಂಟೆಯೊಂದಕ್ಕೆ ಸಾವಿರ ರೂಪಾಯಿ ವೆಚ್ಚ ತಗುಲಿದರೆ, ಮಳೆಯ ಕಾರಣದಿಂದಲೂ ಸಂಕಷ್ಟ ಉಂಟಾಗಿದೆ. ಮತ್ತೊಂದೆಡೆ ಭತ್ತದ ಕೆಲಸ ಮಾಡುವ ಕೂಲಿ ಕಾರ್ಮಿಕರ ಸಂಖ್ಯೆಯೂ ಗಮನಾರ್ಹ ರೀತಿಯಲ್ಲಿ ಕಡಿಮೆಯಾಗಿದೆ. ಇದೆಲ್ಲದರ ಹೊರೆ ತಪ್ಪಿಸಲು ಯಂತ್ರಗಳ ಮೊರೆ ಹೋಗೋದು ಅನಿವಾರ್ಯ ಅಂತಾರೆ ಕೆಲ ರೈತರು.

ತಪ್ಪದ‌ ಹಂದಿ, ಮಂಗ, ನವಿಲಿನ ಕಾಟ:
ಒಂದೆಡೆ ಮಳೆ, ಇನ್ನೊಂದೆಡೆ ಕಾಡಿನ ಮಂಗ ಮತ್ತು ನವಿಲುಗಳ ಕಾಟ. ಎತ್ತ ನೋಡಿದರೂ ಇವುಗಳೇ ತುಂಬಿರುವಾಗ ರೈತ‌ರು ಆದಷ್ಟು ಬೇಗ ಭತ್ತ ಕಟಾವಾದರೆ‌ ಸಾಕು ಎಂಬಂತಿರುತ್ತಾರೆ. ಯಾವುದೇ ಹೆದರಿಕೆ ಇಲ್ಲದೆ ತಮ್ಮ ಕಾರ್ಯಗಳನ್ನು ಅವು ಮಾಡುತ್ತಿದ್ದರೆ, ಇತ್ತ ಕಡೆ ರೈತರು ಅವುಗಳಿಗೆ ಶಾಪ ಹಾಕುತ್ತಿರುತ್ತಾರೆ. ಕೆಲವೊಂದು ಬಾರಿ ಅವುಗಳನ್ನು ಓಡಿಸಲು ಹೋಗಿ ಅದರಿಂದ ಒದೆ ತಿಂದು ಪಾರಾದ ಸಂಗತಿಯೂ ಉಂಟು. ಮಳೆ, ದುಬಾರಿ ಕಟಾವು ಯಂತ್ರ ಇವುಗಳ ಪ್ರಭಾವದ ನಡುವೆ ಕೋತಿ, ನವಿಲು, ಹಂದಿಗಳು ಇನ್ನಷ್ಟು ರೈತರ ಲೆಕ್ಕಾಚಾರವನ್ನು ಮೇಲೆಕೆಳಗೆ ಮಾಡುತ್ತವೆ. ದಿನದ 24 ಗಂಟೆಯೂ ಇವುಗಳನ್ನು ಓಡಿಸುವುದೇ ಫಜೀತಿಯಾಗಿದೆ. ಸರ್ಕಾರದ ಆದೇಶಕ್ಕೆ ಬೆಲೆ ಕೊಟ್ಟು ಯಾವುದೇ ಪ್ರಾಣಿಗೂ ಹಿಂಸೆ ಮಾಡದೆ, ಅವುಗಳನ್ನು ಬರೀ ಓಡಿಸುವತ್ತ ರೈತರು ಸೋತು ಹೋಗಿರುತ್ತಾರೆ. ಹೀಗೆ ಅನ್ನದಾತ ಜೇಬಿಗೆ ಬಿಸಿ ಮುಟ್ಟಿಸುವ‌ ಬಾಡಿಗೆ ಯಂತ್ರಗಳ ಜತೆ ಮಳೆ. ಇಷ್ಟೇನಾ ಆದು ಅಲ್ಲದೆ ಕೋತಿ, ಹಂದಿ, ನವಿಲುಗಳು ನಾಮುಂದು ತಾಮುಂದು ಎಂಬಂತಿರುತ್ತವೆ.
ಬೆಳೆ ಕಟಾವು ಮಾಡಲು ಬರುವ‌ ಕೂಲಿ ಕಾರ್ಮಿಕರ ವೇತನ ಕೂಡ ಜಾಸ್ತಿಯಾಗಿದೆ. ಇದರೊಂದಿಗೆ ಬೆಳೆಯಲ್ಲಿ ಸಿಗುವ ಲಾಭ ಕಡಿಮೆಯಾಗುತ್ತಿದೆ. ಬೆಳೆ ಕೊಯ್ಯಲು ಭತ್ತ ಕಟಾವು ಯಂತ್ರ ತಂದರೆ ಅದರ ಬಾಡಿಗೆಯೂ ಹೇಳತೀರದು. ಕಾಡು ಪ್ರಾಣಿಗಳ ಹಾವಳಿ ಮತ್ತು ಮಳೆಯಿಂದ ಬೆಳೆ ಉಳಿದರೆ‌ ಸಾಕೆನ್ನುವಂತಾಗಿದೆ.
ವಿಠ್ಠಲ ಶೆಟ್ಟಿ, ಪೂವಾಳ, ಕೃಷಿಕರು

ಹೀಗೆ ರೈತರಿಗೆ‌ ಸಂಕಷ್ಟ ಒಂದಲ್ಲ ಒಂದು ರೀತಿಯಲ್ಲಿ ಬೆಂಬಿಡದೆ ಕಾಡುತ್ತಿರುತ್ತದೆ. ತಪ್ಪದ‌ ಸಂಕಷ್ಟದಲ್ಲಿ ಕರಾವಳಿ ಭತ್ತದ ಬೆಳೆಗಾರ ಒಂದು ಕಡೆಯಾದರೆ, ಆತನಿಗೆ‌ ಸವಾಲೊಡ್ಡುವ ಮಳೆರಾಯನ ಆರ್ಭಟ ಇನ್ನೊಂದು ಕಡೆ. ಭತ್ತ ಕಟಾವು ಯಂತ್ರ ಬೆಲೆ‌ ಏರಿಕೆಯಿಂದ ಫಸಲು ಬಂದ‌ ಬೆಳೆಯನ್ನು ಯಾವ ರೀತಿ ಮಡಿಲು ತುಂಬಿಸೋದು ಎಂಬ ಗೊಂದಲ ಭತ್ತ ಬೆಳೆದ ರೈತನಿಗೆ‌ ಒಂದು ಪ್ರಶ್ನಾರ್ಥಕವಾಗಿ ಬಿಟ್ಟಿದೆ. ಹಾಗಾಗಿ ಭತ್ತ ಬೆಳೆಗೆ ಸರ್ಕಾರದ ಬೆಂಬಲ ಅಗತ್ಯವಾಗಿದೆ. ಕಾರ್ಮಿಕರ ಸಮಸ್ಯೆಯನ್ನು ರೈತ ಎದುರಿಸಬೇಕಾಗುತ್ತದೆ. ಇದರ ಜತೆ ಭತ್ತದ ಬೆಳೆಗೆ ಸೂಕ್ತ ಬೆಂಬಲ ಸರ್ಕಾಲದ ಕಡೆಯಿಂದ ಆಗಬೇಕಿದೆ. ರೈತನ ಸಂಕಷ್ಟಕ್ಕೆ‌ ಸರ್ಕಾರ ಆದಷ್ಟು ಬೇಕು ಸ್ಪಂದಿಸಬೇಕು. ಮತ್ತು ರೈತನ ಕೂಗಿಗೆ ಸರ್ಕಾರ‌ ಧ್ವನಿಯಾಗಬೇಕು.

ಬರಹ: ವೈಶಾಲಿ ಶೆಟ್ಟಿ, ಪೂವಾಳ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ