ಆ್ಯಪ್ನಗರ

ಪರ್ಪುಂಜ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಹಾಯಕಿ ಇಲ್ಲ

ಒಳಮೊಗ್ರು ಗ್ರಾಮದ ಪರ್ಪುಂಜ ಉಪ ಆರೋಗ್ಯ ಕೇಂದ್ರದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ನೇಮಕವಾಗದ ಕಾರಣ ಕಳೆದ ಒಂದು ವರ್ಷದಲ್ಲಿ ಕೇಂದ್ರದಲ್ಲಿ ಮೌನ ಆವರಿಸಿದ್ದು, ಗ್ರಾಮದ ಗರ್ಭಿಣಿ ಮಹಿಳೆಯರು ತಾಯಿ ಕಾರ್ಡು ಪಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Vijaya Karnataka 25 Mar 2018, 5:00 am
ಕುಂಬ್ರ: ಒಳಮೊಗ್ರು ಗ್ರಾಮದ ಪರ್ಪುಂಜ ಉಪ ಆರೋಗ್ಯ ಕೇಂದ್ರದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ನೇಮಕವಾಗದ ಕಾರಣ ಕಳೆದ ಒಂದು ವರ್ಷದಲ್ಲಿ ಕೇಂದ್ರದಲ್ಲಿ ಮೌನ ಆವರಿಸಿದ್ದು, ಗ್ರಾಮದ ಗರ್ಭಿಣಿ ಮಹಿಳೆಯರು ತಾಯಿ ಕಾರ್ಡು ಪಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಗ್ರಾಮಸಭೆಯಲ್ಲಿ ಗ್ರಾಮಸ್ಥರು ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ಎತ್ತಿಕೊಂಡಿದ್ದರೂ ಅಧಿಕಾರಿಗಳು ಮಾತ್ರ ಜವಾಬ್ದಾರಿ ಮರೆತಿರುವ ಕಾರಣ ಗ್ರಾಮಸ್ಥರು ಆರೋಗ್ಯ ಇಲಾಖೆಯ ವಿರುದ್ದ ಆಕ್ರೋಶಗೊಂಡಿದ್ದಾರೆ.
Vijaya Karnataka Web parpunja health center
ಪರ್ಪುಂಜ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಸಹಾಯಕಿ ಇಲ್ಲ


ಪರ್ಪುಂಜ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಕಾರ್ಯಕರ್ತೆಯಾಗಿದ್ದ ಪ್ರಮೀಳಾ ಅವರು ಬಡ್ತಿಗೊಂಡು ಸುಳ್ಯಕ್ಕೆ ವರ್ಗಾವಣೆಯಾಗಿದ್ದಾರೆ. ಅವರ ಬದಲಿಗೆ ತಿಂಗಳೊಳಗೆ ಕಾರ್ಯಕರ್ತೆಯನ್ನು ನೇಮಕ ಮಾಡುವುದಾಗಿ ಆರೋಗ್ಯ ಇಲಾಖೆ ಗ್ರಾಮಸ್ಥರಿಗೆ ತಿಳಿಸಿತ್ತು. ಆದರೆ ಪ್ರಮೀಳಾ ಅವರು ಸುಳ್ಯಕ್ಕೆ ವರ್ಗಾವಣೆಗೊಂಡು ವರ್ಷಗಳು ಕಳೆದಿದ್ದು ಪರ್ಪುಂಜ ಉಪ ಆರೋಗ್ಯ ಕೇಂದ್ರಕ್ಕೆ ಕಾರ್ಯಕರ್ತೆಯನ್ನು ಇಲಾಖೆ ನೇಮಕ ಮಾಡಿಲ್ಲ, ಈ ಕುರಿತು ಇಲಾಖೆಯನ್ನು ಕೇಳಿದರೆ ನಾನಾ ಕಾರಣಗಳನ್ನು ಹೇಳಿ ನೇಮಕ ಮಾಡುವುದು ಸರಕಾರದ ಕೆಲಸವಾಗಿದೆ ಎಂದು ಸುಮ್ಮನಾಗುತ್ತಿದ್ದಾರೆ.

ತಾಯಿ ಕಾರ್ಡು ನೀಡುವವರೇ ಇಲ್ಲ

ಗ್ರಾಮದಲ್ಲಿ ಗರ್ಭಿಣಿ ಮಹಿಳೆಯರಿಗೆ ತಾಯಿ ಕಾರ್ಡು ನೀಡುವ ಕೆಲಸ ಸ್ಥಗಿತಗೊಂಡಿದೆ. ಗರ್ಭಿಣಿಯರಿಗೆ ಸರಕಾರದ ವತಿಯಿಂದ ತಾಯಿ ಕಾರ್ಡು ದೊರೆಯುತ್ತದೆ. ಮಹಿಳೆ ಗರ್ಭ ಧರಿಸಿದ ತಕ್ಷ ಣವೇ ಆಕೆಯನ್ನು ಸಂದರ್ಶಿಸಿ ಆಕೆಯ ಕೌಟುಂಬಿಕ ಮಾಹಿತಿ ಪಡೆದು ಆಕೆಯ ಆರೋಗ್ಯದ ಕುರಿತು ಮಾಹಿತಿ ನೀಡುವುದು ಮತ್ತು ಸರಕಾರದ ಸೌಲಭ್ಯದ ಕುರಿತು ಮಾಹಿತಿ ನೀಡುವುದು ಆರೋಗ್ಯ ಸಹಾಯಕಿಯ ಕರ್ತವ್ಯವಾಗಿದೆ. ಕಾಲಕಾಲಕ್ಕೆ ನೀಡಬೇಕಾದ ಇಂಜೆಕ್ಷ ನ್‌ ಮತ್ತು ಔಷಧಿಗಳ ಕುರಿತು ಮಾಹಿತಿ ನೀಡಿ ಮಹಿಳೆ ಮತ್ತು ಮಗು ಆರೋಗ್ಯದಿಂದ ಇರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಆರೋಗ್ಯ ಸಹಾಯಕಿ ಮೇಲಿದೆ. ಈ ಸೌಲಭ್ಯದಿಂದ ಒಳಮೊಗ್ರು ಗ್ರಾಮದ ಪರ್ಪುಂಜ, ಮಗಿರೆ, ಕಡ್ತಿಮಾರ್‌, ಕುಟಿನೋಪ್ಪಿನಡ್ಕ ಮತ್ತು ಪರ್ಪುಂಜ ಭಾಗದ ಗ್ರಾಮಸ್ಥರು ವಂಚಿತರಾಗಿದ್ದಾರೆ. ಗ್ರಾಮದ ಪ್ರತಿ ಮನೆಗೂ ಆಶಾ ಕಾರ್ಯಕರ್ತೆಯರು ತಪ್ಪದೇ ಸಂದರ್ಶನ ಮಾಡುತ್ತಿದ್ದಾರೆ. ಆದರೆ, ಅವರು ಆರೋಗ್ಯ ಸಹಾಯಕಿಯರಿಗೆ ಸಹಾಯಕ್ಕಾಗಿ ಇರುವವರೇ ಹೊರತು ಸಹಾಯಕಿಯರು ಮಾಡುವ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡುವಂತಿಲ್ಲ. ಆರೋಗ್ಯ ಸಹಾಯಕಿಯನ್ನು ನೇಮಕ ಮಾಡದೆ ಇರುವ ವಿಚಾರ ಕಳೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಕ್ರೋಶಕ್ಕೂ ಕಾರಣವಾಗಿತ್ತು. ಸರಕಾರ ಕೇವಲ ಸೌಲಭ್ಯವನ್ನು ನೀಡುತ್ತಿದೆ ವಿನ ಅದನ್ನು ಗ್ರಾಮದ ವ್ಯಕ್ತಿಗೆ ತಲುಪಿಸುವಲ್ಲಿ ಜವಾಬ್ದಾರಿಯನ್ನು ಮರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಗ್ರಾಮದ ಮಹಿಳೆಯರಿಗೆ ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ತೊಂದರೆಯಾಗಿದ್ದು ನನ್ನ ಗಮನಕ್ಕೆ ಬಂದಿಲ್ಲ. ತಕ್ಷ ಣವೇ ಆರೋಗ್ಯ ಸಹಾಯಕಿಯನ್ನು ನೇಮಕ ಮಾಡುವಂತೆ ಜಿಲ್ಲಾ ಆರೋಗ್ಯಾಧಿಕರಿಗೆ ಸೂಚನೆಯನ್ನು ನೀಡುತ್ತೇನೆ. ಅಧಿಕಾರಿಗಳ ನಿರ್ಲಕ್ಷ ್ಯ ಮಾಡಿದರೆ ಇಲಾಖೆ ಗಮನಕ್ಕೆ ತರುತ್ತೇನೆ. ಈ ವಿಚಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡುತ್ತೇನೆ
- ಶಕುಂತಳಾ ಟಿ ಶೆಟ್ಟಿ ಶಾಸಕರು ಪುತ್ತೂರು

ಪರ್ಪುಂಜಕ್ಕೆ ಪ್ರಭಾರವಾಗಿ ಕೈಕಾರದ ಆರೋಗ್ಯ ಕಾರ್ಯಕರ್ತೆಯನ್ನು ನೇಮಕ ಮಾಡಲಾಗಿದೆ. ಅವರು ಎಲ್ಲ ಕಡೆ ತೆರಳಬೇಕಿತ್ತು. ಹೊಸ ಆರೋಗ್ಯ ಸಹಾಯಕಿಯನ್ನು ಕೂಡಲೇ ನೇಮಕ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ. ಡಾ. ಅಶೋಕ್‌ಕುಮಾರ್‌ ರೈ, ತಾಲೂಕು ಆರೋಗ್ಯಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ