ಆ್ಯಪ್ನಗರ

ಬಂಡವಾಳ ಹಾಕಲು ಜನ ಹಿಂದೇಟು: ಶಾಸಕ ಯು.ಟಿ. ಖಾದರ್‌

ಕೈಗಾರಿಕೋದ್ಯಮಿಗಳಿಂದ ಇರಾ ಕೈಗಾರಿಕಾ ಪ್ರದೇಶದಲ್ಲಿ ಬೇಡಿಕೆ ಜಾಗಕ್ಕೆ ಬೇಡಿಕೆ ಸಲ್ಲಿಸಿದ್ದರೂ ಪ್ರಸ್ತುತ ದಿನಗಳಲ್ಲಿಇರುವ ಕೈಗಾರಿಕೆಗಳೇ ಬಂದ್‌ ಆಗಿರುವುದರಿಂದ ಬಂಡವಾಳ ಹಾಕಲು ಜನ ಹಿಂದೇಟು ಹಾಕುತ್ತಿದ್ದಾರೆ. ಅದರಿಂದಾಗಿ ಇರಾ ಕೈಗಾರಿಕಾ ಪ್ರದೇಶಕ್ಕೂ ಅಡ್ಡಿಯಾಗಿದೆ ಎಂದು ಶಾಸಕ ಯು.ಟಿ. ಖಾದರ್‌ ಹೇಳಿದರು.

Vijaya Karnataka 10 Dec 2019, 5:00 am
ಕೊಣಾಜೆ: ಕೈಗಾರಿಕೋದ್ಯಮಿಗಳಿಂದ ಇರಾ ಕೈಗಾರಿಕಾ ಪ್ರದೇಶದಲ್ಲಿಬೇಡಿಕೆ ಜಾಗಕ್ಕೆ ಬೇಡಿಕೆ ಸಲ್ಲಿಸಿದ್ದರೂ ಪ್ರಸ್ತುತ ದಿನಗಳಲ್ಲಿಇರುವ ಕೈಗಾರಿಕೆಗಳೇ ಬಂದ್‌ ಆಗಿರುವುದರಿಂದ ಬಂಡವಾಳ ಹಾಕಲು ಜನ ಹಿಂದೇಟು ಹಾಕುತ್ತಿದ್ದಾರೆ. ಅದರಿಂದಾಗಿ ಇರಾ ಕೈಗಾರಿಕಾ ಪ್ರದೇಶಕ್ಕೂ ಅಡ್ಡಿಯಾಗಿದೆ ಎಂದು ಶಾಸಕ ಯು.ಟಿ. ಖಾದರ್‌ ಹೇಳಿದರು.
Vijaya Karnataka Web people hesitate to invest mla khader
ಬಂಡವಾಳ ಹಾಕಲು ಜನ ಹಿಂದೇಟು: ಶಾಸಕ ಯು.ಟಿ. ಖಾದರ್‌


ಮುಡಿಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿ, ದೇಶದಲ್ಲೇ ಜಿಡಿಪಿ ತೀವ್ರ ಕುಸಿತ ಕಂಡಿರುವುದರಿಂದ ಇರಾದಲ್ಲಿಕೈಗಾರಿಕೆಗಳು ಆರಂಭಗೊಳ್ಳಲು ಇನ್ನಷ್ಟು ಸಮಯ ಬೇಕಾಗಬಹುದು. ಹಿಂದೆ ಈ ಪ್ರದೇಶಕ್ಕೆ ಹತ್ತು ಫಾರ್ಮಸಿ ಕಂಪನಿಗಳ ಮುಖ್ಯಸ್ಥರು ಆಗಮಿಸಿದಾಗ ರಸ್ತೆ ಸರಿಯಿಲ್ಲಎನ್ನುವ ಕಾರಣಕ್ಕೆ ಹಿಂದೇಟು ಹಾಕಿದ್ದರು. ಬಳಿಕ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆಯಲ್ಲಿಯುವಕರು ದ್ವಿಚಕ್ರ ವಾಹನ ಬಳಸಿ ಮೋಜು, ಮಸ್ತಿ ಮಾಡುತ್ತಿದ್ದಾರೆ ಎನ್ನುವ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿರಸ್ತೆಯನ್ನು ಗೇಟ್‌ ಹಾಕಿ ಮುಚ್ಚುವ ಹಾಗೂ ಪಹರೇದಾರರನ್ನು ನೇಮಿಸಲು ಯೋಚಿಸಲಾಗಿದೆ ಎಂದರು.

ಮುಡಿಪುವಿನಲ್ಲಿರುವ ಐಬಿ ತಾಲೂಕು ಮಟ್ಟದ್ದಾಗಿ ರೂಪಿಸಿ ಪ್ರವಾಸಿ ತಾಣವನ್ನಾಗಿ ಯೋಚಿಸಲಾಗಿದ್ದು ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಮಂಗಳೂರು ಕ್ಷೇತ್ರ ವ್ಯಾಪ್ತಿಯ ಮುಡಿಪು ಹೋಬಳಿಯಲ್ಲಿಎಲ್ಲರಸ್ತೆಗಳೂ ಸುಸಜ್ಜಿತಗೊಂಡಿದ್ದು ಬಾಕಿಯುಳಿದಿರುವ ಶೇ.15 ರಷ್ಟು ಕಾಮಗಾರಿ ಮುಂದಿನ ವರ್ಷ ಕೈಗೆತ್ತಿಕೊಳ್ಳಲಾಗುವುದು. ಶಾಶ್ವತ ಕುಡಿಯುವ ನೀರಿನ ಯೋಜನೆಗೆ 220 ಕೋಟಿ ರೂ. ಅನುದಾನದಲ್ಲಿಕಾಮಗಾರಿ ಆರಂಭಿಸಲಾಗಿದೆ. ದ್ರವ ಹಾಗೂ ಘನ ತ್ಯಾಜ್ಯ ವಿಚಾರದಲ್ಲಿವ್ಯಾಪಾರಸ್ಥರು ಮಾತ್ರವಲ್ಲದೆ ಸ್ಥಳೀಯರು ವಿಶೇಷ ಜವಾಬ್ದಾರಿ ವಹಿಸಬೇಕು ಎಂದರು.

ಉಳ್ಳಾಲ ತಾಲೂಕು ಆಗಿ ಘೋಷಿಸಲಾಗಿದ್ದು ಕಂದಾಯ, ಆರ್‌ಟಿಒ, ತಾ.ಪಂ. ಮತ್ತು ತಾಲೂಕು ಸಹಿತ ಹೆಚ್ಚಿನ ಕಚೇರಿಗಳು ಒಂದೇ ಕಡೆ ಸ್ಥಾಪಿಸಲು ಅಗತ್ಯವಿರುವ ಐದು ಎಕರೆ ಜಾಗ ಗುರುತಿಸಲಾಗಿದೆ. ಮುಡಿಪು- ಮೂಳೂರು ರಸ್ತೆ ನಿಧಾನಗತಿಯ ಕಾಮಗಾರಿ ನಡೆಯುತ್ತಿರುವುದು ಗಮನಕ್ಕೆ ಬಂದಿದ್ದು ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಚರ್ಚಿಸಲಾಗುವುದು. ರಸ್ತೆಬದಿಯಿರುವ ಒಂಬತ್ತು ಮನೆಗಳನ್ನು ಉಳಿಸಲು ಎಲ್ಲರೀತಿಯ ಪ್ರಯತ್ನ ನಡೆಸಲಾಗಿದೆ. ಸರಕಾರ ಹಿಂದೆಯೇ ನೋಟಿಫೈ ಮಾಡಿರುವುದರಿಂದ ಮಾನವೀಯತೆ ನೆಲೆಯಲ್ಲಿರಸ್ತೆ ವಿನ್ಯಾಸ ಬದಲಾವಣೆ ಸರಕಾರದ ಮಟ್ಟದಿಂದಲೇ ಆಗಬೇಕು. ಯಾಕೆಂದರೆ ಇದುವರೆಗೆ ಹೆಚ್ಚು ರಾಜಕಾರಣಿಗಳು ಜೈಲಿಗೆ ಹೋಗಿದ್ದು ಡಿನೋಟಿಫೈ ಕಾರಣ ಎಂದು ಖಾದರ್‌ವಿವರಿಸಿದರು.

ಮಮತಾ ಗಟ್ಟಿ, ಚಂದ್ರಹಾಸ ಕರ್ಕೇರ, ಪ್ರಶಾಂತ್‌ ಕಾಜವ, ಅಬ್ದುಲ್‌ ಜಲೀಲ್‌ ಮೋಂಟುಗೋಳಿ, ನಾಸಿರ್‌ನಡುಪದವು, ವೈದ್ಯೆ ಹನ್ನತ್‌ ಆಯಿಶಾ ರೀಮ ಹಾಗೂ ಜಿ. ಕಸ್ತೂರಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ