ಆ್ಯಪ್ನಗರ

ಗಮನಿಸಿ: ದಕ್ಷಿಣ ಕನ್ನಡದಲ್ಲಿ ಲಾಕ್‌ಡೌನ್‌ ಇದ್ದರು ಈ ಸಮಯದಲ್ಲಿ ಅಗತ್ಯ ವಸ್ತು ಖರೀದಿಗೆ ಅವಕಾಶವಿದೆ!

ಆಹಾರ ಸಾಮಗ್ರಿ, ಪಡಿತರ ಹಾಗೂ ಹಣ್ಣು ಹಂಪಲು ಖರೀದಿಗೆ ದಕ್ಷಿಣ ಕನ್ನಡದ ಜಿಲ್ಲಾಡಳಿತ ಸಮಯ ನಿಗದಿಪಡಿಸಿದೆ. ಹೀಗಾಗಿ ಜನರು ಇಂದೇ ಎಲ್ಲಾವನ್ನ ಖರೀದಿಸಿ ಇಡುವ ಅಗತ್ಯವಿಲ್ಲ. ಎಷ್ಟು ಗಂಟೆಗೆ ಹೊರಗೆ ತೆರಳಬಹುದು? ಇಲ್ಲಿದೆ ಮಾಹಿತಿ.

Vijaya Karnataka Web 15 Jul 2020, 8:49 am
ಮಂಗಳೂರು: ಜು.15ರ ರಾತ್ರಿಯಿಂದ ಸಂಪೂರ್ಣವಾಗಿ ಲಾಕ್‌ಡೌನ್‌ ಜಾರಿಯಾದರು ಅಗತ್ಯ ವಸ್ತುಗಳನ್ನ ಖರೀದಿಸಲು ಜಿಲ್ಲಾಡಳಿತ ಸಮಯ ನಿಗದಿಪಡಿಸಿದೆ. ಹೀಗಾಗಿ ಬೆಳಗ್ಗೆ 8ರಿಂದ 11ರೊಳಗೆ ಜನರು ಹೊರಗೆ ಹೋಗಿ ಅಗತ್ಯ ವಸ್ತುಗಳನ್ನ ಖರೀದಿಸಬಹುದಾಗಿದೆ. ಆದರೆ ಕೊರೊನಾ ಸಂಬಂಧದ ನಿಯಮಗಳನ್ನ ಗ್ರಾಹಕರು ಹಾಗೂ ಮಾಲೀಕರು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ಸೂಚನೆಯು ನೀಡಲಾಗಿದೆ.
Vijaya Karnataka Web lockdown


ಈ ಸಮಯದಲ್ಲಿ ಪಡಿತರ ಅಂಗಡಿಗಳು, ದಿನಸಿ ಅಂಗಡಿಗಳು ಸೇರಿದಂತೆ ಆಹಾರ, ದವಸ ಧಾನ್ಯಗಳು, ಹಣ್ಣುಗಳು ಸೇರಿದಂತೆ ಆಹಾರ, ದವಸ ಧಾನ್ಯಗಳು, ತರಕಾರಿ ಮೊದಲಾದ ಅಂಗಡಿಗಳು ತೆರೆದಿರುತ್ತದೆ. ಅಲ್ಲದೇ ಕೃಷಿ, ಕೃಷಿಗೆ ಸಂಬಂಸಿದ ಚಟುವಟಿಕೆಗಳು ಕಾರ್ಯನಿರ್ವಹಣೆ. ಕಟೈನ್‌ಮೆಂಟ್‌ ವಲಯದ ಹೊರಗಿನ ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್‌, ಗೃಹರಕ್ಷಕದಳ ಸಹಿತ ತುರ್ತು ಸೇವೆಗಳು ಲಭ್ಯವಿರಲಿದೆ.

ಇನ್ನು ಮಂಗಳೂರು ಮಹಾನಗರ ಪಾಲಿಕೆ, ಕಾರಾಗೃಹಗಳ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ಹಾಗೂ ಖಾಸಗಿ ವಾಹನಗಳ ಮೂಲಕ ಜನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ರಾಜ್ಯ ಸರಕಾರದ ಕಚೇರಿಗಳು ಹಾಗೂ ಅವುಗಳ ಸ್ವಾಯತ್ತ ಸಂಸ್ಥೆಗಳು, ಕೇಂದ್ರ ಸರಕಾರದ ಕಚೇರಿಗಳು, ಅದರ ಸ್ವಾಯತ್ತ ಕಚೇರಿಗಳು, ಸಾರ್ವಜನಿಕ ಸಂಸ್ಥೆಗಳು ಬಂದ್‌ ಆಗಿರಲಿವೆ. ದಕ್ಷಿಣ ಕನ್ನಡದಲ್ಲಿ ಜು.15ರ ರಾತ್ರಿ 8ಗಂಟೆಯಿಂದ ಜು.23ರ ಬೆಳಗ್ಗೆ 5ಗಂಟೆಯವರೆಗೆ 7 ದಿನಗಳ ಕಾಲ ಲಾಕ್‌ಡೌನ್‌ ಜಾರಿಗೆ ಆದೇಶಿಸಲಾಗಿದೆ.
ದಕ್ಷಿಣ ಕನ್ನಡದಲ್ಲಿ ಇಂದು ರಾತ್ರಿಯಿಂದ ಲಾಕ್‌ಡೌನ್‌ ಜಾರಿ, ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ