ಆ್ಯಪ್ನಗರ

ಕಾಲ್ಬೆರಳಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಶಿಕ್ಷಣ ಸಚಿವರ ಶಹಬ್ಬಾಸ್ ಪಡೆದ ಬಂಟ್ವಾಳದ ಕೌಶಿಕ್‌‌!

ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಎಸ್‌ವಿಎಸ್‌ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೌಶಿಕ್‌ಗೆ ಎರಡೂ ಕೈಗಳು ವೈಕಲ್ಯ. ಇದೀಗ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿ, ಯಾರ ಸಹಾಯವೂ ಪಡೆಯದೆ ಕಾಲ ಬೆರಳುಗಳಿಂದಲೇ ಉತ್ತರ ಬರೆದು ರಾಜ್ಯಾದ್ಯಂತ ಸುದ್ದಿಯಾಗಿದ್ದಾನೆ.

Vijaya Karnataka Web 27 Jun 2020, 6:23 pm
ಬಂಟ್ವಾಳ: ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಎಸ್‌ವಿಎಸ್‌ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕೌಶಿಕ್‌ಗೆ ಎರಡೂ ಕೈಗಳು ವೈಕಲ್ಯ. ಇದೀಗ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿ, ಯಾರ ಸಹಾಯವೂ ಪಡೆಯದೆ ಕಾಲ ಬೆರಳುಗಳಿಂದಲೇ ಉತ್ತರ ಬರೆದು ರಾಜ್ಯಾದ್ಯಂತ ಸುದ್ದಿಯಾಗಿದ್ದಾನೆ.
Vijaya Karnataka Web Physically Challenged student


ಸಣ್ಣ ವಿಷಯಗಳಿಗೆಲ್ಲಆತ್ಮಹತ್ಯೆ ಮಾಡಿಕೊಳ್ಳುವ ಅಧೀರರಿಗೆಲ್ಲಈತ ಸ್ಫೂರ್ತಿಯ ಚಿಲುಮೆ. ಶಿಕ್ಷಣ ಇಲಾಖೆಯವರು ದೈನಂದಿನ ವಿಶೇಷಗಳನ್ನು ಇಲಾಖೆಯ ಗಮನಕ್ಕೆ ತಂದ ಚಿತ್ರಗಳಲ್ಲಿಕೌಶಿಕ್‌ ಕಾಲ್ಬೆರಳಲ್ಲಿಪರೀಕ್ಷೆ ಬರೆಯುತ್ತಿರುವ ವಿಚಾರ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಗಮನಕ್ಕೆ ಬಂದಿದೆ. ಅದನ್ನು ಅವರು ಫೇಸ್‌ಬುಕ್‌ನಲ್ಲಿಉಲ್ಲೇಖಿಸಿದ್ದು, ಎಲ್ಲರ ಗಮನ ಬಂಟ್ವಾಳ ಪೇಟೆಯ ಕೌಶಿಕ್‌ನತ್ತ ನೆಟ್ಟಿದೆ.

ರಾಜೇಶ್‌ ಆಚಾರ್ಯ ಮತ್ತು ಜಲಜಾಕ್ಷಿ ಅವರ ಪುತ್ರ ಕೌಶಿಕ್‌. ಈತನ ಅಣ್ಣ ಕಾರ್ತಿಕ್‌. ತಮ್ಮ ಮೋಕ್ಷಿತ್‌. ಪುಟ್ಟ ಮನೆಯಲ್ಲಿವಾಸ. ತಂದೆಗೆ ಮರಗೆಲಸ. ಬಡತನವಿದ್ದರೂ ಹುಟ್ಟುವಾಗಲೇ ತನ್ನೆರಡೂ ಕೈಗಳಲ್ಲಿವೈಕಲ್ಯಗಳಿದ್ದರೂ ಕೌಶಿಕ್‌ ಯಾರ ಸಹಾಯವೂ ಇಲ್ಲದೆ ಕಾಲ್ಬೆರಳಲ್ಲೇ ಬರೆಯಲು ಕಲಿತಿದ್ದಾನೆ. ಅಂಗವೈಕಲ್ಯವಿದೆ ಎಂಬ ಚಿಂತೆಯಿಂದ ಕೊರಗದೆ ಮನೆಯವರೂ ಬಾಲಕನ ಚಟುವಟಿಕೆಗಳಿಗೆ ತುಂಬು ಮನಸ್ಸಿನಿಂದ ಪ್ರೋತ್ಸಾಹ ನೀಡುತ್ತಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ: ಫ್ರೆಷರ್ಸ್‌ ವಿದ್ಯಾರ್ಥಿಗಳಿಗೂ ರಿಪೀಟ್‌‌ ಪ್ರಶ್ನೆಪತ್ರಿಕೆ ನೀಡಿದ ಸಿಬ್ಬಂದಿ!

ಕಾಲಿನ ಸಹಾಯದಲ್ಲೇ ಮಣ್ಣಿನ ಕಲಾಕೃತಿ ರಚಿಸುವುದು, ಡ್ಯಾನ್ಸ್‌ ಮಾಡುವುದು, ಸೈಕಲ್‌ನಲ್ಲಿಸವಾರಿ, ಈಜು ಈತನ ಆಸಕ್ತಿಯ ವಿಷಯಗಳು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಾಮಾನ್ಯವಾಗಿ ಅಂಗವೈಕಲ್ಯದ ಮಕ್ಕಳಿಗೆ ಸಹಾಯಕನನ್ನು ಇಟ್ಟುಕೊಳ್ಳುವ ಅವಕಾಶ ಇರುತ್ತದೆ. ಆದರೆ ಕೌಶಿಕ್‌ ಎಲ್ಲವನ್ನೂ ನಿರಾಕರಿಸಿದ. ಗುರುವಾರ ಪರೀಕ್ಷೆಯನ್ನು ನಿಗದಿತ ಸಮಯದೊಳಗೆ ಸುಲಲಿತವಾಗಿ ಬರೆದ.

ಹಾಸನದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕೊರೊನಾ! 18 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ!

ಅಂದ ಹಾಗೆ ಈತನ ಎಲ್ಲಚಟುವಟಿಕೆಗಳನ್ನೂ ಕಾಲಿನ ಸಹಾಯದಿಂದಲೇ ಮಾಡುತ್ತಾನೆ. ಸಣ್ಣ ಸಣ್ಣ ವಿಷಯಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳಿರುವ ಈ ದಿನಗಳಲ್ಲಿಕೌಶಿಕ್‌ ತನ್ನೆಲ್ಲಚಟುವಟಿಕೆಗಳ ಮೂಲಕ ಮನೆಯಲ್ಲಿ ಬಡತನವಿದ್ದರೂ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದಲೇ ಬರೆಯುವ ಮೂಲಕ ಉತ್ತಮ ಭವಿಷ್ಯದ ಕನಸು ಕಾಣುತ್ತಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ