ಆ್ಯಪ್ನಗರ

ಮಂಗಳೂರು ನಗರದಲ್ಲಿ ಜೇಬುಗಳ್ಳರ ಹಾವಳಿ..! ಬುರ್ಖಾಧಾರಿ ಮಹಿಳೆಯರಿಂದಲೂ ವಂಚನೆ..!

ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸಂಚರಿಸುವ ಬಸ್‌, ಸಾರ್ವಜನಿಕ ಸ್ಥಳದಲ್ಲಿ ಪಿಕ್‌ ಪಾಕೆಟ್‌ ಪ್ರಕರಣಗಳು ಹೆಚ್ಚಾಗುತ್ತಿದೆ. ಮಂಗಳವಾರ ಮಧ್ಯಾಹ್ನ ತೊಕ್ಕೊಟ್ಟಿನಿಂದ ಹರೇಕಳ ಪಾವೂರಿಗೆ ತೆರಳುವ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ದುಡಿಮೆಯ 7 ಸಾವಿರ ರೂ.ಗಳನ್ನು ಕಳೆದುಕೊಂಡಿದ್ದಾರೆ. ಇದೇ ರೀತಿ 4 ದಿನದ ಹಿಂದೆ ಕುಲಶೇಖರಕ್ಕೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು 2 ಸಾವಿರ ರೂ. ಕಳೆದುಕೊಂಡಿದ್ದಾರೆ. ಪ್ರಯಾಣ ಮುಗಿಸಿ ಮನೆಗೆ ಹೋದ ಬಳಿಕ ತಮ್ಮ ಜೇಬಿನಲ್ಲಿದ್ದ ಹಣ ನಾಪತ್ತೆಯಾಗಿರೋದು ಗೊತ್ತಾಗಿ ಜನರು ಕಂಗಾಲಾಗುತ್ತಿದ್ದಾರೆ..!

Edited byದಿಲೀಪ್ ಡಿ. ಆರ್. | Vijaya Karnataka 26 May 2022, 6:20 pm

ಹೈಲೈಟ್ಸ್‌:

  • ಎಟಿಎಂ ಹೊರ ಭಾಗದಲ್ಲಿ ನಿಲ್ಲುವ ಬುರ್ಖಾಧಾರಿ ಮಹಿಳೆಯರಿಂದಲೂ ವಂಚನೆ
  • ಎಟಿಎಂನಲ್ಲಿ ಹಣ ಡ್ರಾ ಮಾಡಿ ಹೊರಗೆ ಬರುವವರನ್ನೇ ಟಾರ್ಗೆಟ್ ಮಾಡುವ ಮಹಿಳೆಯರು..!
  • ಎರಡರಿಂದ ಮೂರು ಬಾರಿ ಮಂಗಳೂರು ನಗರದ ಎಟಿಎಂಗಳ ಬಳಿ ವಂಚನೆ..!
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web pickpocket
ಮಂಗಳೂರು ನಗರದಲ್ಲಿ ಜೇಬುಗಳ್ಳರ ಹಾವಳಿ..! ಬುರ್ಖಾಧಾರಿ ಮಹಿಳೆಯರಿಂದಲೂ ವಂಚನೆ..!
ಮಂಗಳೂರು: ಪ್ರಯಾಣಿಕರಿಂದ ತುಂಬಿ ತುಳುಕುವ ಬಸ್ಸನ್ನೇ ಹತ್ತುವ ಅವರು, ಸದಾ - ಸೀದಾ ಪ್ರಯಾಣಿಕರಂತೆ ಕಾಣುತ್ತಾರೆ..! ಹೊರ ರಾಜ್ಯದವರಾದ ಈ ಕಿರಾತಕರು, ಬಸ್‌ನಲ್ಲಿ ರಷ್‌ ಇರುವ ಕಡೆ ಸುತ್ತುವರಿದು ನಿಲ್ಲುತ್ತಾರೆ. ನೋಡ ನೋಡುತ್ತಿದ್ದಂತೆಯೇ ಕೆಲವೇ ಕ್ಷಣದಲ್ಲಿ ತಮ್ಮ ಬೇಳೆ ಬೇಯಿಸಿಕೊಂಡು ಇಳಿದು ಹೋಗುತ್ತಾರೆ. ಪ್ರಯಾಣಿಕನಿಗೆ ಪಿಕ್‌ ಪಾಕೆಟ್‌ ಆಗಿರುವುದು ಗೊತ್ತಾಗುವುದು, ಎಲ್ಲಾ ಮುಗಿದ ನಂತರವೇ..!
ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸಂಚರಿಸುವ ಬಸ್‌, ಸಾರ್ವಜನಿಕ ಸ್ಥಳದಲ್ಲಿ ಪಿಕ್‌ ಪಾಕೆಟ್‌ ಪ್ರಕರಣಗಳು ಹೆಚ್ಚಾಗುತ್ತಿದೆ. ಮಂಗಳವಾರ ಮಧ್ಯಾಹ್ನ ತೊಕ್ಕೊಟ್ಟಿನಿಂದ ಹರೇಕಳ ಪಾವೂರಿಗೆ ತೆರಳುವ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ದುಡಿಮೆಯ 7 ಸಾವಿರ ರೂ.ಗಳನ್ನು ಕಳೆದುಕೊಂಡಿದ್ದಾರೆ. ಇದೇ ರೀತಿ 4 ದಿನದ ಹಿಂದೆ ಕುಲಶೇಖರಕ್ಕೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು 2 ಸಾವಿರ ರೂ. ಕಳೆದುಕೊಂಡಿದ್ದಾರೆ.

ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಪಿಕ್ ‌ಪಾಕೆಟ್:‌ ಕರಾವಳಿಯ ಪುಣ್ಯಕ್ಷೇತ್ರಗಳೇ ಜೇಬುಗಳ್ಳರ ಟಾರ್ಗೆಟ್..!
ಮಂಗಳೂರು ನಗರದ ಬಿಜೈಯ ವ್ಯಾಪಾರಿಯೊಬ್ಬರು ಸೋಮವಾರ ಮಧ್ಯಾಹ್ನ ತಮ್ಮ ಸಂಬಂಧಿಕರ ಮನೆಗೆ ಹೋಗಲು ತೊಕ್ಕೊಟ್ಟಿಗೆ ತೆರಳಿದ್ದಾರೆ. ಅಲ್ಲಿಂದ ಹರೇಕಳ ಪಾವೂರಿಗೆ ಹೋಗುವ ರೂಟ್‌ ನಂ. 55 ಬಸ್‌ ಹತ್ತಿದ್ದಾರೆ. ಬಸ್‌ನಲ್ಲಿ ಸಾಧಾರಣ ಪ್ರಯಾಣಿಕರಿದ್ದ ಕಾರಣ ನಿಂತೇ ಪ್ರಯಾಣಿಸಬೇಕಾಯಿತು. ಪಂಚೆಯನ್ನೇ ಧರಿಸುವ ಅವರು ಒಳಗೊಂದು ಬರ್ಮುಡಾ ಧರಿಸಿ ಅದರಲ್ಲಿ 7ಸಾವಿರ ರೂ. ಇಟ್ಟಿದ್ದರು. ಕಳ್ಳರು ಅತ್ಯಂತ ನಾಜೂಕಾಗಿ ಅವರ ಬರ್ಮುಡಾ ಜೇಬು ಹರಿದು ಅದರಲ್ಲಿದ್ದ 7,000 ರೂ. ನಗದನ್ನು ಲಪಟಾಯಿಸಿದ್ದರು. ಸಂಬಂಧಿಕರ ಮನೆಗೆ ತಲುಪಿದ ಬಳಿಕ ಕಳವಾಗಿರುವುದು ವ್ಯಾಪಾರಿಯ ಅರಿವಿಗೆ ಬಂದಿದೆ.

ಇದೇ ರೀತಿ ವಾರದ ಹಿಂದೆ ವಾಮನ್‌ ಶಕ್ತಿ ನಗರ ಎಂಬುವರು ಸಂಜೆ 6.30ರ ಹೊತ್ತಿಗೆ ಬಂಟ್ಸ್‌ ಹಾಸ್ಟೆಲ್‌ನಿಂದ ಕುಲಶೇಖರಕ್ಕೆ ಬಸ್‌ನಲ್ಲಿ ತೆರಳಿದ್ದು, ಇದೇ ಸಂದರ್ಭ ಅವರ ಪ್ಯಾಂಟ್‌ನ ಹಿಂಬದಿ ಜೇಬಿನಲ್ಲಿದ್ದ 2 ಸಾವಿರ ರೂ. ಹಣವನ್ನು ಕಳವು ಮಾಡಲಾಗಿತ್ತು.

ಪಿಕ್ ಪಾಕೆಟ್ ಟ್ರಿಕ್ಸ್‌ : ನಕ್ಕು ನಗಿಸುವ ಟಿಕ್‌ಟಾಕ್ ವಿಡಿಯೋ ವೈರಲ್
ಬುರ್ಖಾ ಧರಿಸಿ ಮಾಸ್ಟರ್‌ ಪ್ಲ್ಯಾನ್‌..!

ಮಂಗಳೂರು ನಗರದ ವೆಲೆನ್ಸಿಯಾ ಸಮೀಪ ಎಟಿಎಂ ಹೊರ ಭಾಗದಲ್ಲಿ ನಿಂತ ಮಹಿಳೆಯೊಬ್ಬರು ಎಟಿಎಂನಲ್ಲಿ ಹಣ ಡ್ರಾ ಮಾಡಿ ಹೊರಗೆ ಬಂದ ವ್ಯಕ್ತಿಯ ಬಳಿ 'ನನಗೆ ಅರ್ಜಂಟ್‌ 4 ಸಾವಿರ ರೂ. ಕ್ಯಾಷ್‌ ಬೇಕಿದೆ. ನನ್ನ ಎಟಿಎಂ ಕಾರ್ಡ್‌ ಸರಿಯಿಲ್ಲ. ನಿಮ್ಮ ನಂಬರ್‌ ಕೊಡಿ, ನನ್ನ ಗಂಡನ ಮೊಬೈಲ್‌ನಿಂದ ನಿಮಗೆ ಗೂಗಲ್‌ ಪೇ ಮಾಡುತ್ತೇನೆ' ಎಂದು ಹೇಳಿ ಅವಸರಸವಾಗಿ ಮಾತನಾಡುತ್ತಾಳೆ. ಆ ಮಹಿಳೆಯ ದಯನೀಯ ಸ್ಥಿತಿಗೆ ಮರುಕ ಪಟ್ಟ ವ್ಯಕ್ತಿ 4 ಸಾವಿರ ರೂ. ಕ್ಯಾಷ್‌ ಕೊಟ್ಟು, ಮೊಬೈಲ್‌ ನಂಬರ್‌ ಪಡೆಯುತ್ತಾರೆ. ಕೂಡಲೇ ಮಹಿಳೆ, ರಿಕ್ಷಾ ಹಿಡಿದು ಅಲ್ಲಿಂದ ಎಸ್ಕೇಪ್‌ ಆಗುತ್ತಾಳೆ. ಸ್ವಲ್ಪ ಸಮಯದ ಬಳಿಕ ಮಹಿಳೆ ಕೊಟ್ಟ ಮೊಬೈಲ್‌ ನಂಬರ್‌ಗೆ ಕರೆ ಮಾಡಿದ್ರೆ 'ನಾಟ್‌ ರೀಚೆಬಲ್‌'..! ಬುರ್ಖಾ ಧರಿಸಿದ ಈ ಮಹಿಳೆ ಇದೇ ರೀತಿ ಈ ಹಿಂದೆಯೂ ಎರಡರಿಂದ ಮೂರು ಬಾರಿ ಮಂಗಳೂರು ನಗರದ ಎಟಿಎಂಗಳ ಬಳಿ ವಂಚನೆ ಮಾಡಿರುವುದಾಗಿ ತಿಳಿದು ಬಂದಿದೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ