ವಿಕ ಸುದ್ದಿಲೋಕ ಮಂಗಳೂರು
ನಗರದಲ್ಲಿ ಅಪ್ರಾಪ್ತ ಯುವಕರು ಬೈಕ್ ಹಾಗೂ ಕಾರು ವಾಹನ ಚಲಾಯಿಸುತ್ತಿರುವ ಬಗ್ಗೆ ದೂರುಗಳು ಹೆಚ್ಚಾಗಿ ಬರುತ್ತಿದ್ದು, ಇಂತಹ ಪ್ರಕರಣ ಕಂಡು ಬಂದಲ್ಲಿ ಅವರಿಗೆ ವಾಹನ ನೀಡಿದವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಮಂಗಳೂರು ನಗರ ಸಂಚಾರ ಮತ್ತು ಅಪರಾಧ ವಿಭಾಗದ ಉಪಪೊಲೀಸ್ ಆಯುಕ್ತ ಲಕ್ಷ್ಮೇಗಣೇಶ್ ಹೇಳಿದರು.
ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದರು.
ನಗರದಲ್ಲಿ ಬೆಳಗ್ಗೆ ಮತ್ತು ಸಂಜೆ ಶಾಲಾ-ಕಾಲೇಜು ಬಿಡುವ ಹೊತ್ತು ಅಪ್ರಾಪ್ತರು ವಾಹನ ಚಲಾಯಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ. ಸಂಚಾರಿ ನಿಯಮ ಉಲ್ಲಂಘಿಸಿ ಯದ್ವಾತದ್ವಾ ವಾಹನ ರೈಡ್ ಮಾಡುತ್ತಾರೆ. ಇದರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸಾರ್ವಜನಿಕರೊಬ್ಬರು ಆಗ್ರಹಿಸಿದರು.
ಬೈಕಂಪಾಡಿಯಲ್ಲಿ ರಸ್ತೆಯಲ್ಲೇ ವಾಹನ ಪಾರ್ಕ್ ಮಾಡುತ್ತಾರೆ. ರಾತ್ರಿ ವೇಳೆ ಹೋಟೆಲ್ಗೆ ಬರುವವರು ಕೂಡ ರಸ್ತೆಯಲ್ಲಿ ವಾಹನ ನಿಲ್ಲಿಸಿ ಇತರೆ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಹೊನ್ನಕಟ್ಟೆ, ಕುಳಾಯಿಗಳಲ್ಲಿ ಖಾಸಗಿ ಬಸ್ಗಳು ಅರ್ಧದಲ್ಲೇ ಪ್ರಯಾಣಿಕರನ್ನು ಇಳಿಸುತ್ತಿವೆ ಎಂದು ಸ್ಥಳೀಯ ನಾಗರಿಕರೊಬ್ಬರು ದೂರಿದರು. ಹಂಪನಕಟ್ಟೆ ಸಿಗ್ನಲ್, ಬಂಟ್ಸ್ಹಾಸ್ಟೆಲ್, ಹಂಪನಕಟ್ಟೆಯಲ್ಲಿ ಬಸ್ಗಳು ಮಿತಿಮೀರಿದ ವೇಗದಿಂದ ಸಂಚರಿಸುತ್ತಿವೆ. ಇದರಿಂದಾಗಿ ಶಾಲಾ ಮಕ್ಕಳ ಸಹಿತ ಪಾದಚಾರಿಗಳಿಗೆ ರಸ್ತೆ ದಾಟಲು ಕಷ್ಟವಾಗುತ್ತಿದೆ. ಈ ಪ್ರದೇಶದಲ್ಲಿ ಬೆಳಗ್ಗೆ 8 ಗಂಟೆ ಗೊತ್ತಿಗೆ ಸಂಚಾರಿ ಪೊಲೀಸರನ್ನು ನಿಯೋಗಿಸಬೇಕೆಂದು ಮಹಿಳೆ ಆಗ್ರಹಿಸಿದರು.
ಪಂಪ್ವೆಲ್ನಲ್ಲಿ ತಲಪಾಡಿಗೆ ತೆರಳುವ ಕಡೆ ಬಸ್ ನಿಲ್ದಾಣವಿಲ್ಲ. ಇಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಬಸ್ ಸ್ಟಾಪ್ಗೆ ಅವಕಾಶ ಕಲ್ಪಿಸಿದ್ದಾರೆ. ಆದರೆ ಅಲ್ಲಿ ಖಾಸಗಿ ವಾಹನಗಳು ನಿಂತು ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಖಾಸಗಿ ವಾಹನಗಳ ನಿಲುಗಡೆಗೆ ಅವಕಾಶ ನೀಡಬಾರದು ಎಂದು ನಾಗರಿಕರೊಬ್ಬರು ವಿನಂತಿಸಿದರು.
ದೇರಳಕಟ್ಟೆಯಲ್ಲಿ ಅಟೋರಿಕ್ಷಾಗಳು ಪ್ರಯಾಣಿಕರಿಂದ ದುಬಾರಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಹಿಂದೆಯೂ ದೂರು ನೀಡಲಾಗಿತ್ತು. ಇಲ್ಲಿನ ಆಟೋಗಳಲ್ಲಿ ಮಿತಿಗಿಂತ ಜಾಸ್ತಿ ಶಾಲಾ ಮಕ್ಕಳನ್ನು ತುಂಬಿಸಿಕೊಂಡು ಹೋಗುತ್ತಿದ್ದಾರೆ. ಸ್ಥಳೀಯಆಸ್ಪತ್ರೆಗಳಿಗೆ ಆಗಮಿಸುವವರಿಂದ ದುಬಾರಿ ದರವನ್ನು ವಸೂಲಿ ಮಾಡುತ್ತಾರೆ. ಆಟೋಗಳು ಮೀಟರ್ ಪ್ರಕಾರ ದರ ವಸೂಲಿ ಮಾಡುತ್ತಿಲ್ಲ. ಈ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದರೂ ಕ್ಯಾರೇ ಎನ್ನುತ್ತಿಲ್ಲ ಎಂದು ದೂರಿದರು.
ಈಗಾಗಲೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಆಟೋ ಚಾಲಕರಿಗೆ ದುಬಾರಿ ದರ ವಸೂಲಿ ಮಾಡದಂತೆ ಸೂಚನೆ ನೀಡಿದ್ದಾರೆ. ಆದರೂ ಮತ್ತೆ ಅದೇ ಚಾಳಿ ಮುಂದುವರಿಸುತ್ತಿದ್ದರೆ, ಸಾರಿಗೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಅಲ್ಲದೆ ಪೊಲೀಸರು ಕೂಡ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಪಿ ಲಕ್ಷ್ಮೀ ಗಣೇಶ್ ಹೇಳಿದರು.
ನಗರದ ಬಿಕರ್ನಕಟ್ಟೆ ಎಸ್ಸಿಎಸ್ ಎದುರು ರಸ್ತೆ ಬದಿಯಲ್ಲೇ ಮೀನು ಮಾರಾಟ ಮಾಡುತ್ತಿದ್ದು, ಇದರಿಂದ ಟ್ರಾಫಿಕ್ ಬ್ಲಾಕ್ ಆಗುತ್ತಿದೆ. ಮೀನು ಖರೀದಿಸಲು ವಾಹನ ನಿಲ್ಲಿಸುವುದರಿಂದ ಪಾದಚಾರಿಗಳಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಎಂದು ಸ್ಥಳೀಯರೊಬ್ಬರು ದೂರಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಡಿಸಿಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ವಿಮಾನ ನಿಲ್ದಾಣ ರಸ್ತೆಯ ಬದಿಗಳಲ್ಲಿ ಬೀದಿಬದಿ ವ್ಯಾಪಾರ ನಡೆಯುತ್ತಿದೆ. ಈ ರಸ್ತೆಯನ್ನು ಇಕ್ಕೆಲಗಳಲ್ಲಿ ನೋ ಪಾರ್ಕಿಂಗ್ ಎಂದು ಎರಡು ವರ್ಷ ಹಿಂದೆಯೇ ಪೊಲೀಸ್ ಕಮಿಷನರ್ ಅವರು ಆದೇಶ ಹೊರಡಿಸಿದ್ದರು. ಆದರೆ ಇನ್ನೂ ಅನುಷ್ಠಾನಗೊಂಡಿಲ್ಲ. ಸಂಚಾರಕ್ಕೆ ತೊಂದರೆಯಾಗುವಂತೆ ಹಾಗೂ ರಾತ್ರಿ ವೇಳೆ ರಸ್ತೆಬದಿ ಗಾಡಿ ನಿಲ್ಲಿಸುವ ಬೀದಿಬದಿ ವ್ಯಾಪಾರಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಡಿಸಿಪಿ ಲಕ್ಷ್ಮೀ ಗಣೇಶ್, ಬೀದಿಬದಿ ವ್ಯಾಪಾರಸ್ಥರಿಗೂ ವ್ಯಾಪಾರ ಮಾಡಲು ಅವಕಾಶ ಇದೆ. ಆದರೆ ಕಾನೂನು ಚೌಕಟ್ಟು ಮೀರಿದರೆ ಮಾತ್ರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ಗಾಂಜಾ ಅಡ್ಡೆ: ಕುತ್ತಾರಿನ ರಾಣಿಪುರದಲ್ಲಿ ಸಂಜೆ ವೇಳೆ ಬೈಕ್ನಲ್ಲಿ ಬರುವ ಕೆಲವರು ಗಾಂಜಾ ಸೇವನೆ ಮಾಡುತ್ತಿದ್ದಾರೆ. ಅಲ್ಲದೆ ಪುಂಡಾಟಿಕೆಯನ್ನು ನಡೆಸುತ್ತಿದ್ದಾರೆ ಎಂದು ನಾಗರಿಕರೊಬ್ಬರು ಗಮನ ಸೆಳೆದರು. ಈ ಬಗ್ಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಡಿಸಿಪಿ ಭರವಸೆ ನೀಡಿದರು.
ಅಡ್ಯಾರಿನ ಆಸ್ಪತ್ರೆಯೊಂದರ ಸಮೀಪ ಬಾರ್ನಲ್ಲಿ ಯಾವಾಗಲೂ ಗಲಾಟೆ ನಡೆಯುತ್ತಿದೆ. ಇದರಿಂದಾಗಿ ನಾಗರಿಕರ ಶಾಂತಿಗೆ ಭಂಗವಾಗಿದೆ. ಅಲ್ಲಿ ಪೊಲೀಸ್ ವಾಹನ ಗಸ್ತು ನಡೆಸುವಂತೆ ಸ್ಥಳೀಯರೊಬ್ಬರು ಆಗ್ರಹಿಸಿದರು.
ಪಾರ್ಕಿಂಗ್ ಸಮಸ್ಯೆ: ನಗರದ ಭಾರತ್ ಮಾಲ್ ಮತ್ತು ಸಿಟಿ ಸೆಂಟರ್ ಮಾಲ್ ಎದುರು ಪೊಲೀಸ್ ವಾಹನಗಳು ಪಾರ್ಕ್ ಮಾಡಿರುತ್ತವೆ. ಆದರೆ ಗ್ರಾಹಕರ ವಾಹನಗಳಿಗೆ ಅವಕಾಶ ನೀಡುವುದಿಲ್ಲ. ಸಾರ್ವಜನಿಕ ಜಾಗದಲ್ಲಿ ಖಾಸಗಿಯಾಗಿ ನೋ ಪಾರ್ಕಿಂಗ್ ಫಲಕ ಹಾಕುತ್ತಾರೆ. ಇದರಿಂದ ಗ್ರಾಹಕರ ವಾಹನÜ ನಿಲುಗಡೆಗೆ ಅವಕಾಶ ಸಿಗುತ್ತಿಲ್ಲ ಎಂದು ಮಾಜಿ ಶಾಸಕರೊಬ್ಬರು ದೂರಿದರು.
ಇದಕ್ಕೆ ಉತ್ತರಿಸಿದ ಡಿಸಿಪಿ ಲಕ್ಷ್ಮೀ ಗಣೇಶ್, ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ಪಾರ್ಕಿಂಗ್ ಸೌಲಭ್ಯದ ಕುರಿತು ಎನ್ಐಟಿಕೆ ತಜ್ಞರಿಂದ ಸರ್ವೆ ಕಾರ್ಯ ನಡೆಸಲಾಗಿದೆ. ಅದರ ವರದಿಯ ಅಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಸ್ ಮಾಲೀಕರಿಗೆ ನೋಟಿಸ್: ನಗರದಲ್ಲಿ ನಿರ್ಲಕ್ಷ್ಯ ಚಾಲನೆ, ಟಿಕೆಟ್ ಸಮಸ್ಯೆ ಸೇರಿದಂತೆ ಬಸ್ಗಳ ವಿರುದ್ಧ ಅನೇಕ ದೂರುಗಳು ಬರುತ್ತಿದ್ದು, ಇದನ್ನು ನಿಯಂತ್ರಣಕ್ಕೆ ತರುವಂತೆ ಬಸ್ ಮಾಲೀಕರಿಗೆ ನೋಟೀಸು ನೀಡಲಾಗಿದೆ. ಇದಕ್ಕೆ ಸೂಕ್ತ ಸ್ಪಂದನೆ ಸಿಗದಿದ್ದರೆ ಕಠಿಣ ಕ್ರಮ ಅನಿವಾರ್ಯ ಎಂದು ಡಿಸಿಪಿ ಲಕ್ಷ್ಮೇಗಣೇಶ್ ಎಚ್ಚರಿಕೆ ನೀಡಿದರು.
ಸಿಟಿ ಬಸ್ಗಳು ಸಂಚಾರ ನಿಯಮ ಪಾಲಿಸದೆ ಇರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ. ಅಲ್ಲದೆ ಸಂಚಾರಿ ಪೊಲೀಸರು ಕೂಡ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಾತ್ರವಲ್ಲ ಬಸ್ ಮಾಲೀಕರಿಗೆ ಕೂಡ ನೋಟಿಸ್ ನೀಡಲಾಗಿದೆ ಎಂದರು.
ಮಂಗಳೂರು ನಗರದ ಪಿವಿಎಸ್, ಬಂಟ್ಸ್ಹಾಸ್ಟೆಲ್, ಅಂಬೇಡ್ಕರ್ ವೃತ್ತಗಳಲ್ಲಿ ರಸ್ತೆ ಮಧ್ಯೆ ಬಸ್ ನಿಲ್ಲಿಸುತ್ತಾರೆ. ಹಿಂಬದಿಯ ವಾಹನಗಳಿಗೆ ಇದರಿಂದ ತೊಂದರೆಯಾಗುತ್ತದೆ ಎಂದು ವ್ಯಕ್ತಿಯೊಬ್ಬರು ದೂರಿದರು. ಪೊಲೀಸರು ಕಾರ್ಯಾಚರಣೆ ನಡೆಸಿದರೂ ಸಂಚಾರ ನಿಯಮ ಗಾಳಿಗೆ ತೂರುತ್ತಿರುವ ಸಿಟಿ ಬಸ್ಗಳ ಬಗ್ಗೆ ದೂರು ಬರುತ್ತಿದೆ. ಇದರಿಂದ ಕ್ರಮ ಅನಿವಾರ್ಯ ಎಂದರು.
ಸಂಚಾರಿ ಎಸಿಪಿ ಮಂಜುನಾಥ್ ಶೆಟ್ಟಿ ಇದ್ದರು.
ಯುವತಿಯ ಪಿಕ್ಪಾಕೆಟ್ ಯತ್ನ
ಲೇಡಿಗೋಷನ್ ಕಡೆಯಿಂದ ಬಸ್ನಲ್ಲಿ ಬರುವಾ ಯುವತಿಯೊಬ್ಬಳ ಪ್ಯಾಂಟ್ಗೆ ಬ್ಲೇಡಿನಿಂದ ಗೀರಿ ಪಿಕ್ಪಾಕೆಟ್ಗೆ ಯತ್ನಿಸಿದ ಬಗ್ಗೆ ಆಕೆಯ ತಾಯಿ ಫೋನ್ ಇನ್ನಲ್ಲಿ ದೂರಿದರು. ಇಂತಹ ಜನನಿಬಿಡ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ಹಾಕಬೇಕು. ತನ್ನ ಪುತ್ರಿ ಮನೆಗೆ ಬಂದಾಗ ಕಾಲಿನಲ್ಲಿ ರಕ್ತಬರುತ್ತಿತ್ತು. ವಿಚಾರಿಸಿದಾಗ ಪ್ಯಾಂಟ್ನ್ನು ಗೀರಿದ ಗುರುತು ಕಂಡುಬಂದಿದ್ದು, ಪಿಕ್ಪಾಕೆಟ್ಗೆ ಯತ್ನಿಸಿದ್ದಿರಬಹುದು ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಡಿಸಿ ಈಗಾಗಲೇ ಪಿಕ್ಪಾಕೆಟ್ ಆರೋಪಿಯೊಬ್ಬನನ್ನು ಅಲ್ಲಿಯೇ ಬಂಧಿಸಲಾಗಿದೆ. ಅಲ್ಲಿ ಕೂಡ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಡಿಸಿಪಿ ಲಕ್ಷ್ಮೀ ಗಣೇಶ್ ಹೇಳಿದರು.
6ತಿಂಗಳ ಬಳಿಕ ದಂಡ ನೋಟಿಸ್
ಸಂಚಾರ ನಿಯಮ ಉಲ್ಲಂಘಿಸಿದ ಬಗ್ಗೆ 6 ತಿಂಗಳ ಬಳಿಕ ನೋಟಿಸ್ ಕಳುಹಿಸಿದ ವಿಳಂಬ ಧೋರಣೆ ಬಗ್ಗೆ ನಾಗರಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೈ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದ ಬಗ್ಗೆ 6 ತಿಂಗಳ ಬಳಿಕ ಈಗ ಸಂಚಾರಿ ಪೊಲೀಸ್ ಠಾಣೆಯಿಂದ ನೋಟಿಸ್ ನೀಡಲಾಗಿದೆ. ಈ ಬಗ್ಗೆ ದಾಖಲೆ ನೀಡುವಂತೆ ಕೋರಿದಾಗ, ಕದ್ರಿಯಿಂದ ಪಾಂಡೇಶ್ವರಕ್ಕೆ, ಪಾಂಡೇಶ್ವರದಿಂದ ಮತ್ತೆ ಕದ್ರಿ ಸಂಚಾರಿ ಠಾಣೆಗೆ ಸಂಚಾರಿ ಪೊಲೀಸ್ ಅಧಿಕಾರಿಗಳು ಅಡ್ಡಾಡಿಸಿದ್ದಾರೆ. ಕೊನೆಗೂ ದಾಖಲೆ ಒದಗಿಸಿಲ್ಲ. ಈ ಬಗ್ಗೆ ವಿಚಾರಿಸಿದಾಗ, ವಿಡಿಯೋ ದಾಖಲೆ ಆರು ತಿಂಗಳಿಗೆ ಸೀಮಿತವಾಗಿದ್ದು, ನಂತರ ಅದನ್ನು ಅಳಿಸಲಾಗುತ್ತದೆ ಎಂದಿದ್ದಾರೆ. ಈ ರೀತಿಯ ವಿಳಂಬ ನೀತಿಯನ್ನು ಸಂಚಾರಿ ಪೊಲೀಸರು ಅನುಸರಿಸಬಾರದು ಎಂದು ಕೋರಿದರು.
ಇದಕ್ಕೆ ಉತ್ತರಿಸಿದ ಡಿಸಿಪಿ ಲಕ್ಷ್ಮೀ ಗಣೇಶ್, ತಾಂತ್ರಿಕ ತೊಂದರೆಯಿಂದ ಈ ರೀತಿ ಆಗಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಿಶೀಲನೆ ನಡೆಸಿ, ತಪ್ಪಾಗಿದ್ದರೆ, ಮುಂದೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಮಾನವೀಯತೆ ಮೆರೆಯಿರಿ..
ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಕಾದಿರಿಸಿದ ಸೀಟುಗಳಲ್ಲಿ ಮಹಿಳೆಯರು ಕುಳಿತುಕೊಳ್ಳುತ್ತಾರೆ. ಪಾಶ್ರ್ವಪೀಡಿತ ಹಿರಿಯರು ಬಂದರೂ ಸೀಟು ಬಿಟ್ಟುಕೊಡುತ್ತಿಲ್ಲ. ಇಂತಹ ಸಂದರ್ಭ ನಿರ್ವಾಹಕ ಮಧ್ಯಪ್ರವೇಶಿಸಿ ಸೀಟು ಬಿಟ್ಟುಕೊಡಲು ಸೂಚನೆ ನೀಡಬೇಕು ಎಂದು ಹಿರಿಯ ಮಹಿಳೆಯೊಬ್ಬರು ವಿನಂತಿಸಿದರು.
ಇದಕ್ಕೆ ಉತ್ತರಿಸಿದ ಡಿಸಿಪಿ ಲಕ್ಷ್ಮೀ ಗಣೇಶ್, ಮಾನವೀಯತೆ ಎಲ್ಲರಿಗೂ ಮುಖ್ಯವಾದುದು. ಎಲ್ಲರಿಗೂ ಪೊಲೀಸರು ಹೇಳೋಕೆ ಆಗಲ್ಲ. ಈಗಾಗಲೇ ನಿರ್ವಾಹಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಮುಂದಿನ ಪರಿಣಾಮಕಾರಿಯಾಗಿ ಜಾರಿ ಮಾಡಲಾಗುವುದು ಎಂದರು.
ನಗರದಲ್ಲಿ ಅಪ್ರಾಪ್ತ ಯುವಕರು ಬೈಕ್ ಹಾಗೂ ಕಾರು ವಾಹನ ಚಲಾಯಿಸುತ್ತಿರುವ ಬಗ್ಗೆ ದೂರುಗಳು ಹೆಚ್ಚಾಗಿ ಬರುತ್ತಿದ್ದು, ಇಂತಹ ಪ್ರಕರಣ ಕಂಡು ಬಂದಲ್ಲಿ ಅವರಿಗೆ ವಾಹನ ನೀಡಿದವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಮಂಗಳೂರು ನಗರ ಸಂಚಾರ ಮತ್ತು ಅಪರಾಧ ವಿಭಾಗದ ಉಪಪೊಲೀಸ್ ಆಯುಕ್ತ ಲಕ್ಷ್ಮೇಗಣೇಶ್ ಹೇಳಿದರು.
ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದರು.
ನಗರದಲ್ಲಿ ಬೆಳಗ್ಗೆ ಮತ್ತು ಸಂಜೆ ಶಾಲಾ-ಕಾಲೇಜು ಬಿಡುವ ಹೊತ್ತು ಅಪ್ರಾಪ್ತರು ವಾಹನ ಚಲಾಯಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ. ಸಂಚಾರಿ ನಿಯಮ ಉಲ್ಲಂಘಿಸಿ ಯದ್ವಾತದ್ವಾ ವಾಹನ ರೈಡ್ ಮಾಡುತ್ತಾರೆ. ಇದರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸಾರ್ವಜನಿಕರೊಬ್ಬರು ಆಗ್ರಹಿಸಿದರು.
ಬೈಕಂಪಾಡಿಯಲ್ಲಿ ರಸ್ತೆಯಲ್ಲೇ ವಾಹನ ಪಾರ್ಕ್ ಮಾಡುತ್ತಾರೆ. ರಾತ್ರಿ ವೇಳೆ ಹೋಟೆಲ್ಗೆ ಬರುವವರು ಕೂಡ ರಸ್ತೆಯಲ್ಲಿ ವಾಹನ ನಿಲ್ಲಿಸಿ ಇತರೆ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಹೊನ್ನಕಟ್ಟೆ, ಕುಳಾಯಿಗಳಲ್ಲಿ ಖಾಸಗಿ ಬಸ್ಗಳು ಅರ್ಧದಲ್ಲೇ ಪ್ರಯಾಣಿಕರನ್ನು ಇಳಿಸುತ್ತಿವೆ ಎಂದು ಸ್ಥಳೀಯ ನಾಗರಿಕರೊಬ್ಬರು ದೂರಿದರು. ಹಂಪನಕಟ್ಟೆ ಸಿಗ್ನಲ್, ಬಂಟ್ಸ್ಹಾಸ್ಟೆಲ್, ಹಂಪನಕಟ್ಟೆಯಲ್ಲಿ ಬಸ್ಗಳು ಮಿತಿಮೀರಿದ ವೇಗದಿಂದ ಸಂಚರಿಸುತ್ತಿವೆ. ಇದರಿಂದಾಗಿ ಶಾಲಾ ಮಕ್ಕಳ ಸಹಿತ ಪಾದಚಾರಿಗಳಿಗೆ ರಸ್ತೆ ದಾಟಲು ಕಷ್ಟವಾಗುತ್ತಿದೆ. ಈ ಪ್ರದೇಶದಲ್ಲಿ ಬೆಳಗ್ಗೆ 8 ಗಂಟೆ ಗೊತ್ತಿಗೆ ಸಂಚಾರಿ ಪೊಲೀಸರನ್ನು ನಿಯೋಗಿಸಬೇಕೆಂದು ಮಹಿಳೆ ಆಗ್ರಹಿಸಿದರು.
ಪಂಪ್ವೆಲ್ನಲ್ಲಿ ತಲಪಾಡಿಗೆ ತೆರಳುವ ಕಡೆ ಬಸ್ ನಿಲ್ದಾಣವಿಲ್ಲ. ಇಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಬಸ್ ಸ್ಟಾಪ್ಗೆ ಅವಕಾಶ ಕಲ್ಪಿಸಿದ್ದಾರೆ. ಆದರೆ ಅಲ್ಲಿ ಖಾಸಗಿ ವಾಹನಗಳು ನಿಂತು ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಖಾಸಗಿ ವಾಹನಗಳ ನಿಲುಗಡೆಗೆ ಅವಕಾಶ ನೀಡಬಾರದು ಎಂದು ನಾಗರಿಕರೊಬ್ಬರು ವಿನಂತಿಸಿದರು.
ದೇರಳಕಟ್ಟೆಯಲ್ಲಿ ಅಟೋರಿಕ್ಷಾಗಳು ಪ್ರಯಾಣಿಕರಿಂದ ದುಬಾರಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಹಿಂದೆಯೂ ದೂರು ನೀಡಲಾಗಿತ್ತು. ಇಲ್ಲಿನ ಆಟೋಗಳಲ್ಲಿ ಮಿತಿಗಿಂತ ಜಾಸ್ತಿ ಶಾಲಾ ಮಕ್ಕಳನ್ನು ತುಂಬಿಸಿಕೊಂಡು ಹೋಗುತ್ತಿದ್ದಾರೆ. ಸ್ಥಳೀಯಆಸ್ಪತ್ರೆಗಳಿಗೆ ಆಗಮಿಸುವವರಿಂದ ದುಬಾರಿ ದರವನ್ನು ವಸೂಲಿ ಮಾಡುತ್ತಾರೆ. ಆಟೋಗಳು ಮೀಟರ್ ಪ್ರಕಾರ ದರ ವಸೂಲಿ ಮಾಡುತ್ತಿಲ್ಲ. ಈ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದರೂ ಕ್ಯಾರೇ ಎನ್ನುತ್ತಿಲ್ಲ ಎಂದು ದೂರಿದರು.
ಈಗಾಗಲೇ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಆಟೋ ಚಾಲಕರಿಗೆ ದುಬಾರಿ ದರ ವಸೂಲಿ ಮಾಡದಂತೆ ಸೂಚನೆ ನೀಡಿದ್ದಾರೆ. ಆದರೂ ಮತ್ತೆ ಅದೇ ಚಾಳಿ ಮುಂದುವರಿಸುತ್ತಿದ್ದರೆ, ಸಾರಿಗೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಅಲ್ಲದೆ ಪೊಲೀಸರು ಕೂಡ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಪಿ ಲಕ್ಷ್ಮೀ ಗಣೇಶ್ ಹೇಳಿದರು.
ನಗರದ ಬಿಕರ್ನಕಟ್ಟೆ ಎಸ್ಸಿಎಸ್ ಎದುರು ರಸ್ತೆ ಬದಿಯಲ್ಲೇ ಮೀನು ಮಾರಾಟ ಮಾಡುತ್ತಿದ್ದು, ಇದರಿಂದ ಟ್ರಾಫಿಕ್ ಬ್ಲಾಕ್ ಆಗುತ್ತಿದೆ. ಮೀನು ಖರೀದಿಸಲು ವಾಹನ ನಿಲ್ಲಿಸುವುದರಿಂದ ಪಾದಚಾರಿಗಳಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಎಂದು ಸ್ಥಳೀಯರೊಬ್ಬರು ದೂರಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ಡಿಸಿಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ವಿಮಾನ ನಿಲ್ದಾಣ ರಸ್ತೆಯ ಬದಿಗಳಲ್ಲಿ ಬೀದಿಬದಿ ವ್ಯಾಪಾರ ನಡೆಯುತ್ತಿದೆ. ಈ ರಸ್ತೆಯನ್ನು ಇಕ್ಕೆಲಗಳಲ್ಲಿ ನೋ ಪಾರ್ಕಿಂಗ್ ಎಂದು ಎರಡು ವರ್ಷ ಹಿಂದೆಯೇ ಪೊಲೀಸ್ ಕಮಿಷನರ್ ಅವರು ಆದೇಶ ಹೊರಡಿಸಿದ್ದರು. ಆದರೆ ಇನ್ನೂ ಅನುಷ್ಠಾನಗೊಂಡಿಲ್ಲ. ಸಂಚಾರಕ್ಕೆ ತೊಂದರೆಯಾಗುವಂತೆ ಹಾಗೂ ರಾತ್ರಿ ವೇಳೆ ರಸ್ತೆಬದಿ ಗಾಡಿ ನಿಲ್ಲಿಸುವ ಬೀದಿಬದಿ ವ್ಯಾಪಾರಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಡಿಸಿಪಿ ಲಕ್ಷ್ಮೀ ಗಣೇಶ್, ಬೀದಿಬದಿ ವ್ಯಾಪಾರಸ್ಥರಿಗೂ ವ್ಯಾಪಾರ ಮಾಡಲು ಅವಕಾಶ ಇದೆ. ಆದರೆ ಕಾನೂನು ಚೌಕಟ್ಟು ಮೀರಿದರೆ ಮಾತ್ರ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ಗಾಂಜಾ ಅಡ್ಡೆ: ಕುತ್ತಾರಿನ ರಾಣಿಪುರದಲ್ಲಿ ಸಂಜೆ ವೇಳೆ ಬೈಕ್ನಲ್ಲಿ ಬರುವ ಕೆಲವರು ಗಾಂಜಾ ಸೇವನೆ ಮಾಡುತ್ತಿದ್ದಾರೆ. ಅಲ್ಲದೆ ಪುಂಡಾಟಿಕೆಯನ್ನು ನಡೆಸುತ್ತಿದ್ದಾರೆ ಎಂದು ನಾಗರಿಕರೊಬ್ಬರು ಗಮನ ಸೆಳೆದರು. ಈ ಬಗ್ಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ಡಿಸಿಪಿ ಭರವಸೆ ನೀಡಿದರು.
ಅಡ್ಯಾರಿನ ಆಸ್ಪತ್ರೆಯೊಂದರ ಸಮೀಪ ಬಾರ್ನಲ್ಲಿ ಯಾವಾಗಲೂ ಗಲಾಟೆ ನಡೆಯುತ್ತಿದೆ. ಇದರಿಂದಾಗಿ ನಾಗರಿಕರ ಶಾಂತಿಗೆ ಭಂಗವಾಗಿದೆ. ಅಲ್ಲಿ ಪೊಲೀಸ್ ವಾಹನ ಗಸ್ತು ನಡೆಸುವಂತೆ ಸ್ಥಳೀಯರೊಬ್ಬರು ಆಗ್ರಹಿಸಿದರು.
ಪಾರ್ಕಿಂಗ್ ಸಮಸ್ಯೆ: ನಗರದ ಭಾರತ್ ಮಾಲ್ ಮತ್ತು ಸಿಟಿ ಸೆಂಟರ್ ಮಾಲ್ ಎದುರು ಪೊಲೀಸ್ ವಾಹನಗಳು ಪಾರ್ಕ್ ಮಾಡಿರುತ್ತವೆ. ಆದರೆ ಗ್ರಾಹಕರ ವಾಹನಗಳಿಗೆ ಅವಕಾಶ ನೀಡುವುದಿಲ್ಲ. ಸಾರ್ವಜನಿಕ ಜಾಗದಲ್ಲಿ ಖಾಸಗಿಯಾಗಿ ನೋ ಪಾರ್ಕಿಂಗ್ ಫಲಕ ಹಾಕುತ್ತಾರೆ. ಇದರಿಂದ ಗ್ರಾಹಕರ ವಾಹನÜ ನಿಲುಗಡೆಗೆ ಅವಕಾಶ ಸಿಗುತ್ತಿಲ್ಲ ಎಂದು ಮಾಜಿ ಶಾಸಕರೊಬ್ಬರು ದೂರಿದರು.
ಇದಕ್ಕೆ ಉತ್ತರಿಸಿದ ಡಿಸಿಪಿ ಲಕ್ಷ್ಮೀ ಗಣೇಶ್, ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ಪಾರ್ಕಿಂಗ್ ಸೌಲಭ್ಯದ ಕುರಿತು ಎನ್ಐಟಿಕೆ ತಜ್ಞರಿಂದ ಸರ್ವೆ ಕಾರ್ಯ ನಡೆಸಲಾಗಿದೆ. ಅದರ ವರದಿಯ ಅಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಸ್ ಮಾಲೀಕರಿಗೆ ನೋಟಿಸ್: ನಗರದಲ್ಲಿ ನಿರ್ಲಕ್ಷ್ಯ ಚಾಲನೆ, ಟಿಕೆಟ್ ಸಮಸ್ಯೆ ಸೇರಿದಂತೆ ಬಸ್ಗಳ ವಿರುದ್ಧ ಅನೇಕ ದೂರುಗಳು ಬರುತ್ತಿದ್ದು, ಇದನ್ನು ನಿಯಂತ್ರಣಕ್ಕೆ ತರುವಂತೆ ಬಸ್ ಮಾಲೀಕರಿಗೆ ನೋಟೀಸು ನೀಡಲಾಗಿದೆ. ಇದಕ್ಕೆ ಸೂಕ್ತ ಸ್ಪಂದನೆ ಸಿಗದಿದ್ದರೆ ಕಠಿಣ ಕ್ರಮ ಅನಿವಾರ್ಯ ಎಂದು ಡಿಸಿಪಿ ಲಕ್ಷ್ಮೇಗಣೇಶ್ ಎಚ್ಚರಿಕೆ ನೀಡಿದರು.
ಸಿಟಿ ಬಸ್ಗಳು ಸಂಚಾರ ನಿಯಮ ಪಾಲಿಸದೆ ಇರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ. ಅಲ್ಲದೆ ಸಂಚಾರಿ ಪೊಲೀಸರು ಕೂಡ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಾತ್ರವಲ್ಲ ಬಸ್ ಮಾಲೀಕರಿಗೆ ಕೂಡ ನೋಟಿಸ್ ನೀಡಲಾಗಿದೆ ಎಂದರು.
ಮಂಗಳೂರು ನಗರದ ಪಿವಿಎಸ್, ಬಂಟ್ಸ್ಹಾಸ್ಟೆಲ್, ಅಂಬೇಡ್ಕರ್ ವೃತ್ತಗಳಲ್ಲಿ ರಸ್ತೆ ಮಧ್ಯೆ ಬಸ್ ನಿಲ್ಲಿಸುತ್ತಾರೆ. ಹಿಂಬದಿಯ ವಾಹನಗಳಿಗೆ ಇದರಿಂದ ತೊಂದರೆಯಾಗುತ್ತದೆ ಎಂದು ವ್ಯಕ್ತಿಯೊಬ್ಬರು ದೂರಿದರು. ಪೊಲೀಸರು ಕಾರ್ಯಾಚರಣೆ ನಡೆಸಿದರೂ ಸಂಚಾರ ನಿಯಮ ಗಾಳಿಗೆ ತೂರುತ್ತಿರುವ ಸಿಟಿ ಬಸ್ಗಳ ಬಗ್ಗೆ ದೂರು ಬರುತ್ತಿದೆ. ಇದರಿಂದ ಕ್ರಮ ಅನಿವಾರ್ಯ ಎಂದರು.
ಸಂಚಾರಿ ಎಸಿಪಿ ಮಂಜುನಾಥ್ ಶೆಟ್ಟಿ ಇದ್ದರು.
ಯುವತಿಯ ಪಿಕ್ಪಾಕೆಟ್ ಯತ್ನ
ಲೇಡಿಗೋಷನ್ ಕಡೆಯಿಂದ ಬಸ್ನಲ್ಲಿ ಬರುವಾ ಯುವತಿಯೊಬ್ಬಳ ಪ್ಯಾಂಟ್ಗೆ ಬ್ಲೇಡಿನಿಂದ ಗೀರಿ ಪಿಕ್ಪಾಕೆಟ್ಗೆ ಯತ್ನಿಸಿದ ಬಗ್ಗೆ ಆಕೆಯ ತಾಯಿ ಫೋನ್ ಇನ್ನಲ್ಲಿ ದೂರಿದರು. ಇಂತಹ ಜನನಿಬಿಡ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ಹಾಕಬೇಕು. ತನ್ನ ಪುತ್ರಿ ಮನೆಗೆ ಬಂದಾಗ ಕಾಲಿನಲ್ಲಿ ರಕ್ತಬರುತ್ತಿತ್ತು. ವಿಚಾರಿಸಿದಾಗ ಪ್ಯಾಂಟ್ನ್ನು ಗೀರಿದ ಗುರುತು ಕಂಡುಬಂದಿದ್ದು, ಪಿಕ್ಪಾಕೆಟ್ಗೆ ಯತ್ನಿಸಿದ್ದಿರಬಹುದು ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಡಿಸಿ ಈಗಾಗಲೇ ಪಿಕ್ಪಾಕೆಟ್ ಆರೋಪಿಯೊಬ್ಬನನ್ನು ಅಲ್ಲಿಯೇ ಬಂಧಿಸಲಾಗಿದೆ. ಅಲ್ಲಿ ಕೂಡ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಡಿಸಿಪಿ ಲಕ್ಷ್ಮೀ ಗಣೇಶ್ ಹೇಳಿದರು.
6ತಿಂಗಳ ಬಳಿಕ ದಂಡ ನೋಟಿಸ್
ಸಂಚಾರ ನಿಯಮ ಉಲ್ಲಂಘಿಸಿದ ಬಗ್ಗೆ 6 ತಿಂಗಳ ಬಳಿಕ ನೋಟಿಸ್ ಕಳುಹಿಸಿದ ವಿಳಂಬ ಧೋರಣೆ ಬಗ್ಗೆ ನಾಗರಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೈ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದ ಬಗ್ಗೆ 6 ತಿಂಗಳ ಬಳಿಕ ಈಗ ಸಂಚಾರಿ ಪೊಲೀಸ್ ಠಾಣೆಯಿಂದ ನೋಟಿಸ್ ನೀಡಲಾಗಿದೆ. ಈ ಬಗ್ಗೆ ದಾಖಲೆ ನೀಡುವಂತೆ ಕೋರಿದಾಗ, ಕದ್ರಿಯಿಂದ ಪಾಂಡೇಶ್ವರಕ್ಕೆ, ಪಾಂಡೇಶ್ವರದಿಂದ ಮತ್ತೆ ಕದ್ರಿ ಸಂಚಾರಿ ಠಾಣೆಗೆ ಸಂಚಾರಿ ಪೊಲೀಸ್ ಅಧಿಕಾರಿಗಳು ಅಡ್ಡಾಡಿಸಿದ್ದಾರೆ. ಕೊನೆಗೂ ದಾಖಲೆ ಒದಗಿಸಿಲ್ಲ. ಈ ಬಗ್ಗೆ ವಿಚಾರಿಸಿದಾಗ, ವಿಡಿಯೋ ದಾಖಲೆ ಆರು ತಿಂಗಳಿಗೆ ಸೀಮಿತವಾಗಿದ್ದು, ನಂತರ ಅದನ್ನು ಅಳಿಸಲಾಗುತ್ತದೆ ಎಂದಿದ್ದಾರೆ. ಈ ರೀತಿಯ ವಿಳಂಬ ನೀತಿಯನ್ನು ಸಂಚಾರಿ ಪೊಲೀಸರು ಅನುಸರಿಸಬಾರದು ಎಂದು ಕೋರಿದರು.
ಇದಕ್ಕೆ ಉತ್ತರಿಸಿದ ಡಿಸಿಪಿ ಲಕ್ಷ್ಮೀ ಗಣೇಶ್, ತಾಂತ್ರಿಕ ತೊಂದರೆಯಿಂದ ಈ ರೀತಿ ಆಗಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಿಶೀಲನೆ ನಡೆಸಿ, ತಪ್ಪಾಗಿದ್ದರೆ, ಮುಂದೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಮಾನವೀಯತೆ ಮೆರೆಯಿರಿ..
ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ಕಾದಿರಿಸಿದ ಸೀಟುಗಳಲ್ಲಿ ಮಹಿಳೆಯರು ಕುಳಿತುಕೊಳ್ಳುತ್ತಾರೆ. ಪಾಶ್ರ್ವಪೀಡಿತ ಹಿರಿಯರು ಬಂದರೂ ಸೀಟು ಬಿಟ್ಟುಕೊಡುತ್ತಿಲ್ಲ. ಇಂತಹ ಸಂದರ್ಭ ನಿರ್ವಾಹಕ ಮಧ್ಯಪ್ರವೇಶಿಸಿ ಸೀಟು ಬಿಟ್ಟುಕೊಡಲು ಸೂಚನೆ ನೀಡಬೇಕು ಎಂದು ಹಿರಿಯ ಮಹಿಳೆಯೊಬ್ಬರು ವಿನಂತಿಸಿದರು.
ಇದಕ್ಕೆ ಉತ್ತರಿಸಿದ ಡಿಸಿಪಿ ಲಕ್ಷ್ಮೀ ಗಣೇಶ್, ಮಾನವೀಯತೆ ಎಲ್ಲರಿಗೂ ಮುಖ್ಯವಾದುದು. ಎಲ್ಲರಿಗೂ ಪೊಲೀಸರು ಹೇಳೋಕೆ ಆಗಲ್ಲ. ಈಗಾಗಲೇ ನಿರ್ವಾಹಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಮುಂದಿನ ಪರಿಣಾಮಕಾರಿಯಾಗಿ ಜಾರಿ ಮಾಡಲಾಗುವುದು ಎಂದರು.