ಮಂಗಳೂರು: ನಗರದ ಬಿಜೈ ಬಟ್ಟಗುಡ್ಡೆ ವಸತಿ ಸಮುಚ್ಚಯ ಕಾಂಪೌಂಡ್ನಲ್ಲಿ ಉಗ್ರ ಬರಹ ಪತ್ತೆಯಾಗಿ ಮೂರು ದಿನ, ಕೋರ್ಟ್ ಹಳೆ ಪೊಲೀಸ್ ಔಟ್ಪೋಸ್ಟ್ ಗೋಡೆ ಬರಹ ಪತ್ತೆಯಾಗಿ ಒಂದು ದಿನ ಕಳೆದಿದೆ. ಆದರೆ ಪ್ರಕರಣದ ಆರೋಪಿಗಳಿಗೆ ಸಂಬಂಧಿಸಿದ ಯಾವುದೇ ಕುರುಹು ಪೊಲೀಸ್ ತನಿಖಾ ತಂಡಕ್ಕೆ ಲಭಿಸಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬಿಜೈ ವಸತಿ ಸಮುಚ್ಚಯ ಕಾಂಪೌಂಡ್ನಲ್ಲಿ ಸಂಘ ಪರಿವಾರದವರೇ ಲಷ್ಕರ್ ತಯ್ಬಾ-ತಾಲಿಬಾನ್ಗಳನ್ನು ಆಹ್ವಾನಿಸಲು ಅವಕಾಶ ನೀಡಬೇಡಿ ಎಂದು ಬರೆದಿದ್ದರೆ, ಜಿಲ್ಲಾ ಕೋರ್ಟ್ ಸಮೀಪದ ಹಳೆ ಪೊಲೀಸ್ ಔಟ್ಪೋಸ್ಟ್ನ ಗೋಡೆಯ ಮೇಲೆ ಪ್ರವಾದಿ ನಿಂದನೆ ಮಾಡಿದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು ಎಂದು ಬರೆಯಲಾಗಿತ್ತು.
ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ, ಗುಪ್ತಚರ ಇಲಾಖೆ ಏನು ಮಾಡ್ತಿದೆ? ಯು.ಟಿ ಖಾದರ್ ಪ್ರಶ್ನೆ
ಈ ಎರಡು ಪ್ರಕರಣದ ತನಿಖೆಗೆ ಕೇಂದ್ರ ಉಪವಿಭಾಗ ಎಸಿಪಿ ಜಗದೀಶ್ ನೇತೃತ್ವದ ತಂಡ, ಕದ್ರಿ ಪೊಲೀಸ್ ಇನ್ಸ್ಪೆಕ್ಟರ್ ಸವಿತ್ರತೇಜ, ಸಿಸಿಬಿ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಬಂದರು ಇನ್ಸ್ಪೆಕ್ಟರ್ ಗೋವಿಂದರಾಜ್ ನೇತೃತ್ವದ ತಂಡವನ್ನು ನಿಯೋಜಿಸಲಾಗಿದ್ದು, ನಾನಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಆದರೆ ಸೋಮವಾರದವರೆಗೆ ಆರೋಪಿಗಳ ಪತ್ತೆಗೆ ಸಂಬಂಧಿಸಿದ ಬಲವಾದ ಯಾವುದೇ ಸಾಕ್ಷ್ಯ ಲಭಿಸಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ಮಂಗಳೂರಿನಲ್ಲಿ ಮತ್ತೊಂದು 'ಉಗ್ರ ಬರಹ': ಪ್ರವಾದಿ ವಿರುದ್ಧ ನಡೆದರೆ ಬದಲಾಗಲಿದೆಯಂತೆ ಹಣೆಬರಹ!
ಸಿಸಿ ದಾಖಲೆಯಿಲ್ಲ
ಘಟನೆಗೆ ಸಂಬಂಧಿಸಿ ನಗರದ ನಾನಾ ಕಡೆಗಳ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಯುತ್ತಿದ್ದು, ಆರೋಪಿಗಳ ಸ್ಪಷ್ಟ ಚಹರೆ ಸಿಕ್ಕಿಲ್ಲ. ನಗರದ ಹಲವೆಡೆ ಸಿಸಿ ಕ್ಯಾಮೆರಾಗಳು ನಿರ್ವಹಣೆಯಿಲ್ಲದೆ ಕೆಟ್ಟು ಹೋಗಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ.
ಲಷ್ಕರ್ ಉಗ್ರರನ್ನು ಕರೆಸುತ್ತೇವೆ: ಮಂಗಳೂರಿನಲ್ಲಿ ಅಪಾರ್ಟ್ಮೆಂಟ್ ಕಾಂಪೌಂಡ್ ಮೇಲೆ ಉಗ್ರರ ಪರ ಬರಹ