ಆ್ಯಪ್ನಗರ

ಕಸ್ತೂರಿ ರಂಗನ್‌ ವರದಿ ಅನುಷ್ಠಾನ ವಿರೋಧಿಸಿ ಸುಳ್ಯದಲ್ಲಿ ಪ್ರತಿಭಟನೆ

ಕಸ್ತೂರಿ ರಂಗನ್‌ ವರದಿ ಅನುಷ್ಠಾನ ವಿರುದ್ಧದ ಹೋರಾಟವನ್ನು ಹತ್ತಿಕ್ಕಲು ಎಷ್ಟೇ ಪ್ರಯತ್ನ ನಡೆದರೂ ಪ್ರಜಾಪ್ರಭುತ್ವ ರೀತಿಯಲ್ಲಿ ಹೋರಾಟ ಮಾಡಿಯೇ ಸಿದ್ಧ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕ ಕಿಶೋರ್‌ ಶಿರಾಡಿ ಹೇಳಿದ್ದಾರೆ.

Vijaya Karnataka Web 27 Nov 2020, 10:20 pm
ಸುಳ್ಯ: ಕಸ್ತೂರಿ ರಂಗನ್‌ ವರದಿ ಅನುಷ್ಠಾನ ವಿರುದ್ಧದ ಹೋರಾಟವನ್ನು ಹತ್ತಿಕ್ಕಲು ಎಷ್ಟೇ ಪ್ರಯತ್ನ ನಡೆದರೂ ಪ್ರಜಾಪ್ರಭುತ್ವ ರೀತಿಯಲ್ಲಿ ಹೋರಾಟ ಮಾಡಿಯೇ ಸಿದ್ಧ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕ ಕಿಶೋರ್‌ ಶಿರಾಡಿ ಹೇಳಿದ್ದಾರೆ.
Vijaya Karnataka Web Western Ghats
File image


ಕಸ್ತೂರಿ ರಂಗನ್‌ ವರದಿ ಅನುಷ್ಠಾನ ಮಾಡುವುದನ್ನು ವಿರೋಧಿಸಿ ಮಲೆನಾಡು ಜನಹಿತರಕ್ಷಣಾ ವೇದಿಕೆಯ ವತಿಯಿಂದ ಸುಳ್ಯ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ನಮ್ಮ ಸಿದ್ಧಾಂತಕ್ಕೆ ವಿರುದ್ಧವಾಗಿ, ರೈತರಿಗೆ ಮಾರಕವಾಗುವ ರೀತಿಯಲ್ಲಿ ಯಾವ ಸರಕಾರ ನಡೆದುಕೊಂಡರೂ ಅದರ ವಿರುದ್ಧ ಹೋರಾಟ ಮಾಡುತ್ತೇವೆ. ಕಸ್ತೂರಿ ರಂಗನ್‌ ವರದಿಯಿಂದ ಯಾವೊಬ್ಬ ರೈತನಿಗೂ ತೊಂದರೆ ಆಗಲು ಬಿಡುವುದಿಲ್ಲ. ವರದಿಯ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆದು ಶಾಶ್ವತ ಪರಿಹಾರ ಆಗಬೇಕು. ಇಂತಹ ಜ್ವಲಂತ ಸಮಸ್ಯೆಯ ಬಗ್ಗೆ ಹಮ್ಮಿಕೊಂಡ ಪ್ರತಿಭಟನೆಗೆ ಜನ ಸೇರದಂತೆ ಭಯ ಹುಟ್ಟಿಸುವ ಕೆಲಸ ನಡೆದಿದೆ ಎಂದು ಆರೋಪಿಸಿದರು.

ಕಸ್ತೂರಿ ರಂಗನ್‌ ವರದಿ ವಿರುದ್ಧ ಜನವರಿಯಿಂದ ಕ್ರಾಂತಿಕಾರಿ ಹೋರಾಟ!

ಸಾಮಾಜಿಕ ಮುಖಂಡ ಲಕ್ಷೀಶ ಗಬ್ಲಡ್ಕ ಮಾತನಾಡಿ, ಜನರ ಬದುಕಿಗೆ ಮಾರಕವಾಗುವ ಸಂಗತಿಗಳ ಬಗ್ಗೆ ಜನರು ಅರಿತು ಕೊಳ್ಳುವುದಿಲ್ಲ. ವಿಚಾರಗಳಿಗೆ ತಾತ್ಕಾಲಿಕವಾದ ಮತ್ತು ಭಾವನಾತ್ಮಕವಾದ ಸ್ಪರ್ಶ ನೀಡಿ ನೈಜ ಸಮಸ್ಯೆಗಳಿಂದ ಜನರನ್ನು ದೂರ ತಳ್ಳುತ್ತಿದ್ದಾರೆ. ಕಸ್ತೂರಿ ರಂಗನ್‌ ವರದಿಯಂತಹ ಗಂಭೀರ ವಿಚಾರಗಳ ಬಗ್ಗೆ ಅರಿತುಕೊಳ್ಳದೆ, ಯಾರೊಬ್ಬರೂ ಧ್ವನಿ ಎತ್ತದ ಸಂದರ್ಭ ಈ ರೀತಿಯ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.

ಡಾ.ಕಸ್ತೂರಿರಂಗನ್‌ ವರದಿ ವಿರೋಧಿಸಿ ಕೊಡಗು ರೈತರ ಪ್ರತಿಭಟನೆ

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಸಹಕಾರ ಭಾರತೀಯ ಪ್ರಸನ್ನ ಎಣ್ಮೂರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌. ಜಯಪ್ರಕಾಶ್‌ ರೈ, ಬಿಜೆಪಿ ಮುಖಂಡ ಶೈಲೇಶ್‌ ಅಂಬೆಕಲ್ಲು, ಮಲೆನಾಡು ಜನಹಿತರಕ್ಷಣಾ ವೇದಿಕೆಯ ತಾಲೂಕು ಸಂಚಾಲಕ ಭಾನುಪ್ರಕಾಶ್‌ ಪೆರುಮುಂಡ, ಜಿಲ್ಲಾಸಮಿತಿ ಸದಸ್ಯ ರವೀಂದ್ರ ರುದ್ರಪಾದ, ಸಂಪತ್‌ ಮುತ್ಲಾಜೆ ಪ್ರಮುಖರಾದ ಉಮೇಶ್‌ ಕಜ್ಜೋಡಿ, ರತ್ನಾಕರ ಬಳ್ಳಡ್ಕ, ದಿವಾಕರ ಪೈ, ಭರತ್‌ ಕುಮಾರ್‌, ಮಂಜುನಾಥ್‌ ಮಡ್ತಿಲ, ಭರತ್‌ ಕನ್ನಡ್ಕ ಮತ್ತಿತರರು ಉಪಸ್ಥಿತರಿದ್ದರು.

ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿ ಜಯರಾಮ ಕಟ್ಟೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬನ್ನೂರುಪಟ್ಟೆ ಪ್ರದೀಪ್‌ ಕರಿಕೆ ಸ್ವಾಗತಿಸಿದರು. ಟಿ.ಎನ್‌.ಸತೀಶ್‌ ಕಲ್ಮಕ್ಕಾರು ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ