ಆ್ಯಪ್ನಗರ

ಪಂಪ್‌ವೆಲ್‌ ಮೇಲ್ಸೇತುವೆ ಬಿರುಕು: ಪ್ರತ್ಯೇಕ ತನಿಖಾ ತಂಡದಿಂದ ವರದಿಗೆ ಸೂಚನೆ

ಪಂಪ್‌ವೆಲ್‌ ಮೇಲ್ಸೇತುವೆ ಬಿರುಕು ಸಂಬಂಧಿಸಿ ಕಾಮಗಾರಿಯನ್ನು ಪ್ರತ್ಯೇಕ ತಂಡ (ಥರ್ಡ್‌ ಪಾರ್ಟಿಯಿಂದ) ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸೂಚನೆ ನೀಡಿದ್ದಾರೆ.

Vijaya Karnataka Web 2 May 2020, 10:46 am
ಮಂಗಳೂರು: ಪಂಪ್‌ವೆಲ್‌ ಮೇಲ್ಸೇತುವೆ ಬಿರುಕು ಸಂಬಂಧಿಸಿ ಕಾಮಗಾರಿಯನ್ನು ಪ್ರತ್ಯೇಕ ತಂಡ (ಥರ್ಡ್‌ ಪಾರ್ಟಿಯಿಂದ) ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸೂಚನೆ ನೀಡಿದ್ದಾರೆ.
Vijaya Karnataka Web Pumpwell flyover


ಪಂಪ್‌ವೆಲ್‌ ಮೇಲ್ಸೇತುವೆ ಹಾಗೂ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿಸಂಸದರು ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ತಜ್ಞ ಎಂಜಿನಿಯರ್‌ಗಳ ಜತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ರಸ್ತೆ ಸಮತಟ್ಟುಗೊಳಿಸಿ ಮಣ್ಣು ಹಾಕಿದ ಬಳಿಕ ನಿರ್ಮಿಸಿದ ತಡೆಗೋಡೆಯಲ್ಲಿ ಬಿರುಕು ಉಂಟಾಗಿತ್ತು. ಅದನ್ನು ತಕ್ಷಣ ದುರಸ್ತಿ ಪಡಿಸಲಾಗಿದೆ. ಇದರಿಂದ ಮೇಲ್ಸೇತುವೆಗೆ ಯಾವುದೇ ಹಾನಿಯಾಗಿಲ್ಲಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.

ಕುವೈಟ್‌ಗೆ ಉದ್ಯೋಗಕ್ಕೆ ತೆರಳಿದ 35 ಕನ್ನಡಿಗರಿಗೆ ವೇತನ ನೀಡದೆ ವಂಚನೆ

ಕಾಮಗಾರಿಯಲ್ಲಿಏನಾದರೂ ಲೋಪ ಉಂಟಾಗಿದೆಯೆ? ಎಂಬುದರ ಬಗ್ಗೆ ಪ್ರತ್ಯೇಕ

ತಂಡದಿಂದ ಪರಿಶೀಲನೆ ನಡೆಸಿ, ವರದಿ ಸಲ್ಲಿಸುವಂತೆ ಸಂಸದರು ಸೂಚನೆ ನೀಡಿದ್ದಾರೆ.

ಎಲ್‌ಪಿಜಿ ಬೆಲೆಯಲ್ಲಿ ದಾಖಲೆಯ ಇಳಿಕೆ: ಬರೋಬ್ಬರಿ ₹162.5 ಕಡಿತ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ