ಆ್ಯಪ್ನಗರ

ಜಪಾನ್‌ ಜಾಂಬೂರಿ ಮೇಳಕ್ಕೆ ಪುತ್ತೂರಿನಿಂದ 7 ವಿದ್ಯಾರ್ಥಿಗಳು

ಸ್ಕೌಟ್ಸ್‌ ಮತ್ತು ಗೈಡ್ಸ್‌ಗೆ ಸಂಬಂಧಿಸಿ ವಿಶ್ವ ಮಟ್ಟದಲ್ಲಿ 4 ವರ್ಷಗಳಿಗೊಮ್ಮೆ ನಡೆಯುವ ನಿಪೋನ್‌ ಸ್ಕೌಟ್‌ ಜಾಂಬೂರಿ ಮೇಳ ಈ ಬಾರಿ ಆ.4ರಿಂದ 10ರವರೆಗೆ ಜಪಾನ್‌ನ ಸುಸೂ ಸಿಟಿಯಲ್ಲಿ ನಡೆಯಲಿದ್ದು, ಪುತ್ತೂರಿನಿಂದ 7 ವಿದ್ಯಾರ್ಥಿಗಳು ಮತ್ತು ಇಬ್ಬರು ಗೈಡರ್‌ ಶಿಕ್ಷ ಕಿಯರು ಭಾಗವಹಿಸಲಿದ್ದಾರೆ.

Vijaya Karnataka 26 Jul 2018, 4:20 pm
ಪುತ್ತೂರು: ಸ್ಕೌಟ್ಸ್‌ ಮತ್ತು ಗೈಡ್ಸ್‌ಗೆ ಸಂಬಂಧಿಸಿ ವಿಶ್ವ ಮಟ್ಟದಲ್ಲಿ 4 ವರ್ಷಗಳಿಗೊಮ್ಮೆ ನಡೆಯುವ ನಿಪೋನ್‌ ಸ್ಕೌಟ್‌ ಜಾಂಬೂರಿ ಮೇಳ ಈ ಬಾರಿ ಆ.4ರಿಂದ 10ರವರೆಗೆ ಜಪಾನ್‌ನ ಸುಸೂ ಸಿಟಿಯಲ್ಲಿ ನಡೆಯಲಿದ್ದು, ಪುತ್ತೂರಿನಿಂದ 7 ವಿದ್ಯಾರ್ಥಿಗಳು ಮತ್ತು ಇಬ್ಬರು ಗೈಡರ್‌ ಶಿಕ್ಷ ಕಿಯರು ಭಾಗವಹಿಸಲಿದ್ದಾರೆ.
Vijaya Karnataka Web puttur 7 student selected to japan jamboori mela
ಜಪಾನ್‌ ಜಾಂಬೂರಿ ಮೇಳಕ್ಕೆ ಪುತ್ತೂರಿನಿಂದ 7 ವಿದ್ಯಾರ್ಥಿಗಳು


ಪುತ್ತೂರಿನಿಂದ ತೆರಳಲಿರುವ ವಿದ್ಯಾರ್ಥಿಗಳು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಸುದಾನ ಶಾಲೆಯ ಗೈಡ್‌ ತಂಡದ ಸದಸ್ಯೆಯಾಗಿದ್ದು, ಪ್ರಸ್ತುತ ಅಂಬಿಕಾ ಪಪೂ ಕಾಲೇಜಿನಲ್ಲಿ ಕಲಿಯುತ್ತಿರುವ ರಂಜಿತಾ ಶೆಟ್ಟಿ ಮಾತನಾಡಿ, ಭಾರತದಿಂದ ಈ ಜಾಂಬೂರಿಗೆ 42 ಸ್ಕೌಟ್‌-ಗೈಡ್ಸ್‌ ವಿದ್ಯಾರ್ಥಿಗಳು ಮತ್ತು ಮೂವರು ಶಿಕ್ಷ ಕಿಯರು ಸೇರಿದಂತೆ ಒಟ್ಟು 45 ಮಂದಿ ತೆರಳುತ್ತಿದ್ದಾರೆ. ಕರ್ನಾಟಕದಿಂದ ಒಟ್ಟು 23 ವಿದ್ಯಾರ್ಥಿಗಳು ಹಾಗೂ ಮೂವರು ಶಿಕ್ಷ ಕಿಯರು ಸೇರಿದಂತೆ 26 ಮಂದಿಯ ತಂಡ ತೆರಳುತ್ತಿದೆ. ವಿಶೇಷವೆಂದರೆ ರಾಜ್ಯವನ್ನು ಪ್ರತಿನಿಧಿಸುತ್ತಿರುವ 23 ವಿದ್ಯಾರ್ಥಿಗಳು ಕೂಡ ದಕ್ಷಿಣ ಕನ್ನಡದವರೇ ಆಗಿದ್ದಾರೆ. ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಶಿಕ್ಷ ಕಿ, ಗೈಡ್ಸ್‌ ಲೀಡರ್‌ ಟ್ರೈನರ್‌ ಸುನೀತಾ, ಪಾಂಗಲಾಯಿ ಬೆಥನಿ ಶಾಲೆಯ ಗೈಡ್ಸ್‌ ಅಡ್ವಾನ್ಸ್‌ ಮೈತ್ರೇಯಿ, ಮಂಗಳೂರಿನ ಶಾರದಾ ವಿದ್ಯಾಲಯದ ಸ್ಕೌಟರ್‌ ದಿನೇಶ್‌ ಕಂಬಳಗದ್ದೆ ಜಿಲ್ಲೆಯ 23 ವಿದ್ಯಾರ್ಥಿಗಳೊಂದಿಗೆ ಜಪಾನ್‌ಗೆ ತೆರಳುತ್ತಿದ್ದಾರೆ ಎಂದರು.

ಪುತ್ತೂರು ಬೆಥನಿ ಶಾಲೆಯ ವಂಶಿಕಾ, ಅಂಬಿಕಾ ಪ.ಪೂ. ಕಾಲೇಜಿನ ರಂಜಿತಾ ಶೆಟ್ಟಿ, ಬೆಥನಿ ಶಾಲೆಯ ನಿಧಿ ಜಯಕುಮಾರ್‌, ಅರ್ಪಿತಾ ಕೆ.ಪಿ., ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದಿವಿತ್‌ ರೈ, ಧಿರೇನ್‌, ಪ್ರಸ್ತುತ ಅಂಬಿಕಾದಲ್ಲಿ ಕಲಿಯುತ್ತಿದ್ದು ಬೆಥನಿ ಶಾಲೆಯಲ್ಲಿ ಸ್ಕೌಟ್‌ ಆಗಿದ್ದ ವಿಶಾಖ್‌ ನವೀನ್‌ ಎರಡು ತಂಡಗಳಲ್ಲಿ ಜಪಾನ್‌ಗೆ ತೆರಳುತ್ತಿದ್ದಾರೆ.

ಜು.30ರಂದು ತೆರಳಲಿದ್ದೇವೆ. ಈಗಾಗಲೇ ಸಚಿವರಾದ ಯು.ಟಿ. ಖಾದರ್‌, ಜಯಮಾಲಾ, ಶಾಸಕರಾದ ಐವನ್‌ ಡಿಸೋಜ, ಹರೀಶ್‌ ಕುಮಾರ್‌, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಪಂ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್‌. ರವಿ ಅವರನ್ನು ಭೇಟಿ ಮಾಡಿದ್ದೇವೆ. ಜಪಾನ್‌ಗೆ ತೆರಳುವ ಮುನ್ನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರನ್ನು ಭೇಟಿ ಮಾಡಲಿದ್ದೇವೆ ಎಂದರು.

ಶಿಕ್ಷ ಕಿಯರಾದ ಸುನೀತಾ ಮತ್ತು ಮೈತ್ರೇಯಿ ಮಾತನಾಡಿ, 13 ವರ್ಷ ದಾಟಿದ ಸ್ಕೌಟ್ಸ್‌ ಮತ್ತು ಗೈಡ್ಸ್‌ಗಳಿಗೆ ಅಂತಾರಾಷ್ಟ್ರೀಯ ಜಾಂಬೂರಿ ಮೇಳದಲ್ಲಿ ಭಾಗವಹಿಸುವ ಅವಕಾಶವಿದೆ. ಅವರು 5ನೇ ತರಗತಿಯಿಂದ ನೀಡುತ್ತಾ ಬಂದ ನಿರ್ವಹಣೆ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಈ ಬಾರಿಯ ಉತ್ಸವಕ್ಕೆ 6 ತಿಂಗಳ ಮೊದಲೇ ಆಯ್ಕೆ ನಡೆದಿತ್ತು. ಜಾಂಬೂರಿ ಮೇಳದಲ್ಲಿ ನಾವು ಪ್ರತಿನಿಧಿಸುವ ದೇಶದ ಸಾಂಸ್ಕೃತಿಕ ಹಿರಿಮೆಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಇದೊಂದಿಗೆ ಸಾಹಸ ಚಟುವಟಿಕೆ, ಪ್ರತಿಭಾ ಪ್ರದರ್ಶನ, ಸ್ಥಳ ವೀಕ್ಷ ಣೆ, ಕಾರ್ಯಾಗಾರ, ಐಕ್ಯತೆ ಪ್ರದರ್ಶನ ಇತ್ಯಾದಿ ನಡೆಯಲಿದೆ ಎಂದರು.

ಒಬ್ಬ ವಿದ್ಯಾರ್ಥಿಗೆ ಒಂದೂವರೆ ಲಕ್ಷ

ಅಂತಾರಾಷ್ಟ್ರೀಯ ಜಾಂಬೂರಿ ಮೇಳಕ್ಕೆ ಹೋಗಿ ಬರಲು ಒಬ್ಬ ವಿದ್ಯಾರ್ಥಿಗೆ ಒಂದೂವರೆ ಲಕ್ಷ ರೂ. ವೆಚ್ಚ ತಗುಲುತ್ತದೆ. ಪುತ್ತೂರಿನಿಂದ ತೆರಳುವ 9 ವಿದ್ಯಾರ್ಥಿಗಳ ಪೈಕಿ ದಿವಿತ್‌ ರೈ ಅವರ ಪೂರ್ತಿ ವೆಚ್ಚವನ್ನು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಭರಿಸಿದ್ದಾರೆ. ದಿವಿತ್‌ ರೈ ಶಿಕ್ಷ ಣದ ಪೂರ್ಣ ಹೊಣೆಯನ್ನು ಡಾ.ಜಿ.ಪರಮೇಶ್ವರ್‌ ವಹಿಸಿದ್ದು, ಈ ವೆಚ್ಚವನ್ನೂ ಅವರೇ ಭರಿಸಿದ್ದಾರೆ ಎಂದು ರಂಜಿತಾ ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ