ಆ್ಯಪ್ನಗರ

ದಕ್ಷಿಣ ಕನ್ನಡ ಮಹಾಮಳೆಗೆ 213 ಕೋಟಿ ನಷ್ಟ

ಕೇಂದ್ರ ತಂಡದಿಂದ ಸಮಗ್ರ ವರದಿ ಸಲ್ಲಿಕೆ ಭರವಸೆ

Vijaya Karnataka Web 12 Sep 2018, 9:41 pm
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಹಾ ಮಳೆ ಹಾಗೂ ನೆರೆಗೆ ಸಂತ್ರಸ್ತವಾದ ಪ್ರದೇಶಗಳಿಗೆ ಬುಧವಾರ ಕೇಂದ್ರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುಮಾರು 213 ಕೋಟಿ ನಷ್ಟ ಅಂದಾಜಿಸಲಾಗಿದೆ.
Vijaya Karnataka Web ದಕ್ಷಿಣ ಕನ್ನಡ ಮಳೆ
ದಕ್ಷಿಣ ಕನ್ನಡ ಮಳೆ


ಕೇಂದ್ರ ವಿತ್ತ ಸಚಿವಾಲಯದ ವೆಚ್ಚ ವಿಭಾಗದ ಉಪ ಕಾರ್ಯದರ್ಶಿ ಭರತೇಂದು ಕುಮಾರ್ ಸಿಂಗ್ ನೇತೃತ್ವದ ತಂಡ ಮಳೆಹಾನಿ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿತು. ಪಂಜ, ಕಿಲಿಂಜಾರು, ಅದ್ಯಪಾಡಿ, ಮಳವೂರು ಪ್ರದೇಶಗಳಿಗೆ ತಂಡ ಬುಧವಾರ ಭೇಟಿ ನೀಡಿತು.

ಅತೀ ಹೆಚ್ಚು ಮಳೆಯಿಂದ ಸಂಭವಿಸಿದ ನಾಶ ನಷ್ಟಗಳನ್ನು ಅಂದಾಜಿಸಿ ಹಾನಿ ವರದಿಯನ್ನು ಸಮಗ್ರವಾಗಿ ನೀಡುವ ಭರವಸೆಯನ್ನು ಸಮಿತಿ ನೀಡಿತು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಲ್ಕಿ ವ್ಯಾಪ್ತಿಯ ಪ್ರದೇಶಗಳ ಭೇಟಿಯ ಬಳಿಕ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲೆ ಪ್ರಸಕ್ತ ಮಳೆಗಾಲದಲ್ಲಿ ಅನುಭವಿಸಿದ ಸಮಸ್ಯೆಗಳನ್ನು ಹಾಗೂ ಜಿಲ್ಲೆಯು ಸಮರ್ಥವಾಗಿ ಸವಾಲು ಎದುರಿಸಿದ ರೀತಿಯನ್ನು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಪಿಪಿಟಿ ಮೂಲಕ ತಂಡಕ್ಕೆ ವಿವರಿಸಿದರು.

ಅತಿವೃಷ್ಠಿಯ ವೇಳೆ 14 ಕ್ಯಾಂಪ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದ್ದು, 11 ಜೀವಹಾನಿ ಮತ್ತು 1770 ಮನೆ ಹಾನಿಗಳಿಗೆ ಪ್ರಾಕೃತಿಕ ವಿಕೋಪ ನಿಧಿಯಡಿ ನಿಯಮಾನುಸಾರ ಪರಿಹಾರವನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ಒಟ್ಟು 213 ಕೋಟಿ ರೂ.ಗಳ ನಷ್ಟದ ಪ್ರಸ್ತಾಪವನ್ನು ಈಗಾಗಲೇ ಸಲ್ಲಿಸಲಾಗಿದ್ದು, ಮೂಲ ಸೌಕರ್ಯಗಳ ಮರುನಿರ್ಮಾಣಕ್ಕೆ ಅನುದಾನ ಅತ್ಯಗತ್ಯವಾಗಿದೆ ಎಂದು ಹೇಳಿದ ಜಿಲ್ಲಾಧಿಕಾರಿ,ತೋಟಗಾರಿಕೆ ಬೆಳೆ ಹಾನಿಯಿಂದ ಅದರಲ್ಲೂ ಮುಖ್ಯವಾಗಿ ಅಡಕೆ ಬೆಳೆ ನಾಶದಿಂದ ಗ್ರಾಮೀಣ ಭಾಗದ ರೈತರು ಕಂಗೆಟ್ಟಿದ್ದು ಸುಮಾರು 39 ಸಾವಿರ ಹೆಕ್ಟೆರ್ ತೋಟಗಾರಿಕೆ ಬೆಳೆ ನಾಶವಾಗಿದೆ ಎಂದು ಹೇಳಿದರು.

ಜಿಲ್ಲೆಯ ಬಹುದೊಡ್ಡ ಬೇಡಿಕೆ ಅಡಕೆ ಬೆಳೆಗೆ ಪರಿಹಾರ ನೀಡಬೇಕೆಂಬುದಾಗಿದ್ದು, ಕಾಳುಮೆಣಸು ಮತ್ತು ತೆಂಗಿನ ಬೆಳೆ ಹಾಗೂ ಇತರ ಬೆಳೆಗಳಿಗೂ ಹಾನಿ ಸಂಭವಿಸಿದೆ. ಈಗಾಗಲೇ ಪ್ರಾಕೃತಿಕ ವಿಕೋಪದಡಿ 3. 40 ಕೋಟಿ ರೂ. ಪರಿಹಾರ ಗ್ರಾಮೀಣ ರಸ್ತೆಗಳ ದುರಸ್ತಿಗೆ ನೀಡಲಾಗಿದೆ. ಮೆಸ್ಕಾಂಗೆ 6 ಕೋಟಿ ರೂ.ಗಳ ನಷ್ಟವಾಗಿದೆ. ಇದೆಲ್ಲವುಗಳ ಜತೆಗೆ ಮರಗಳು ಹೆಚ್ಚಿನ ಪ್ರಮಾಣದಲ್ಲಿ ಬಿದ್ದಿರುವುದರಿಂದ ಮನೆಗಳ ಹಾನಿ ಗಮನೀಯವಾಗಿತ್ತು ಎಂದು ಜಿಲ್ಲಾಧಿಕಾರಿಗಳು ಕೇಂದ್ರ ತಂಡಕ್ಕೆ ಮನವರಿಕೆ ಮಾಡಿದರು.

ಕೇಂದ್ರ ಸರಕಾರದ ಹಣಕಾಸು ಸಚಿವಾಲಯದ ವೆಚ್ಚ ವಿಭಾಗದ ಉಪಕಾರ್ಯದರ್ಶಿ ಭರತೇಂದು ಕುಮಾರ್ ಸಿಂಗ್, ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪಕಾರ್ಯದರ್ಶಿ ಮಾಣಿಕ್ ಚಂದ್ರ ಪಂಡಿತ್ ಮತ್ತು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಪ್ರಾದೇಶಿಕ ಅಧಿಕಾರಿ ಸದಾನಂದ ಬಾಬು ತಂಡದಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ