ಆ್ಯಪ್ನಗರ

ಮಂಗಳೂರು: ಭಾರೀ ಮಳೆಗೆ ಕುಸಿದ ಗುಡ್ಡ..! ಪಡೀಲ್ ರೈಲ್ವೇ ಹಳಿ ಮೇಲೆ ಮಣ್ಣಿನ ರಾಶಿ

ಕಳೆದ ಎರಡು ದಿನಗಳಿಂದ ಕರಾವಳಿ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಪಡೀಲ್ ರೈಲ್ವೇ ನಿಲ್ದಾಣದ ಬಳಿ ಗುಡ್ಡ ಕುಸಿತವುಂಟಾಗಿ ಬೈಪಾಸ್ ರಸ್ತೆಯ ರೈಲ್ವೇ ಹಳಿ ಮೇಲೆ ಭಾರಿ ಪ್ರಮಾಣದ ಮಣ್ಣು ಬಿದ್ದಿದೆ.

Vijaya Karnataka Web 20 Sep 2020, 7:27 pm
ಮಂಗಳೂರು: ಭಾರಿ ಮಳೆಯಿಂದ ಪಡೀಲ್ ರೈಲ್ವೇ ನಿಲ್ದಾಣದ ಬಳಿ ಗುಡ್ಡ ಕುಸಿತವುಂಟಾಗಿ ಬೈಪಾಸ್ ರಸ್ತೆಯ ರೈಲ್ವೇ ಹಳಿ ಮೇಲೆ ಭಾರಿ ಪ್ರಮಾಣದ ಮಣ್ಣು ಬಿದ್ದಿದೆ. ಭಾನುವಾರ ಮಧ್ಯಾಹ್ನ ಗುಡ್ಡ ಕುಸಿದಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ.
Vijaya Karnataka Web rains trigger landslip on railway track near mangaluru
ಮಂಗಳೂರು: ಭಾರೀ ಮಳೆಗೆ ಕುಸಿದ ಗುಡ್ಡ..! ಪಡೀಲ್ ರೈಲ್ವೇ ಹಳಿ ಮೇಲೆ ಮಣ್ಣಿನ ರಾಶಿ


15 ಮೀಟರ್‌ ಎತ್ತರ ಹಾಗೂ 50 ಮೀಟರ್‌ ಉದ್ದ ಗುಡ್ಡ ಕುಸಿದಿದೆ. ಮಣ್ಣು ಬಿದ್ದಿರುವುದರಿಂದ ಮೈಸೂರು - ತೋಕೂರು - ಪಣಂಬೂರು ಮೂಲಕ ಹಾಸನಕ್ಕೆ ಸಂಚರಿಸುವ ಬೈಪಾಸ್ ಲೈನ್‍ಗೆ ಹಾನಿಯಾಗಿದೆ. ಕುಸಿದಿರುವ ಮಣ್ಣು ರೈಲ್ವೆ ಹಳಿಯನ್ನು ಸಂಪೂರ್ಣ ಆವರಿಸಿಕೊಂಡಿರುವುದರಿಂದ ಕೊಂಕಣ ರೈಲ್ವೆಯಿಂದ ಹಾಸನ, ಮೈಸೂರು, ಬೆಂಗಳೂರು ಕಡೆ ಸಂಚರಿಸುವ ರೈಲುಗಳ ಮೇಲೆ ಪರಿಣಾಮ ಬೀರಲಿದೆ.

ಇನ್ನು, ಪ್ರಯಾಣಿಕರ ರೈಲು ಸಂಚಾರಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಕಾರವಾರ - ಬೆಂಗಳೂರು ವಿಶೇಷ ರೈಲು ಮಂಗಳೂರು ಜಂಕ್ಷನ್ ಮೂಲಕ ಸಂಚರಿಸಲಿದೆ ಎಂದು ರೈಲ್ವೇ ಇಲಾಖೆ ಹೇಳಿದೆ. ಕಳೆದ ಎರಡು ದಿನಗಳಿಂದ ಉಡುಪಿ, ಮಂಗಳೂರು ಸೇರಿ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಗುಡ್ಡ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ