ಆ್ಯಪ್ನಗರ

40 ಸಾವಿರ ರೂ.ಇದ್ದ ಪರ್ಸ್‌ ಹಿಂದಿರುಗಿಸಿದ ಪ್ರಾಮಾಣಿಕರು

ಅನಾಥವಾಗಿ ಬಿದ್ದಿದ್ದ 40 ಸಾವಿರಕ್ಕೂ ಅಧಿಕ ಮೊತ್ತವಿದ್ದ ಪರ್ಸೊಂದನ್ನು ಉಪ್ಪಿನಂಗಡಿ ಪೊಲೀಸರಿಗೊಪ್ಪಿಸುವ ಮೂಲಕ ಕಾವು ಮದ್ಲ ಮನೆಯ ನಿವಾಸಿಗಳಿಬ್ಬರು ಪ್ರಾಮಾಣಿಕತೆ ಮೆರೆದಿದ್ದು, ...

ವಿಕ ಸುದ್ದಿಲೋಕ 7 Jul 2017, 7:56 am

ಉಪ್ಪಿನಂಗಡಿ: ಅನಾಥವಾಗಿ ಬಿದ್ದಿದ್ದ 40 ಸಾವಿರಕ್ಕೂ ಅಧಿಕ ಮೊತ್ತವಿದ್ದ ಪರ್ಸೊಂದನ್ನು ಉಪ್ಪಿನಂಗಡಿ ಪೊಲೀಸರಿಗೊಪ್ಪಿಸುವ ಮೂಲಕ ಕಾವು ಮದ್ಲ ಮನೆಯ ನಿವಾಸಿಗಳಿಬ್ಬರು ಪ್ರಾಮಾಣಿಕತೆ ಮೆರೆದಿದ್ದು, ಪೊಲೀಸರು ಈ ಪರ್ಸ್‌ ಅನ್ನು ವಾರಸುದಾರರಿಗೆ ತಲುಪಿಸಿದ್ದಾರೆ.

ಉತ್ತರಕ್ರಿಯಾ ಕಾರ್ಯಕ್ರಮಕ್ಕೆಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಗೆ ಆಗಮಿಸಿದ್ದ ಕಾವು ಗ್ರಾಮದ ಮದ್ಲ ಮನೆ ನಿವಾಸಿಗಳಾದ ಎಂ. ಕೋಟಿ ಮೂಲ್ಯ ಹಾಗೂ ಆನಂದ ಮೂಲ್ಯ ಅವರಿಗೆ ದೇವಾಲಯದ ಬಳಿ ಪರ್ಸೊಂದು ಬಿದ್ದು ಸಿಕ್ಕಿತ್ತು. ಪರ್ಸ್‌ ತೆರೆದು ನೋಡಿದಾಗ ಅದರಲ್ಲಿ 40 ಸಾವಿರಕ್ಕೂ ಹೆಚ್ಚಿನ ಹಣ ಅದರಲ್ಲಿತ್ತು. ಅವರಿದನ್ನು ಪ್ರಾಮಾಣಿಕತೆಯಿಂದ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ತಂದೊಪ್ಪಿಸಿದರು. ಪೊಲೀಸರು ಪರ್ಸ್‌ ಅನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ 40,920 ರೂ. ಹಣ ಪತ್ತೆಯಾಯಿತು.

Vijaya Karnataka Web returning money wallet to owner
40 ಸಾವಿರ ರೂ.ಇದ್ದ ಪರ್ಸ್‌ ಹಿಂದಿರುಗಿಸಿದ ಪ್ರಾಮಾಣಿಕರು


ಪೊಲೀಸರನ್ನು ಸಂಪರ್ಕಿಸಿ ಅವರಿಗೆ ಪರ್ಸ್‌ನಲ್ಲಿ ಪತ್ತೆಯಾದ ಪೋಟೊವನ್ನು ವಾಟ್ಸಾಪ್‌ ಮೂಲಕ ತೋರಿಸಲಾಯಿತು. ಅವರಿಂದ ಪೋಟೊದಲ್ಲಿದ್ದ ವ್ಯಕ್ತಿ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವಠಾರದ ನಿವಾಸಿ ಆದಿತ್ಯ ಕುಲಾಲ್‌ ಎಂದು ತಿಳಿದು ಬಂತು. ಬಳಿಕ ಅವರ ಮೊಬೈಲ್‌ ಸಂಖ್ಯೆ ತೆಗೆದು ಸಂಪರ್ಕಿಸಿದಾಗ ಅವರು ಪರ್ಸ್‌ ಕಳೆದುಕೊಂಡಿರುವುದನ್ನು ಖಚಿತಪಡಿಸಿಕೊಂಡರು. ಬಳಿಕ ಉಪ್ಪಿನಂಗಡಿ ಪæäಲೀಸ್‌ ಠಾಣೆಗೆ ಆಗಮಿಸಿ ಪರ್ಸ್‌ ಪಡೆದುಕೊಂಡರು.

ಯಾವುದೇ ಗುರುತು ಪತ್ರಗಳಿಲ್ಲದೆ 40 ಸಾವಿರಕ್ಕೂ ಮಿಕ್ಕಿದ ಹಣವಿದ್ದ ಪರ್ಸ್‌ ದೊರೆತಾಗ ಅದನ್ನು ತನ್ನದಾಗಿಸಿಕೊಳ್ಳದೆ ಅದರ ವಾರಸುದಾರರನ್ನು ಹುಡುಕಾಡಲು ಪೊಲೀಸರಿಗೆ ಪರ್ಸ್‌ ಒಪ್ಪಿಸಿದ ಕೋಟಿ ಮೂಲ್ಯ ಹಾಗೂ ಆನಂದ ಮೂಲ್ಯ ಅವರ ಪ್ರಾಮಾಣಿಕತೆಯನ್ನು ಉಪ್ಪಿನಂಗಡಿ ಪೊಲೀಸ್‌ ಠಾಣಾ ಎಎಸ್‌ಐ ಚೆನ್ನಪ್ಪ ಗೌಡ ಹಾಗೂ ಶಿವಪ್ಪ ಪೂಜಾರಿ ಶ್ಲಾಘಿಸಿದ್ದಾರೆ. ವಾರೀಸುದಾರರನ್ನು ಪತ್ತೆ ಹಚ್ಚಲು ಪೊಲೀಸ್‌ ಸಿಬ್ಬಂದಿ ಹರೀಶ್ಚಂದ್ರ ಹಾಗೂ ಶ್ರೀಧರ್‌ ಸಹಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ