ಆ್ಯಪ್ನಗರ

ಕಸ್ತೂರಿ ರಂಗನ್‌ ವರದಿ ವಿರುದ್ಧ ಜನವರಿಯಿಂದ ಕ್ರಾಂತಿಕಾರಿ ಹೋರಾಟ!

ಕಸ್ತೂರಿ ರಂಗನ್‌ ವರದಿ ವಿರುದ್ಧ ಈಗಾಗಲೇ ಗ್ರಾಮ ಮಟ್ಟದಿಂದ ಹೋರಾಟ ಪ್ರಾರಂಭಿಸಲಾಗಿದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ವರದಿ ಕೈಬಿಡದಿದ್ದರೆ ಜನವರಿ ಒಂದರಿಂದ ಕ್ರಾಂತಿಕಾರಿ ಹೋರಾಟ ಮಾಡಲಾಗುವುದು ಮಲೆನಾಡು ಜನಹಿತರಕ್ಷಣಾ ವೇದಿಕೆ ಎಚ್ಚರಿಸಿದೆ.

Vijaya Karnataka Web 24 Nov 2020, 10:58 pm
ಕಡಬ: ಕಸ್ತೂರಿ ರಂಗನ್‌ ವರದಿ ವಿರುದ್ಧ ಈಗಾಗಲೇ ಗ್ರಾಮ ಮಟ್ಟದಿಂದ ಹೋರಾಟ ಪ್ರಾರಂಭಿಸಲಾಗಿದೆ. ಹೋರಾಟ ಆಯಾಮಗಳು ಬದಲಾಗುತ್ತಿವೆ. ಅಧಿಕಾರಿಗಳು ಎಚ್ಚೆತ್ತುಕೊಂಡು ವರದಿ ಕೈಬಿಡದಿದ್ದರೆ ಜನವರಿ ಒಂದರಿಂದ ಕ್ರಾಂತಿಕಾರಿ ಹೋರಾಟ ಮಾಡಲಾಗುವುದು ಎಂದು ಮಲೆನಾಡು ಜನಹಿತರಕ್ಷಣಾ ವೇದಿಕೆಯ ದ.ಕ ಜಿಲ್ಲಾ ಕೇಂದ್ರ ಸಮಿತಿ ಸಂಚಾಲಕ ಕಿಶೋರ್‌ ಶಿರಾಡಿ ಎಚ್ಚರಿಸಿದರು.
Vijaya Karnataka Web kasthuri rangan report


ಅವರು ಮಂಗಳವಾರ ಮಲೆನಾಡು ಹಿತರಕ್ಷಣ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಕಸ್ತೂರಿ ರಂಗನ್‌ ವರದಿ ವಿರುದ್ಧ ನಡೆದ ಬೃಹತ್‌ ಪ್ರತಿಭಟನೆ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಇಂದು ತಹಸೀಲ್ದಾರ್‌ ಕಚೇರಿ ವಿರುದ್ಧ ಪ್ರತಿಭಟನೆ ನಡೆದಿದೆ. ಮುಂದೆ ಎಸಿ ಕಚೇರಿ ಎದುರು ಬಳಿಕ ಗುಂಡ್ಯ ರಾಷ್ಟ್ರೀಯ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು. ಅಧಿಕಾರಿಗಳು ವರದಿ ಕೈಬಿಟ್ಟು ರೈತರ ಹಿತ ಕಾಪಾಡಬೇಕು . ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಲಿಖಿತ ಭರವಸೆ ನೀಡಿದರೆ ಮಾತ್ರ ಪ್ರತಿಭಟನೆ ಹಿಂಪಡೆಯಲಾಗುವುದು ಎಂದಧಿರು. ಅಧಿಕಾರಿಗಳು ಹೋರಾಟಕ್ಕೆ ಮನ್ನಣೆ ನೀಡದೇ ಹೋದಲ್ಲಿ ಪರಿಸ್ಥಿತಿ ಕೈ ಮೀರಿದರೆ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.

ನೈಸರ್ಗಿಕ ಅನಿಲದಿಂದ ರಸಗೊಬ್ಬರ!ಎಂಸಿಎಫ್‌ಗೆ ಗೇಲ್‌ ಪೈಪ್‌ಲೈನ್‌ನಿಂದ ಗ್ಯಾಸ್‌ ಪೂರೈಕೆ

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ,ವರ್ಗೀಸ್‌ ಮಾತನಾಡಿ, ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ, ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಮಹಮ್ಮದ್‌ ಕುಕ್ಕುವಳ್ಳಿ, ನೆಲ್ಯಾಡಿಯ ಧರ್ಮಗುರು ಆದರ್ಶ ಜೋಸೆಫ್‌, ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ಮುಖಂಡ ಮಹಮ್ಮದ್‌ ಆಲಿ ಹೊಸಮಠ ಮಾತನಾಡಿದರು.

ನೈಸರ್ಗಿಕ ಅನಿಲದಿಂದ ರಸಗೊಬ್ಬರ!ಎಂಸಿಎಫ್‌ಗೆ ಗೇಲ್‌ ಪೈಪ್‌ಲೈನ್‌ನಿಂದ ಗ್ಯಾಸ್‌ ಪೂರೈಕೆ

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಮಾರಿ ವಾಸುದೇವನ್‌, ತಾ.ಪಂ. ಸದಸ್ಯರಾದ ಆಶಾ ಲಕ್ಷ್ಮಣ, ಕೆ.ಪಿ. ವಲ್ಸಮ್ಮ, ನಾನಾ ಸಂಘಟನೆಗಳ ಮುಖಂಡರಾದ ಕೆ.ಎಂ.ಹನೀಫ್‌, ದೇವಯ್ಯ ಗೌಡ ಪನ್ಯಾಡಿ, ಕ್ಸೇವಿಯರ್‌ ಬೇಬಿ, ವಿಕ್ಟರ್‌ ಮಾರ್ಟಿಸ್‌, ಶಾರದಾ ಬಿಳಿನೆಲೆ, ರಾಯ್‌ ಅಬ್ರಹಾಂ, ರವೀಂದ್ರ ರುದ್ರಪಾದ, ಶಶಿಧರ ಬೊಟ್ಟಡ್ಕ, ವಸಂತ ಕುಬಲಾಡಿ, ಮೊೖಯಿದ್ದೀನ್‌ ಪೊರಂತು ಮತ್ತಿತರರು ಉಪಸ್ಥಿತರಿದ್ದರು. ಹೋರಾಟದ ರುವಾರಿ ಸಯ್ಯದ್‌ ಮೀರಾ ಸಾಹೇಬ್‌ ಪ್ರಸ್ತಾವನೆಗೈದರು, ಮಲೆನಾಡು ಜನಹಿತರಕ್ಷಣಾ ವೇದಿಕೆಯ ಕಡಬ ತಾಲೂಕು ಸಂಚಾಲಕ ಧನಂಜಯ ಕೊಡಂಗೆ ಸ್ವಾಗತಿಸಿದರು. ಪ್ರದೀಪ್‌ ಕರಿಕೆ ಕಾರ್ಯಕ್ರಮ ನಿರೂಪಿಸಿದರು. ಆರಂಭದಲ್ಲಿಕಡಬ ಪೇಟೆಯಲ್ಲಿಕಾಲ್ನಡಿಗೆ ಜಾಥಾ ನಡೆಸಿ, ತಾಲೂಕು ಕಚೇರಿಯ ಎದುರು ಪ್ರತಿಭಟನಾ ಸಭೆ ನಡೆದ ಬಳಿಕ ತಹಸೀಲ್ದಾರ್‌ ಅನಂತ ಶಂಕರ ಮುಖಾಂರ ಮನವಿ ಸಲ್ಲಿಸಲಾಯಿತು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ