ಆ್ಯಪ್ನಗರ

ಮಂಗಳೂರು ತಲುಪಿದ ಮುಂಬಯಿ ಎಕ್ಸ್‌ಪ್ರೆಸ್‌ ರಿಕ್ಷಾ ಚಾಲೆಂಜ್‌

ಜಾಗತಿಕ ಸ್ಪರ್ಧಿಗಳಿರುವ ಮುಂಬಯಿ ಎಕ್ಸ್‌ಪ್ರೆಸ್‌ ರಿಕ್ಷಾ ಚಾಲೆಂಜ್‌ 2017 ಮಂಗಳೂರು ತಲುಪಿದೆ.

Bangalore Mirror Bureau 16 Aug 2017, 5:21 pm
ಮಂಗಳೂರು: ಜಾಗತಿಕ ಸ್ಪರ್ಧಿಗಳಿರುವ ಮುಂಬಯಿ ಎಕ್ಸ್‌ಪ್ರೆಸ್‌ ರಿಕ್ಷಾ ಚಾಲೆಂಜ್‌ 2017 ಮಂಗಳೂರು ತಲುಪಿದೆ. ಇದೊಂದು ಆಟೊದಲ್ಲಿ ನಡೆಸುವ ವಿಶಿಷ್ಟ ಸಾಹಸ ಸ್ಪರ್ಧೆಯಾಗಿದ್ದು, ಮುಂಬಯಿನಿಂದ ಚೆನ್ನೈವರೆಗೆ ರೈಡ್‌ ಸಾಗಲಿದೆ. ಮೂವತ್ತು ಮಂದಿ ಅಂತಾರಾಷ್ಟ್ರೀಯ ಸ್ಪರ್ಧಿಗಳು ಭಾಗವಹಿಸಿದ್ದು, 14 ರಿಕ್ಷಾಗಳಿವೆ
Vijaya Karnataka Web rickshaw challenge ride reaches mangaluru
ಮಂಗಳೂರು ತಲುಪಿದ ಮುಂಬಯಿ ಎಕ್ಸ್‌ಪ್ರೆಸ್‌ ರಿಕ್ಷಾ ಚಾಲೆಂಜ್‌


ಈ ಸ್ಪರ್ಧೆಯ ಆಯೋಜಕರೊಂದಿಗೆ ಮಂಗಳೂರು ರೌಂಡ್‌ ಟೇಬಲ್‌, ಮಂಗಳೂರು ಲೇಡಿಸ್‌ ಸರ್ಕಲ್‌ ಕೂಡ ಕೈ ಜೋಡಿಸಿದ್ದು, ಪಂಜಿಮೊಗರು ಸರಕಾರಿ ಶಾಲೆಯಲ್ಲಿ ಈ ಸ್ಪರ್ಧೆಗೆ ಹಸಿರು ನಿಶಾನೆ ತೋರಿಸಲಾಯಿತು. ಇದಕ್ಕೂ ಮೊದಲು ಬ್ರಿಟನ್‌, ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಫ್ರಾನ್ಸ್‌, ಐಲ್ಯಾಂಡ್‌, ಕೆನಡಾ, ಇಟಲಿ, ಸ್ಪೇನ್‌, ಸ್ವಿಜರ್ಲೆಂಡ್‌ ಸ್ಪರ್ಧಿಗಳು ವಿದ್ಯಾರ್ಥಿಗಳ ಜತೆ ಸೇರಿ ಸ್ವಾತಂತ್ರ್ಯ ದಿನ ಆಚರಿಸಿದರು.

ಸ್ಪರ್ಧಿಗಳು ಸ್ಥಳೀಯ ಭಾಷೆ, ಸಂಸ್ಕೃತಿ , ಜನರ ಬಗ್ಗೆ ತಿಳಿದುಕೊಳ್ಳುವ ಜತೆಗೆ ನಿಸರ್ಗ ಸೌಂದರ್ಯವನ್ನುಆಸ್ವಾದಿಸುವ ಅವಕಾಶ ಪಡೆದುಕೊಳ್ಳುತ್ತಾರೆ. ಅದೇ ರೀತಿ ನಾನಾ ಪ್ರದೇಶಗಳ ಆಹಾರದ ರುಚಿ ಕೂಡ ನೋಡುವ ಅವಕಾಶ ಇವರದಾಗಲಿದೆ.

ಸಂಚಾರದುದ್ದಕ್ಕೂ ನಿಧಿ ಸಂಗ್ರಹಿಸಿ ಅದನ್ನು ಬಡವರ ಅಭಿವೃದ್ಧಿ ಯೋಜನೆಗಳಿಗೆ ನೀಡಲಿದ್ದಾರೆ. ಮದ್ರಾಸ್‌ ಮಿಡ್‌ ಟೌನ್‌ ರೌಂಡ್‌ ಟೇಬಲ್‌ 42 ಕೂಡ ಈ ಸ್ಪರ್ಧೆ ಆಯೋಜನೆಯ ಪ್ರಮುಖ ಸಹಭಾಗಿ. ಸ್ಪರ್ಧಿಗಳು ಆಟೊದಲ್ಲಿ ಮಹಾರಾಷ್ಟ್ರ. ಗೋವಾ, ಕರ್ನಾಟಕ, ತಮಿಳುನಾಡುಗಳಲ್ಲಿ ಸಂಚರಿಸಲಿದ್ದಾರೆ ಎಂದು ಮಂಗಳೂರು ರೌಂಡ್‌ ಟೇಬಲ್‌ 115ರ ಅಧ್ಯಕ್ಷ ವರದರಾಜ್‌ ಶೆಣೈ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ