ಆ್ಯಪ್ನಗರ

ಕಣ್ಣೂರಿನಲ್ಲಿ ಸರಣಿ ಅಪಘಾತ: ಒಬ್ಬ ಸಾವು

ಕಣ್ಣೂರು ಮಸೀದಿ ಬಳಿ ನಿಂತಿದ್ದ ಕಾರಿಗೆ ಓಲಾ ಕಾರು ಡಿಕ್ಕಿಯಾಗಿ ಒಬ್ಬ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.

Vijaya Karnataka Web 27 Jun 2018, 8:11 am
ಮಂಗಳೂರು: ಕಣ್ಣೂರು ಮಸೀದಿ ಬಳಿ ನಿಂತಿದ್ದ ಕಾರಿಗೆ ಓಲಾ ಕಾರು ಡಿಕ್ಕಿಯಾಗಿ ಒಬ್ಬ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.
Vijaya Karnataka Web accident.


ಗಾಯಗೊಂಡವರಲ್ಲಿ ಒಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ. ಕಣ್ಣೂರು ನಿವಾಸಿ ಮಹಮ್ಮದ್ ಫಾರೂಕ್ (30)ಮೃತಪಟ್ಟವರು.

ಬುಧವಾರ ಮುಂಜಾನೆ ಬಿರುಸಿನ ಮಳೆ ಬರುತ್ತಿದ್ದ ಕಾರಣ ಕಣ್ಣೂರು ನಿವಾಸಿ ಫಾರೂಕ್ ಸೇರಿದಂತೆ 4 ಮಂದಿ ಕಾರನ್ನು ಬಿ.ಸಿ. ರೋಡ್‌ನಿಂದ ಮಂಗಳೂರಿಗೆ ಬರುವ ಹೆದ್ದಾರಿ ಬದಿ ನಿಲ್ಲಿಸಿ ಮಾತನಾಡುತ್ತಿದ್ದರು. ಫಾರೂಕ್ ಮತ್ತು ಇನ್ನೊಬ್ಬ ವ್ಯಕ್ತಿ ಕಾರಿನ ಹಿಂಬದಿ ಕುಳಿತ್ತಿದ್ದರೆ ಮತ್ತಿಬ್ಬರು ಕಾರಿನ ಮುಂದಿನ ಭಾಗದಲ್ಲಿ ಕುಳಿತ್ತಿದ್ದರು. ಆಗ ಬಿ‌.ಸಿ.ರೋಡ್ ಕಡೆಯಿಂದ ವೇಗವಾಗಿ ಬರುತ್ತಿದ್ದ ಓಲಾ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಕಾರಿಗೆ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸದಲ್ಲಿ ಕಾರುಗಳು ಚಲಿಸಿ ಕಣ್ಣೂರು ಮಸೀದಿ ಕಾಂಪೌಂಡ್, ರಿಕ್ಷಾ, ಸ್ಕೂಟರ್‌ಗೆ ಡಿಕ್ಕಿಯಾಗಿ ಸರಣಿ ಅಪಘಾತವಾಗಿದೆ. ಕಾರುಗಳು ಸೇರಿದಂತೆ ಎಲ್ಲ ವಾಹನಗಳು ನಜ್ಜುಗುಜ್ಜಾಗಿವೆ. ಸ್ಥಳೀಯರು ಗಾಯಗೊಂಡವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿದರು.
ಘಟನಾ ಸ್ಥಳಕ್ಕೆ ಕಂಕನಾಡಿ ನಗರ ಸಂಚಾರಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ