ವಿಕ ಸುದ್ದಿಲೋಕ ಮಂಗಳೂರು
ರೌಡಿಶೀಟರ್ಗಳು ಮನಃ ಪರಿವರ್ತನೆಗೊಳಿಸಿ ಸನ್ನಡತೆಯಿಂದ ಸಮಾಜದಲ್ಲಿಎಲ್ಲರಂತೆ ಬಾಳಲು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ. ಪಿ.ಎಸ್.ಹರ್ಷ ಹೊಸ ಅವಕಾಶ ಕಲ್ಪಿಸಿದ್ದಾರೆ.
ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿಬುಧವಾರ ಸುಮಾರು 355 ರೌಡಿ ಶೀಟರ್ಗಳ ಪರೇಡ್ ನಡೆಸಿದ ಬಳಿಕ ಕಮಿಷನರ್ ಡಾ.ಹರ್ಷ ಅವರು ಈ ಅವಕಾಶ ನೀಡಿದ್ದಾರೆ.
ಪ್ರತಿ ವಾರ ತಪ್ಪದೆ ಆಯಾ ಪೊಲೀಸ್ ಠಾಣೆಗೆ ಬಂದು ಸಹಿ ಹಾಕಿ, ತಮ್ಮ ವಾರದ ಚಟುವಟಿಕೆ ಬಗ್ಗೆ ಲಿಖಿತ ಮಾಹಿತಿ ನೀಡಬೇಕು. ಇದನ್ನು ಠಾಣಾಧಿಕಾರಿಗಳು ಅಡ್ಡಪರಿಶೀಲನೆ ಮಾಡುತ್ತಾರೆ. ಸನ್ನಡತೆಯಲ್ಲಿಇರುವುದು ಕಂಡುಬಂದರೆ, ಅಂತಹ ರೌಡಿ ಶೀಟರ್ಗಳಿಗೆ ಹಾಗೂ ಅವರ ಕುಟುಂಬಕ್ಕೆ ಸಮಾಜದ ಮುಖ್ಯವಾಹಿನಿಯಲ್ಲಿಜೀವಿಸಲು ಅವಕಾಶ ಕಲ್ಪಿಸುವುದು ಅಲ್ಲದೆ, ಸ್ವ ಉದ್ಯೋಗಕ್ಕೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ಕಮಿಷನರ್ ಡಾ.ಹರ್ಷ ಅವರು ರೌಡಿಶೀಟರ್ಗಳಿಗೆ 'ನಾನು ಭಾರತೀಯ, ಭಾರತದ ಉನ್ನತಿಗಾಗಿ ಶ್ರಮಿಸುತ್ತೇನೆ' ಎನ್ನುವ ಪ್ರತಿಜ್ಞೆಯನ್ನು ಬೋಧಿಸಿದರು.
ಕಮಿಷನರ್ ನೀಡಿದ ಸಲಹೆ ಏನು ?
ಸಮಾಜ ಘಾತುಕ ಕೃತ್ಯದಲ್ಲಿತೊಡಗುವುದು ಮುಂದುವರಿಸುವುದಾದರೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಹಿಂದೇಟು ಹಾಕುವುದಿಲ್ಲಎಂಬ ಸ್ಪಷ್ಟ ಎಚ್ಚರಿಕೆಯನ್ನೂ ನೀಡಿದ್ದಾರೆ. ರೌಡಿಶೀಟರ್ಗಳಿಗೆ ಬುದ್ಧಿಮಾತು ಹೇಳಿ ಸಾಗಹಾಕುವ ಬದಲು ಅವರು ಮನಃಪರಿವರ್ತನೆಗೊಂಡು ಉತ್ತಮ ಪ್ರಜೆಯಾಗಿ ಬಾಳುವುದಕ್ಕೆ ಎಲ್ಲವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಕಮಿಷನರೇಟ್ ಕಚೇರಿಯಲ್ಲಿಪ್ರತ್ಯೇಕ ಘಟಕವನ್ನು ತೆರೆಯುವುದಾಗಿಯೂ ಅವರು ಹೇಳಿದ್ದಾರೆ.
ರೌಡಿಶೀಟರ್ಗಳು ಪ್ರತಿ ಸೋಮವಾರ ತಮ್ಮ ಇಡೀ ವಾರದ ದಿನಚರಿಯನ್ನು ತಂದು ಆಯಾ ಪೊಲೀಸ್ ಠಾಣೆಗೆ ಒಪ್ಪಿಸಬೇಕು. ನಿರಂತರವಾಗಿ ಆರು ತಿಂಗಳು ಕಾಲ ಈ ರೀತಿ ಚಾಚೂ ತಪ್ಪದೆ ಮಾಡಿದರೆ, ಅಂತಹ ರೌಡಿಶೀಟರ್ ಕ್ರಿಮಿನಲ್ ಕೃತ್ಯದಿಂದ ಹೊರಗೆ ಬರುತ್ತಿರುವುದು ಖಚಿತವಾದರೆ, ಸನ್ನಡತೆ ವರ್ತನೆಗೆ ಕಾನೂನು ರೀತಿಯ ನೆರವು ನೀಡಲಾಗುವುದು. ಅಲ್ಲದೆ ಪ್ರತಿ ಬಾರಿ ಮನೆಗೆ ಬಂದು ತನಿಖೆ ನಡೆಸುವುದನ್ನು ನಿಲ್ಲಿಸಲಾಗುವುದು. ಸನ್ನಡತೆಯಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಇಚ್ಛಿಸಿ ಮನಃಪರಿವರ್ತನೆಗೊಳ್ಳುವ ರೌಡಿಶೀಟರ್ಗಳು ಬಯಸಿದಲ್ಲಿಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳಡಿಯಲ್ಲಿಸ್ವ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗುವುದು. ಅದಕ್ಕೆ ಬೇಕಾದ ನೆರವನ್ನು ಪೊಲೀಸ್ ಇಲಾಖೆ ಕಲ್ಪಿಸಲಿದೆ.
ಒಂದು ರೌಡಿಶೀಟರ್ ಮನೆಯಲ್ಲಿಇನ್ನೊಂದು ರೌಡಿಶೀಟರ್ ಹಣೆಪಟ್ಟಿ ತಲೆಎತ್ತುವುದು ಬೇಡ. ಜನಿಸುವಾಗ ಯಾರೂ ರೌಡಿಶೀಟರ್ ಹಣೆಪಟ್ಟಿ ಕಟ್ಟಿಕೊಂಡು ಬರುವುದಿಲ್ಲ. ಆದ್ದರಿಂದ ಕುಟುಂಬದ ಗೌರವಕ್ಕೆ ಕುಂದು ಬಾರದಂತೆ ನೆರವಾಗುವುದು ಪೊಲೀಸ್ ಇಲಾಖೆಯ ಉದ್ದೇಶ. ಕುಟುಂಬಸ್ಥರು ಬಯಸಿದಲ್ಲಿಸ್ವ ಉದ್ಯೋಗಕ್ಕೂ ಪೊಲೀಸರು ನೆರವಾಗಲಿದ್ದಾರೆ.
ಗೂಂಡಾ ಸುಧಾರಣಾ ಘಟಕ
ರೌಡಿಶೀಟರ್ನಿಂದ ಹೊರಬಂದು ಸಮಾಜದಲ್ಲಿಉತ್ತಮ ವ್ಯವಕ್ತಿಯಾಗಿ ಬಾಳಲು ಇಚ್ಛಿಸುವ ರೌಡಿಶೀಟರ್ಗಳ ಆಗುಹೋಗುಗಳ ಬಗ್ಗೆ ಪರಿಶೀಲನೆ ನಡೆಸಲು ಗೂಂಡಾ ಸುಧಾರಣಾ ಘಟಕವನ್ನು ಕಮಿಷನರೇಟ್ನಲ್ಲಿಸ್ಥಾಪಿಸಲು ಕಮಿಷನರ್ ಡಾ.ಹರ್ಷ ನಿರ್ಧರಿಸಿದ್ದಾರೆ.
ಈ ಘಟಕದಿಂದ ರೌಡಿಶೀಟರ್ಗಳ ಪೂರ್ವಾಪರವನ್ನು ಅವಲೋಕಿಸಿ, ಆಯಾ ಠಾಣೆಗಳಿಂದ ಮಾಹಿತಿಯನ್ನು ಸಂಗ್ರಹಿಸಲಿದೆ. ಬಳಿಕ ರೌಡಿಶೀಟರ್ಗಳಿಗೆ ಸ್ವ ಉದ್ಯೋಗಕ್ಕೆ ನೆರವಾಗಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಿದೆ. ಎನ್ಜಿಒ ಹಾಗೂ ಸರಕಾರಿ ಸಂಸ್ಥೆಗಳ ಜತೆಗೆ ಸೇತುವಾಗಿ ಈ ಘಟಕ ಕಾರ್ಯನಿರ್ವಹಿಸಲಿದೆ.
ರೌಡಿಶೀಟರ್ಗಳ ಮೇಲೆ ನಿಗಾ
ವಿವಿಧ ಕೃತ್ಯಗಳಲ್ಲಿಪಾಲ್ಗೊಂಡು ರೌಡಿಶೀಟರ್ ಆಗಿರುವವರ ಚಟುವಟಿಕೆಗಳ ಬಗ್ಗೆ ಹದ್ದಿನ ಕಣ್ಣು ಇರಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. 'ನನ್ನ ಬೀಟ್- ನನ್ನ ಹೆಮ್ಮೆ' ಯೋಜನೆಯಲ್ಲಿಸುಮಾರು 2 ಲಕ್ಷ ಮಂದಿ ನಾಗರಿಕರು ಸದಸ್ಯರಾಗಿದ್ದು, ಅವರ ಮೂಲಕವೂ ಅಲ್ಲಿನ ರೌಡಿಶೀಟರ್ಗಳ ಚಟುವಟಿಕೆಗಳ ಬಗ್ಗೆ ಗುಪ್ತವಾಗಿ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.
ಸುಧಾರಣೆಗೆ ಸಾಕಷ್ಟು ಅವಕಾಶ ನೀಡಿದರೂ ಸುಧಾರಿಸದ ರೌಡಿಶೀಟರ್ಗಳ ವಿರುದ್ಧ ಕಾನೂನು ರೀತಿಯಲ್ಲಿಮುಂದಿನ ಕಠಿಣ ಹಾದಿಯನ್ನು ಅನುಸರಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಸಮಾಜದ ಶಾಂತಿಭಂಗಕ್ಕೆ ಅವಕಾಶ ನೀಡುವುದಿಲ್ಲಎಂದು ಕಮಿಷನರ್ ಡಾ.ಹರ್ಷ ಹೇಳಿದರು.
ರೌಡಿಶೀಟರ್ಗಳು ಮನಃ ಪರಿವರ್ತನೆಗೊಳಿಸಿ ಸನ್ನಡತೆಯಿಂದ ಸಮಾಜದಲ್ಲಿಎಲ್ಲರಂತೆ ಬಾಳಲು ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ. ಪಿ.ಎಸ್.ಹರ್ಷ ಹೊಸ ಅವಕಾಶ ಕಲ್ಪಿಸಿದ್ದಾರೆ.
ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿಬುಧವಾರ ಸುಮಾರು 355 ರೌಡಿ ಶೀಟರ್ಗಳ ಪರೇಡ್ ನಡೆಸಿದ ಬಳಿಕ ಕಮಿಷನರ್ ಡಾ.ಹರ್ಷ ಅವರು ಈ ಅವಕಾಶ ನೀಡಿದ್ದಾರೆ.
ಪ್ರತಿ ವಾರ ತಪ್ಪದೆ ಆಯಾ ಪೊಲೀಸ್ ಠಾಣೆಗೆ ಬಂದು ಸಹಿ ಹಾಕಿ, ತಮ್ಮ ವಾರದ ಚಟುವಟಿಕೆ ಬಗ್ಗೆ ಲಿಖಿತ ಮಾಹಿತಿ ನೀಡಬೇಕು. ಇದನ್ನು ಠಾಣಾಧಿಕಾರಿಗಳು ಅಡ್ಡಪರಿಶೀಲನೆ ಮಾಡುತ್ತಾರೆ. ಸನ್ನಡತೆಯಲ್ಲಿಇರುವುದು ಕಂಡುಬಂದರೆ, ಅಂತಹ ರೌಡಿ ಶೀಟರ್ಗಳಿಗೆ ಹಾಗೂ ಅವರ ಕುಟುಂಬಕ್ಕೆ ಸಮಾಜದ ಮುಖ್ಯವಾಹಿನಿಯಲ್ಲಿಜೀವಿಸಲು ಅವಕಾಶ ಕಲ್ಪಿಸುವುದು ಅಲ್ಲದೆ, ಸ್ವ ಉದ್ಯೋಗಕ್ಕೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ಕಮಿಷನರ್ ಡಾ.ಹರ್ಷ ಅವರು ರೌಡಿಶೀಟರ್ಗಳಿಗೆ 'ನಾನು ಭಾರತೀಯ, ಭಾರತದ ಉನ್ನತಿಗಾಗಿ ಶ್ರಮಿಸುತ್ತೇನೆ' ಎನ್ನುವ ಪ್ರತಿಜ್ಞೆಯನ್ನು ಬೋಧಿಸಿದರು.
ಕಮಿಷನರ್ ನೀಡಿದ ಸಲಹೆ ಏನು ?
ಸಮಾಜ ಘಾತುಕ ಕೃತ್ಯದಲ್ಲಿತೊಡಗುವುದು ಮುಂದುವರಿಸುವುದಾದರೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಹಿಂದೇಟು ಹಾಕುವುದಿಲ್ಲಎಂಬ ಸ್ಪಷ್ಟ ಎಚ್ಚರಿಕೆಯನ್ನೂ ನೀಡಿದ್ದಾರೆ. ರೌಡಿಶೀಟರ್ಗಳಿಗೆ ಬುದ್ಧಿಮಾತು ಹೇಳಿ ಸಾಗಹಾಕುವ ಬದಲು ಅವರು ಮನಃಪರಿವರ್ತನೆಗೊಂಡು ಉತ್ತಮ ಪ್ರಜೆಯಾಗಿ ಬಾಳುವುದಕ್ಕೆ ಎಲ್ಲವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಕಮಿಷನರೇಟ್ ಕಚೇರಿಯಲ್ಲಿಪ್ರತ್ಯೇಕ ಘಟಕವನ್ನು ತೆರೆಯುವುದಾಗಿಯೂ ಅವರು ಹೇಳಿದ್ದಾರೆ.
ರೌಡಿಶೀಟರ್ಗಳು ಪ್ರತಿ ಸೋಮವಾರ ತಮ್ಮ ಇಡೀ ವಾರದ ದಿನಚರಿಯನ್ನು ತಂದು ಆಯಾ ಪೊಲೀಸ್ ಠಾಣೆಗೆ ಒಪ್ಪಿಸಬೇಕು. ನಿರಂತರವಾಗಿ ಆರು ತಿಂಗಳು ಕಾಲ ಈ ರೀತಿ ಚಾಚೂ ತಪ್ಪದೆ ಮಾಡಿದರೆ, ಅಂತಹ ರೌಡಿಶೀಟರ್ ಕ್ರಿಮಿನಲ್ ಕೃತ್ಯದಿಂದ ಹೊರಗೆ ಬರುತ್ತಿರುವುದು ಖಚಿತವಾದರೆ, ಸನ್ನಡತೆ ವರ್ತನೆಗೆ ಕಾನೂನು ರೀತಿಯ ನೆರವು ನೀಡಲಾಗುವುದು. ಅಲ್ಲದೆ ಪ್ರತಿ ಬಾರಿ ಮನೆಗೆ ಬಂದು ತನಿಖೆ ನಡೆಸುವುದನ್ನು ನಿಲ್ಲಿಸಲಾಗುವುದು. ಸನ್ನಡತೆಯಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಇಚ್ಛಿಸಿ ಮನಃಪರಿವರ್ತನೆಗೊಳ್ಳುವ ರೌಡಿಶೀಟರ್ಗಳು ಬಯಸಿದಲ್ಲಿಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳಡಿಯಲ್ಲಿಸ್ವ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗುವುದು. ಅದಕ್ಕೆ ಬೇಕಾದ ನೆರವನ್ನು ಪೊಲೀಸ್ ಇಲಾಖೆ ಕಲ್ಪಿಸಲಿದೆ.
ಒಂದು ರೌಡಿಶೀಟರ್ ಮನೆಯಲ್ಲಿಇನ್ನೊಂದು ರೌಡಿಶೀಟರ್ ಹಣೆಪಟ್ಟಿ ತಲೆಎತ್ತುವುದು ಬೇಡ. ಜನಿಸುವಾಗ ಯಾರೂ ರೌಡಿಶೀಟರ್ ಹಣೆಪಟ್ಟಿ ಕಟ್ಟಿಕೊಂಡು ಬರುವುದಿಲ್ಲ. ಆದ್ದರಿಂದ ಕುಟುಂಬದ ಗೌರವಕ್ಕೆ ಕುಂದು ಬಾರದಂತೆ ನೆರವಾಗುವುದು ಪೊಲೀಸ್ ಇಲಾಖೆಯ ಉದ್ದೇಶ. ಕುಟುಂಬಸ್ಥರು ಬಯಸಿದಲ್ಲಿಸ್ವ ಉದ್ಯೋಗಕ್ಕೂ ಪೊಲೀಸರು ನೆರವಾಗಲಿದ್ದಾರೆ.
ಗೂಂಡಾ ಸುಧಾರಣಾ ಘಟಕ
ರೌಡಿಶೀಟರ್ನಿಂದ ಹೊರಬಂದು ಸಮಾಜದಲ್ಲಿಉತ್ತಮ ವ್ಯವಕ್ತಿಯಾಗಿ ಬಾಳಲು ಇಚ್ಛಿಸುವ ರೌಡಿಶೀಟರ್ಗಳ ಆಗುಹೋಗುಗಳ ಬಗ್ಗೆ ಪರಿಶೀಲನೆ ನಡೆಸಲು ಗೂಂಡಾ ಸುಧಾರಣಾ ಘಟಕವನ್ನು ಕಮಿಷನರೇಟ್ನಲ್ಲಿಸ್ಥಾಪಿಸಲು ಕಮಿಷನರ್ ಡಾ.ಹರ್ಷ ನಿರ್ಧರಿಸಿದ್ದಾರೆ.
ಈ ಘಟಕದಿಂದ ರೌಡಿಶೀಟರ್ಗಳ ಪೂರ್ವಾಪರವನ್ನು ಅವಲೋಕಿಸಿ, ಆಯಾ ಠಾಣೆಗಳಿಂದ ಮಾಹಿತಿಯನ್ನು ಸಂಗ್ರಹಿಸಲಿದೆ. ಬಳಿಕ ರೌಡಿಶೀಟರ್ಗಳಿಗೆ ಸ್ವ ಉದ್ಯೋಗಕ್ಕೆ ನೆರವಾಗಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಿದೆ. ಎನ್ಜಿಒ ಹಾಗೂ ಸರಕಾರಿ ಸಂಸ್ಥೆಗಳ ಜತೆಗೆ ಸೇತುವಾಗಿ ಈ ಘಟಕ ಕಾರ್ಯನಿರ್ವಹಿಸಲಿದೆ.
ರೌಡಿಶೀಟರ್ಗಳ ಮೇಲೆ ನಿಗಾ
ವಿವಿಧ ಕೃತ್ಯಗಳಲ್ಲಿಪಾಲ್ಗೊಂಡು ರೌಡಿಶೀಟರ್ ಆಗಿರುವವರ ಚಟುವಟಿಕೆಗಳ ಬಗ್ಗೆ ಹದ್ದಿನ ಕಣ್ಣು ಇರಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. 'ನನ್ನ ಬೀಟ್- ನನ್ನ ಹೆಮ್ಮೆ' ಯೋಜನೆಯಲ್ಲಿಸುಮಾರು 2 ಲಕ್ಷ ಮಂದಿ ನಾಗರಿಕರು ಸದಸ್ಯರಾಗಿದ್ದು, ಅವರ ಮೂಲಕವೂ ಅಲ್ಲಿನ ರೌಡಿಶೀಟರ್ಗಳ ಚಟುವಟಿಕೆಗಳ ಬಗ್ಗೆ ಗುಪ್ತವಾಗಿ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ.
ಸುಧಾರಣೆಗೆ ಸಾಕಷ್ಟು ಅವಕಾಶ ನೀಡಿದರೂ ಸುಧಾರಿಸದ ರೌಡಿಶೀಟರ್ಗಳ ವಿರುದ್ಧ ಕಾನೂನು ರೀತಿಯಲ್ಲಿಮುಂದಿನ ಕಠಿಣ ಹಾದಿಯನ್ನು ಅನುಸರಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಸಮಾಜದ ಶಾಂತಿಭಂಗಕ್ಕೆ ಅವಕಾಶ ನೀಡುವುದಿಲ್ಲಎಂದು ಕಮಿಷನರ್ ಡಾ.ಹರ್ಷ ಹೇಳಿದರು.