ಆ್ಯಪ್ನಗರ

ಕೊಂಕಣ ರೈಲ್ವೆ ಮೂಲಕ ಮುಂಬಯಿಗೆ ರಬ್ಬರ್‌ ಸಾಗಾಟ: ಉಜಿರೆಯಲ್ಲಿ ಚಾಲನೆ

16 ಟನ್‌ ರಬ್ಬರನ್ನು ಲಾೖಲ ಗೋದಾಮಿನಿಂದ ಮಂಗಳೂರಿನ ತೋಕೂರು ತನಕ ಕೊಂಕಣ ರೈಲ್ವೆ ಇಲಾಖೆಯ ಲಾರಿಗಳಲ್ಲಿ ಸಾಗಿಸಿ, ಅಲ್ಲಿಂದ ಕೊಂಕಣ ರೈಲಿನ ಮೂಲಕ ಅತಿ ಕಡಿಮೆ ಅವಧಿ ಹಾಗೂ ಅತಿ ಕಡಿಮೆ ವೆಚ್ಚದಲ್ಲಿ ಕೃಷಿ ಉತ್ಪನ್ನಗಳ ಸಾಗಾಟ ನಡೆಸುವ ಯೋಜನೆ ಇದಾಗಿದೆ. ಇದರಿಂದ ರೈತರಿಗೆ ಮತ್ತು ಸಂಘ-ಸಂಸ್ಥೆಗಳಿಗೆ ಪ್ರಯೋಜನಕಾರಿಯಾಗಿದೆ

Vijaya Karnataka Web 30 Sep 2020, 6:55 am
ಉಜಿರೆ: ಸರಕಾರದ ಯೋಜನೆಗಳ ಸದುಪಯೋಗವನ್ನು ಸಂಘ ಸಂಸ್ಥೆಗಳು ಪಡೆದುಕೊಂಡರೆ ವೆಚ್ಚಗಳನ್ನು ಕಡಿಮೆ ಮಾಡಿಕೊಂಡು, ಅದರಿಂದ ಸಿಗುವ ಲಾಭದಿಂದ ಸದಸ್ಯರಿಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ ಎಂದು ಬೆಳ್ತಂಗಡಿ ತಾಲೂಕು ರಬ್ಬರ್‌ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ನಿಕಟಪೂರ್ವ ಅಧ್ಯಕ್ಷ ಶ್ರೀಧರ ಜಿ. ಭಿಡೆ ಹೇಳಿದರು.
Vijaya Karnataka Web ರಬ್ಬರ್


ಲಾೖಲದಲ್ಲಿರುವ ಸಂಘದ ರಬ್ಬರ್‌ ಗೋದಾಮಿನಿಂದ ಕೊಂಕಣ ರೈಲ್ವೆ ಮೂಲಕ ಮುಂಬಯಿಗೆ ರಬ್ಬರ್‌ ಸಾಗಾಟ ನಡೆಸುವ ಯೋಜನೆಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಾಯೋಗಿಕವಾಗಿ 16 ಟನ್‌ ರಬ್ಬರನ್ನು ಲಾೖಲ ಗೋದಾಮಿನಿಂದ ಮಂಗಳೂರಿನ ತೋಕೂರು ತನಕ ಕೊಂಕಣ ರೈಲ್ವೆ ಇಲಾಖೆಯ ಲಾರಿಗಳಲ್ಲಿ ಸಾಗಿಸಿ, ಅಲ್ಲಿಂದ ಕೊಂಕಣ ರೈಲಿನ ಮೂಲಕ ಅತಿ ಕಡಿಮೆ ಅವಧಿ ಹಾಗೂ ಅತಿ ಕಡಿಮೆ ವೆಚ್ಚದಲ್ಲಿ ಕೃಷಿ ಉತ್ಪನ್ನಗಳ ಸಾಗಾಟ ನಡೆಸುವ ಯೋಜನೆ ಇದಾಗಿದೆ. ಇದು ರೈತರಿಗೆ ಮತ್ತು ಸಂಘ-ಸಂಸ್ಥೆಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದರು.

ಸೌರ ಶಾಖಾ ಘಟಕಕ್ಕೆ ಬೇಡಿಕೆ: ಅಡಕೆ, ತೆಂಗಿನಕಾಯಿ ಒಣಗಿಸಲು ಬಳಕೆ; ಸಹಾಯಧನ ಲಭ್ಯ!

ಕೊಂಕಣ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ, ರೈಲ್ವೆ ರೀಜನಲ್‌ ಟ್ರಾಫಿಕ್‌ ಮ್ಯಾನೇಜರ್‌ ವಿನಯಕುಮಾರ್‌, ಸೀನಿಯರ್‌ ಟಿಟಿಇ ಸತೀಶ್‌ ಕುಮಾರ್‌ ಆರ್‌. ಎನ್‌., ಸಂಘದ ನಿರ್ದೇಶಕರಾದ ಪಿ.ವಿ. ಅಬ್ರಹಾಂ, ಕೆ.ಜೆ. ಆಗಸ್ಟೀನ್‌, ಶಶಿಧರ ಡೋಂಗ್ರೆ, ಗ್ರೇಶಿಯಸ್‌ ವೇಗಸ್‌, ಇ.ಸುಂದರ ಗೌಡ, ಜಯಶ್ರೀ ಡಿ.ಎಂ., ಕೇರಿಮಾರು ಬಾಲಕೃಷ್ಣ ಗೌಡ, ಎಚ್‌.ಪದ್ಮ ಗೌಡ, ಪಾರ್ಸೆಲ್‌ ಅಗ್ರಿಗೇಟರ್ಸ್‌ಗಳಾದ ಹ್ಯಾರೀಸ್‌, ಸಿನಾನ್‌ ಮತ್ತಿತರರು ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕ ಮಚ್ಚಿಮಲೆ ಅನಂತ ಭಟ್‌ ವಂದಿಸಿದರು.
ಅಡಕೆ ಸಂಶೋಧನೆಗೆ ರಾಜ್ಯ ಸರಕಾರ ನಿರ್ಧಾರ: ಎಂಎಸ್‌ ರಾಮಯ್ಯ ಅಪ್ಲೈಡ್‌ ಸೈನ್ಸ್‌ ವಿಭಾಗದಿಂದ ಸಂಶೋಧನೆ

ಮಹತ್ವಾಕಾಂಕ್ಷೆಯ ಯೋಜನೆ

ಕಿಸಾನ್‌ ಪಾರ್ಸೆಲ್‌ ಗೂಡ್ಸ್‌ ಟ್ರೈನ್‌ ಎಂಬ ಈ ಯೋಜನೆ ರೈತರ ಮನೆ ಬಾಗಿಲಿನಿಂದ ಕೃಷಿ ಉತ್ಪನ್ನಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಹೊರರಾಜ್ಯಗಳಿಗೆ ಸಾಗಾಟ ನಡೆಸುವ ಮಹತ್ವಾಕಾಂಕ್ಷೆ ಹೊಂದಿದೆ. ಯೋಜನೆಗೆ ರೈತರ ಮತ್ತು ಸಂಘ ಸಂಸ್ಥೆಗಳ ಬೆಂಬಲ ಬೇಕಾಗಿದೆ. ಈಗ ಪ್ರಾಯೋಗಿಕವಾಗಿ ಕೃಷಿ ಉತ್ಪನ್ನಗಳ ಸಾಗಾಟ ನಡೆಸುತ್ತಿದ್ದು, ಅಕ್ಟೋಬರ್‌ 3ರಂದು ಯೋಜನೆಯನ್ನು ಪುತ್ತೂರಿನಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಗುವುದು.
ಸುಧಾ ಕೃಷ್ಣಮೂರ್ತಿ, ಸಾರ್ವಜನಿಕ ಸಂಪರ್ಕಾಧಿಕಾರಿ, ಕೊಂಕಣ ರೈಲ್ವೆ ವಿಭಾಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ