ಆ್ಯಪ್ನಗರ

ಚಂದ್ರಯಾನ-2 ವೈಫಲ್ಯದ ಹಿಂದೆ ರಷ್ಯಾ ಕೈವಾಡ ಇರಬಹುದೆಂದ ಯು ಟಿ ಖಾದರ್

ಚಂದ್ರಯಾನ-2 ವಿಫಲತೆಯಲ್ಲಿ ರಷ್ಯಾದ ಕೈವಾಡ ಇರುವ ಶಂಕೆ ಇದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಅನುಮಾನ ವ್ಯಕ್ತಪಡಿಸಿದ್ದಾರೆ.

Vijaya Karnataka 8 Sep 2019, 10:24 am
ಮಂಗಳೂರು: ಬಹುನಿರೀಕ್ಷಿತ ಚಂದ್ರಯಾನ- 2 ಕೊನೇ ಕ್ಷಣದಲ್ಲಿವಿಫಲವಾಗಿದ್ದರೂ ನಾವು ಹೊಸ ಮೈಲಿಗಲ್ಲುಸಾಧಿಸಿದ್ದೇವೆ. ಇದನ್ನು ವಿಜ್ಞಾನಿಗಳ ವೈಫಲ್ಯ ಎನ್ನದೆ, ಅವರ ಜತೆ ನಾವಿದ್ದೇವೆ ಎಂದು ಅವರಲ್ಲಿಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕಿದೆ ಎಂದು ಶಾಸಕ ಯು.ಟಿ.ಖಾದರ್‌ ಹೇಳಿದರು.
Vijaya Karnataka Web utk


ಚಂದ್ರಯಾನ 2ರ ವಿಫಲತೆಯಲ್ಲಿ ರಷ್ಯಾದ ಷಡ್ಯಂತ್ರ ಇರುವ ಬಗ್ಗೆ ಅನುಮಾನವಿದೆ ಎಂದು ಸುದ್ದಿಗೋಷ್ಠಿಯಲ್ಲಿಶನಿವಾರ ಅವರು ಆರೋಪಿಸಿದರು.

ಚಂದ್ರನಿಂದ 2.1 ಕಿ.ಮೀ ದೂರದಲ್ಲಿ ಸಂಪರ್ಕ ಕಳೆದುಕೊಂಡ 'ವಿಕ್ರಮ್‌'

2007ರಲ್ಲಿಕೇಂದ್ರ ಸರಕಾರ ಈ ಯೋಜನೆಗೆ ಅನುಮೋದನೆ ಪಡೆದಿತ್ತು. ಆ ಸಮಯದಲ್ಲಿಯೇ ಯೋಜನೆ ಸಿದ್ಧಪಡಿಸಲು ಸಹಿ ಹಾಕಿದ್ದವು. ಭಾರತ ಆರ್ಬಿಟರ್‌ ಮತ್ತು ರೋವರ್‌ ಸಿದ್ಧಪಡಿಸುವ ಜವಾಬ್ದಾರಿ ಪಡೆದಿದ್ದರೆ ರಷ್ಯಾ ಲ್ಯಾಂಡರ್‌ ನೀಡುವುದಾಗಿ ಒಪ್ಪಂದದಲ್ಲಿ ತಿಳಿಸಿತ್ತು. 2009ರ ಆಗಸ್ಟ್‌ನಲ್ಲಿಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಸಮಯಕ್ಕೆ ಸರಿಯಾಗಿ ರಷ್ಯಾ ಲ್ಯಾಂಡರ್‌ ನೀಡಲು ವಿಫಲವಾದ ಕಾರಣ ಯೋಜನೆ 2013ಕ್ಕೆ ಮುಂದೂಡಲಾಯಿತು ಎಂದರು.

ಲ್ಯಾಂಡರ್‌ ಜೊತೆ ಸಂಪರ್ಕ ಸಾಧಿಸಲು ಮುಂದಿನ 14 ದಿನ ಯತ್ನ: ಕೆ. ಶಿವನ್‌

2016ಕ್ಕೆ ಯೋಜನೆ ನಿಗದಿಗೊಳಿಸಿ ಕೊನೆಗೂ ರಷ್ಯಾ ಲ್ಯಾಂಡರ್‌ ನೀಡದೆ ಒಪ್ಪಂದ ಮುರಿದು ಮೋಸ ಮಾಡಿತ್ತು. ಆದರೂ ಹಿಂಜರಿಯದ ಭಾರತದ ವಿಜ್ಞಾನಿಗಳು ಸ್ವತಃ ತಾವೇ ಲ್ಯಾಂಡರ್‌ ಸಿದ್ಧಪಡಿಸಿದ್ದರು. ಕೊನೆ ಹಂತದಲ್ಲಿಲ್ಯಾಂಡರ್‌ನ ಸಂಪರ್ಕ ಕಡಿತಗೊಂಡಿದ್ದು, ಈ ವೈಫಲ್ಯದ ಹಿಂದೆ ಭಾರತದ ಅಭ್ಯುದಯ ಬಯಸದ ಅಂತಾರಾಷ್ಟ್ರೀಯ ಮಟ್ಟದ ಷಡ್ಯಂತರದ ಅನುಮಾನ ಕಾಡುತ್ತಿದೆ. ಕೇಂದ್ರ ಸರಕಾರ ಈ ಬಗ್ಗೆ ತನಿಖೆ ನಡೆಸಬೇಕು. ವಿಜ್ಞಾನಿಗಳು ಇದರಿಂದ ಕುಗ್ಗಬಾರದು. ಇಂದಲ್ಲನಾಳೆ ಅವರು ಗುರಿ ತಲುಪುವ ವಿಶ್ವಾಸ ನಮಗಿದೆ. ವಿಜ್ಞಾನಿಗಳು ನಮ್ಮ ಹೆಮ್ಮೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಪ್ರಕೃತಿವಿಕೋಪದಿಂದ ಸಾವಿರಾರು ಮಂದಿ ಸಂಕಷ್ಟಕ್ಕೀಡಾದಾಗ ನೆರವು ನೀಡಲು ಹಿಂದೆ ಮುಂದೆ ನೋಡಿದ ಪ್ರಧಾನಿ ನರೇಂದ್ರ ಮೋದಿ, ರಷ್ಯಾಕ್ಕೆ ಏಳು ಸಾವಿರ ಕೋಟಿ ನೆರವು ನೀಡುವುದಾಗಿ ಘೋಷಿಸಿದ್ದಾರೆ. ದೇಶವು ರಿಸವ್‌ರ್‍ ಬ್ಯಾಂಕ್‌ ಹಣದಲ್ಲಿನಡೆಯುತ್ತಿದೆ. ಎಲ್ಲೆಡೆ ಆರ್ಥಿಕ ಹಿಂಜರಿತ ಕಾಡುತ್ತಿದೆ. ರಷ್ಯಾಕ್ಕೆ ಕೋಟ್ಯಂತರ ರೂ. ನೀಡಿರುವುದು ಎಲ್ಲಿಂದ ಎಂದು ಪ್ರಧಾನಮಂತ್ರಿ ದೇಶದ ಜನತೆಗೆ ಉತ್ತರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ