ಆ್ಯಪ್ನಗರ

ಕಾಲಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಕೌಶಿಕ್‌ನನ್ನು ಭೇಟಿಯಾದ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌!

ಬಂಟ್ವಾಳ ಎಸ್‌ವಿಎಸ್‌ ಪ್ರೌಢಶಾಲೆಯ ಹತ್ತನೇ ತರಗತಿ ಕಲಿಯುತ್ತಿರುವ ಬಾಲಕ ಕೌಶಿಕ್‌ ಕಾಲ ಬೆರಳ ಸಹಾಯದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಸಾಧಕ. ಈ ವಿದ್ಯಾರ್ಥಿಯನ್ನು ಶಿಕ್ಷಣ ಸಚಿವರು ಭೇಟಿ ಮಾಡಿದ್ದು, ಉಭಯ ಕುಶಲೋಪರಿ ವಿಚಾರಿಸಿದರು.

Vijaya Karnataka Web 10 Jul 2020, 6:49 pm
ಕೈಕಂಬ (ಬಂಟ್ವಾಳ, ದ.ಕ.): ಬಂಟ್ವಾಳ ಎಸ್‌ವಿಎಸ್‌ ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿಭಾಗದಲ್ಲಿ ಹತ್ತನೇ ತರಗತಿ ಕಲಿಯುತ್ತಿರುವ ಬಾಲಕ ಕೌಶಿಕ್‌ ಕಾಲ ಬೆರಳ ಸಹಾಯದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಸಾಧಕ.
Vijaya Karnataka Web Physically Challenged student


ತಂದೆ ರಾಜೇಶ್‌ ಆಚಾರ್ಯ, ತಾಯಿ ಜಲಜಾಕ್ಷಿ ಆಚಾರ್ಯ. ಮನೆ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಬಸ್ತಿಪಡ್ಪುವಿನ ಕಂಚಿಗಾರಪೇಟೆ. ಕೌಶಿಕ್‌ ಅಂಗವೈಕಲ್ಯವಿರುವ ಬಾಲಕ. ಸಾಮಾನ್ಯವಾಗಿ ಅಂಗವೈಕಲ್ಯದ ಮಕ್ಕಳಿಗೆ ಪರೀಕ್ಷೆ ಬರೆಯಲು ಸಹಾಯಕನನ್ನು ಇಟ್ಟುಕೊಳ್ಳುವ ಅವಕಾಶ ಇರುತ್ತದೆ. ಆದರೆ ಕೌಶಿಕ್‌ ಎಲ್ಲವನ್ನೂ ನಿರಾಕರಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ತನ್ನ ಕಾಲಬೆರಳ ಸಹಾಯದಿಂದ ಇತರ ಮಕ್ಕಳಂತೆ ನಿಗದಿತ ಸಮಯದೊಳಗೆ ಸುಲಲಿತವಾಗಿ ಬರೆದ. ಇದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರ ಗಮನ ಸೆಳೆದಿತ್ತು.

ಶುಕ್ರವಾರ ಬಂಟ್ವಾಳ ತಾಲೂಕಿಗೆ ಭೇಟಿ ನೀಡಿದ ವೇಳೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರವೇಶ ದ್ವಾರದ ಬಳಿ ಕೌಶಿಕ್‌ನನ್ನು ಭೇಟಿಯಾದ ಸಚಿವರು, ಆತನ ಜತೆ ಉಭಯ ಕುಶಲೋಪರಿ ವಿಚಾರಿಸಿದರು.

ಕಾಲ್ಬೆರಳಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಶಿಕ್ಷಣ ಸಚಿವರ ಶಹಬ್ಬಾಸ್ ಪಡೆದ ಬಂಟ್ವಾಳದ ಕೌಶಿಕ್‌‌!

ನೀನೇ ನಮಗೆ ಸ್ಫೂರ್ತಿ ಎಂದು ಆತನ ಪಠ್ಯೇತರ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಯಾವ ಪರೀಕ್ಷೆ ಹೇಗಿತ್ತು ಎಂದು ಕೇಳಿದರು. ನಿನ್ನ ಸಾಧನೆಯ ಕುರಿತು ಅದೇ ದಿನ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದೆ ಎಂದರು. ಬಳಿಕ ತಮ್ಮ ಆಪ್ತ ಸಹಾಯಕನನ್ನು ಕರೆದು ಫೊಟೋ ತೆಗೆಸಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ