ಜಾನ್ ಡಿಸೋಜ ಕುಂದಾಪುರ
ಸಾಂಝಿ(ಪೇಪರ್ ಆರ್ಟ್)... ಇದು ಭಗವಾನ್ ಶ್ರೀಕೃಷ್ಣನ ಕಲೆ ಎಂದು ಗುರುತಿಸಿಕೊಂಡಿದೆ. ಮಥುರಾದ ಜನಪ್ರಿಯ ಕಲೆಯೂ ಹೌದು. ಇಂದು ಮರೆಯಾಗುತ್ತಿರುವ ಈ ಅಪರೂಪದ ಕಲೆಯನ್ನು ರಾಜ್ಯದ ವಿವಿಧಡೆ ಸಂಚರಿಸಿ ಪರಿಚಯಿಸುತ್ತಿರುವವರು ಮೈಸೂರಿನ ಖ್ಯಾತ ಕಲಾವಿದ ಎಫ್.ಎಸ್.ಹುಸೇನಿ.
ಕಳೆದ 18 ವರ್ಷಗಳಿಂದ ಸಾಂಝಿ ಯಾನೆ ಪೇಪರ್ ಆರ್ಟ್(ಕಾಗದ ಕತ್ತರಿ ಕಲೆ)ನಲ್ಲಿ ನಿರತರು. ಈಗಾಗಲೇ ರಾಜ್ಯದ 23ಕ್ಕೂ ಅಧಿಕ ಜಿಲ್ಲೆ ಸಂದರ್ಶಿಸಿದ್ದಾರೆ. ಶಾಲೆ, ಕಾಲೇಜು, ಹಳ್ಳಿಗಳಿಗೆ ತೆರಳಿ ಕಲೆ ಪರಿಚಯಿಸುವ, ಆಸಕ್ತಿ ಮೂಡಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಾಗದದಲ್ಲಿ ವಿಸ್ಮಯ ಅನಾವರಣ: ಸದ್ಯ ಕುಂದಾಪುರ ಬಳಿ ಕೋಟೇಶ್ವರದ ಕೆನರಾ ಕಿಡ್ಸ್ ಪ್ಲೇ ಸ್ಕೂಲ್ನಲ್ಲಿ ಚಿಣ್ಣರಿಗೆ ಆಯೋಜಿಸಿರುವ ಸಾಂಝಿ ಆರ್ಟ್ ಕಾರ್ಯಾಗಾರದಲ್ಲಿ ಭಾಗವಹಿಸಿರುವ ಅವರು ತನ್ನ ಅದ್ಭುತ ಕಲಾ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಕಾಗದದಲ್ಲಿ ಇವರು ಸೃಷ್ಟಿಸುವ ಚಿತ್ರಗಳು ಹುಬ್ಬೇರಿಸುವಂತಿದ್ದು, ವಿಸ್ಮಯಕಾರಿ. ಸದಾ ಪ್ರಯೋಗಶೀಲ ಕಲಾಕೃತಿಗಳಿಂದ ಗುರುತಿಸಿಕೊಂಡಿರುವ ಹುಸೇನಿ ಹಸಿರು ಸಂರಕ್ಷ ಣೆ ಉದ್ದೇಶದಿಂದ ಪರಿಸರಸ್ನೇಹಿ ಗಣೇಶ ಚಿತ್ರ ಕಾಗದ ಕತ್ತರಿ ಮೂಲಕ ಮೂಡಿಸುವುದನ್ನು ನೋಡುವುದೇ ಆನಂದ. ರಾಷ್ಟ್ರಾದ್ಯಂತ ಈ ಚಿತ್ರಕ್ಕೆ ಭಾರಿ ಬೇಡಿಕೆ ಕಂಡುಬಂದಿದೆ. ಇವರ ಕಲಾಕೃತಿಗಳು ಲಂಡನ್, ಜರ್ಮನ್, ಇಸ್ರೇಲ್ ಸಹಿತ ಅನೇಕ ರಾಷ್ಟ್ರಗಳಲ್ಲಿ ಜನಮೆಚ್ಚುಗೆ ಪಡೆದಿದೆ.
ಬಡಕುಟುಂಬದ ಹಿನ್ನೆಲೆ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವಸಮುದ್ರಂ ನಿವಾಸಿಯಾಗಿರುವ ಇವರು, ಮೈಸೂರಿನ ವೈಜಯಂತಿ ಕಲಾ ಶಾಲೆಯಲ್ಲಿ ಫೈನ್ ಆರ್ಟ್ ಡಿಪೊ್ಲಮಾ ಮತ್ತು ಆರ್ಟ್ ಮಾಸ್ಟರ್ ಶಿಕ್ಷ ಣ ಪಡೆದವರು. ಧಾರವಾಡದ ಕರ್ನಾಟಕ ವಿವಿಯಲ್ಲಿ ಚಿತ್ರಕಲೆಯಲ್ಲಿ ಬಿಎಫ್ಎ ಪದವೀಧರ. ಬಡಕುಟುಂಬದಲ್ಲಿ ಜನಿಸಿದ್ದ ಹುಸೇನಿ ಬಾಲ್ಯದಲ್ಲಿಯೇ ಕಾಗದ ಕತ್ತರಿಯಿಂದ ಕತ್ತರಿಸಿ ಅದಕ್ಕೊಂದು ರೂಪುಕೊಡುವ ಹವ್ಯಾಸ ಬೆಳೆಸಿಕೊಂಡರು. ತಾಯಿ ಜೀನತ್ ಉನ್ನೀಸಾಬಿ ಪ್ರೋತ್ಸಾಹ ತುಂಬಿದರು. ಸದಾ ಪ್ರಯೋಗಶೀಲ ಯತ್ನ, ಪ್ರತಿ ಕೃತಿಯಲ್ಲೂ ಹೊಸತನ ತುಡಿತದಿಂದ ಸಾಂಝಿ ಕಲೆಯಲ್ಲಿ ಉತ್ತುಂಗಕ್ಕೇರಿದ್ದಾರೆ. ಇವರ ಕಲಾಕೃತಿ ಪ್ರಪಂಚದ ನಾನಾ ರಾಷ್ಟ್ರಗಳಲ್ಲಿ ಬೆಳಗಿವೆ. ಪರಿಸರ ಸ್ನೇಹಿ ಗಣೇಶ, ಗಂಡಭೇರುಂಡ, ಮುಖವಾಡದಲ್ಲಿ ಮಾನವ, ಗೋವು ಹೀಗೆ ನಾನಾ ಪೇಪರ್ ಆರ್ಟ್ಗಳು ಅಚ್ಚರಿ ಮೂಡಿಸುತ್ತದೆ. ಸಾಂಝಿ ಕಲೆ ತನ್ನೊಬ್ಬನ ಸೊತ್ತಲ್ಲ ಎಂದು ಮನಗಂಡು ಅನೇಕ ಶಿಷ್ಯವೃಂದವನ್ನು ಸೃಷ್ಟಿಸಿದ್ದಾರೆ. ಮೈಸೂರಿನ ಇವರ ಶಿಷ್ಯ ರಾಘವೇಂದ್ರ ಗುರುವನ್ನೂ ಮೀರಿಸಿದ ಸಾಧನೆಗೈದಿದ್ದಾರೆ.
ಪ್ರಾಚೀನ ಕಲೆ: ಸಾಂಝಿ ಅಂದರೆ ಸಜಾವಟ್(ಶೃಂಗಾರದ ಸಿದ್ಧತೆ). ಇದು ಶ್ರೀಕೃಷ್ಣ ಪರಮಾತ್ಮನ ಕಲೆ ಎಂದು ಗುರುತಿಸಿಕೊಂಡಿದೆ. ಒತ್ತಡ ನಿವಾರಣೆ, ಮಾನಸಿಕ ನೆಮ್ಮದಿ ಈ ಕಲೆಯ ಮೂಲ ಆಶಯ. ಜಪಾನ್, ಚೈನಾದಲ್ಲಿ ಈ ಕಲೆ ಉಚ್ಛ್ರಾಯ ಕಂಡಿದೆ. ಭಾರತದಲ್ಲಿ ಅಪರೂಪವಾಗುತ್ತಿದೆ. ಕಾಗದ ಕತ್ತರಿ ಕಲೆ ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ವಯೋಮಾನದವರನ್ನೂ ಆಕರ್ಷಿಸುತ್ತದೆ. ಕಲೆಯಿಂದ ಸೃಜನಶೀಲತೆ, ಧ್ಯಾನ, ಒತ್ತಡ ನಿವಾರಣೆ ಸಿದ್ಧಿಸುತ್ತದೆ. ಕಲೆಯ ಪರಿಚಯ ಎಲ್ಲರಿಗೂ ಆಗಬೇಕೆಂಬ ನೆಲೆಯಲ್ಲಿ ರಾಜ್ಯದ ನಾನಾ ಜಿಲ್ಲೆಗೆ ಪಯಣ ಬೆಳೆಸುತ್ತಿದ್ದೇನೆ. ಕೆರೆಯ ನೀರು ಕೆರೆಗೆ ಚೆಲ್ಲುವಂತೆ ಊರೂರು ಸುತ್ತುತ್ತಿದ್ದೇನೆ. ರಬ್ಬರ್ ಪ್ಲ್ಯಾಂಟೇಶನ್, ಕಾಫಿತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಪರಿಚಯಿಸಿದ್ದೇನೆ ಎಂದರು ಹುಸೇನಿ.
ಅಪರೂಪದ ಜನಪದೀಯ ಕಲಾಪ್ರಕಾರ ಉಳಿಸುವಲ್ಲಿ ಇಂತಹ ಕಲಾವಿದರ ಪಾತ್ರ ಹಿರಿದಾದುದು. ಅವರ ಶ್ರಮ ಸರಕಾರ ಗುರುತಿಸಬೇಕು. ಪ್ರಚಾರದಿಂದ ದೂರವೇ ಉಳಿದಿರುವ ಹುಸೇನಿ ಊರೂರು ತಿರುಗಿ ಕಲೆಯ ಅರಿವು ಮೂಡಿಸುತ್ತಿರುವುದು ಸಾಮಾನ್ಯ ಕಾರ್ಯವಲ್ಲ. -ಸುಬ್ರಹ್ಮಣ್ಯ ಶೆಟ್ಟಿ ಕಾರ್ಯಾಗಾರ ಸಂಘಟಕ
ಸಾಂಝಿ(ಪೇಪರ್ ಆರ್ಟ್)... ಇದು ಭಗವಾನ್ ಶ್ರೀಕೃಷ್ಣನ ಕಲೆ ಎಂದು ಗುರುತಿಸಿಕೊಂಡಿದೆ. ಮಥುರಾದ ಜನಪ್ರಿಯ ಕಲೆಯೂ ಹೌದು. ಇಂದು ಮರೆಯಾಗುತ್ತಿರುವ ಈ ಅಪರೂಪದ ಕಲೆಯನ್ನು ರಾಜ್ಯದ ವಿವಿಧಡೆ ಸಂಚರಿಸಿ ಪರಿಚಯಿಸುತ್ತಿರುವವರು ಮೈಸೂರಿನ ಖ್ಯಾತ ಕಲಾವಿದ ಎಫ್.ಎಸ್.ಹುಸೇನಿ.
ಕಳೆದ 18 ವರ್ಷಗಳಿಂದ ಸಾಂಝಿ ಯಾನೆ ಪೇಪರ್ ಆರ್ಟ್(ಕಾಗದ ಕತ್ತರಿ ಕಲೆ)ನಲ್ಲಿ ನಿರತರು. ಈಗಾಗಲೇ ರಾಜ್ಯದ 23ಕ್ಕೂ ಅಧಿಕ ಜಿಲ್ಲೆ ಸಂದರ್ಶಿಸಿದ್ದಾರೆ. ಶಾಲೆ, ಕಾಲೇಜು, ಹಳ್ಳಿಗಳಿಗೆ ತೆರಳಿ ಕಲೆ ಪರಿಚಯಿಸುವ, ಆಸಕ್ತಿ ಮೂಡಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಾಗದದಲ್ಲಿ ವಿಸ್ಮಯ ಅನಾವರಣ: ಸದ್ಯ ಕುಂದಾಪುರ ಬಳಿ ಕೋಟೇಶ್ವರದ ಕೆನರಾ ಕಿಡ್ಸ್ ಪ್ಲೇ ಸ್ಕೂಲ್ನಲ್ಲಿ ಚಿಣ್ಣರಿಗೆ ಆಯೋಜಿಸಿರುವ ಸಾಂಝಿ ಆರ್ಟ್ ಕಾರ್ಯಾಗಾರದಲ್ಲಿ ಭಾಗವಹಿಸಿರುವ ಅವರು ತನ್ನ ಅದ್ಭುತ ಕಲಾ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಕಾಗದದಲ್ಲಿ ಇವರು ಸೃಷ್ಟಿಸುವ ಚಿತ್ರಗಳು ಹುಬ್ಬೇರಿಸುವಂತಿದ್ದು, ವಿಸ್ಮಯಕಾರಿ. ಸದಾ ಪ್ರಯೋಗಶೀಲ ಕಲಾಕೃತಿಗಳಿಂದ ಗುರುತಿಸಿಕೊಂಡಿರುವ ಹುಸೇನಿ ಹಸಿರು ಸಂರಕ್ಷ ಣೆ ಉದ್ದೇಶದಿಂದ ಪರಿಸರಸ್ನೇಹಿ ಗಣೇಶ ಚಿತ್ರ ಕಾಗದ ಕತ್ತರಿ ಮೂಲಕ ಮೂಡಿಸುವುದನ್ನು ನೋಡುವುದೇ ಆನಂದ. ರಾಷ್ಟ್ರಾದ್ಯಂತ ಈ ಚಿತ್ರಕ್ಕೆ ಭಾರಿ ಬೇಡಿಕೆ ಕಂಡುಬಂದಿದೆ. ಇವರ ಕಲಾಕೃತಿಗಳು ಲಂಡನ್, ಜರ್ಮನ್, ಇಸ್ರೇಲ್ ಸಹಿತ ಅನೇಕ ರಾಷ್ಟ್ರಗಳಲ್ಲಿ ಜನಮೆಚ್ಚುಗೆ ಪಡೆದಿದೆ.
ಬಡಕುಟುಂಬದ ಹಿನ್ನೆಲೆ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವಸಮುದ್ರಂ ನಿವಾಸಿಯಾಗಿರುವ ಇವರು, ಮೈಸೂರಿನ ವೈಜಯಂತಿ ಕಲಾ ಶಾಲೆಯಲ್ಲಿ ಫೈನ್ ಆರ್ಟ್ ಡಿಪೊ್ಲಮಾ ಮತ್ತು ಆರ್ಟ್ ಮಾಸ್ಟರ್ ಶಿಕ್ಷ ಣ ಪಡೆದವರು. ಧಾರವಾಡದ ಕರ್ನಾಟಕ ವಿವಿಯಲ್ಲಿ ಚಿತ್ರಕಲೆಯಲ್ಲಿ ಬಿಎಫ್ಎ ಪದವೀಧರ. ಬಡಕುಟುಂಬದಲ್ಲಿ ಜನಿಸಿದ್ದ ಹುಸೇನಿ ಬಾಲ್ಯದಲ್ಲಿಯೇ ಕಾಗದ ಕತ್ತರಿಯಿಂದ ಕತ್ತರಿಸಿ ಅದಕ್ಕೊಂದು ರೂಪುಕೊಡುವ ಹವ್ಯಾಸ ಬೆಳೆಸಿಕೊಂಡರು. ತಾಯಿ ಜೀನತ್ ಉನ್ನೀಸಾಬಿ ಪ್ರೋತ್ಸಾಹ ತುಂಬಿದರು. ಸದಾ ಪ್ರಯೋಗಶೀಲ ಯತ್ನ, ಪ್ರತಿ ಕೃತಿಯಲ್ಲೂ ಹೊಸತನ ತುಡಿತದಿಂದ ಸಾಂಝಿ ಕಲೆಯಲ್ಲಿ ಉತ್ತುಂಗಕ್ಕೇರಿದ್ದಾರೆ. ಇವರ ಕಲಾಕೃತಿ ಪ್ರಪಂಚದ ನಾನಾ ರಾಷ್ಟ್ರಗಳಲ್ಲಿ ಬೆಳಗಿವೆ. ಪರಿಸರ ಸ್ನೇಹಿ ಗಣೇಶ, ಗಂಡಭೇರುಂಡ, ಮುಖವಾಡದಲ್ಲಿ ಮಾನವ, ಗೋವು ಹೀಗೆ ನಾನಾ ಪೇಪರ್ ಆರ್ಟ್ಗಳು ಅಚ್ಚರಿ ಮೂಡಿಸುತ್ತದೆ. ಸಾಂಝಿ ಕಲೆ ತನ್ನೊಬ್ಬನ ಸೊತ್ತಲ್ಲ ಎಂದು ಮನಗಂಡು ಅನೇಕ ಶಿಷ್ಯವೃಂದವನ್ನು ಸೃಷ್ಟಿಸಿದ್ದಾರೆ. ಮೈಸೂರಿನ ಇವರ ಶಿಷ್ಯ ರಾಘವೇಂದ್ರ ಗುರುವನ್ನೂ ಮೀರಿಸಿದ ಸಾಧನೆಗೈದಿದ್ದಾರೆ.
ಪ್ರಾಚೀನ ಕಲೆ: ಸಾಂಝಿ ಅಂದರೆ ಸಜಾವಟ್(ಶೃಂಗಾರದ ಸಿದ್ಧತೆ). ಇದು ಶ್ರೀಕೃಷ್ಣ ಪರಮಾತ್ಮನ ಕಲೆ ಎಂದು ಗುರುತಿಸಿಕೊಂಡಿದೆ. ಒತ್ತಡ ನಿವಾರಣೆ, ಮಾನಸಿಕ ನೆಮ್ಮದಿ ಈ ಕಲೆಯ ಮೂಲ ಆಶಯ. ಜಪಾನ್, ಚೈನಾದಲ್ಲಿ ಈ ಕಲೆ ಉಚ್ಛ್ರಾಯ ಕಂಡಿದೆ. ಭಾರತದಲ್ಲಿ ಅಪರೂಪವಾಗುತ್ತಿದೆ. ಕಾಗದ ಕತ್ತರಿ ಕಲೆ ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ವಯೋಮಾನದವರನ್ನೂ ಆಕರ್ಷಿಸುತ್ತದೆ. ಕಲೆಯಿಂದ ಸೃಜನಶೀಲತೆ, ಧ್ಯಾನ, ಒತ್ತಡ ನಿವಾರಣೆ ಸಿದ್ಧಿಸುತ್ತದೆ. ಕಲೆಯ ಪರಿಚಯ ಎಲ್ಲರಿಗೂ ಆಗಬೇಕೆಂಬ ನೆಲೆಯಲ್ಲಿ ರಾಜ್ಯದ ನಾನಾ ಜಿಲ್ಲೆಗೆ ಪಯಣ ಬೆಳೆಸುತ್ತಿದ್ದೇನೆ. ಕೆರೆಯ ನೀರು ಕೆರೆಗೆ ಚೆಲ್ಲುವಂತೆ ಊರೂರು ಸುತ್ತುತ್ತಿದ್ದೇನೆ. ರಬ್ಬರ್ ಪ್ಲ್ಯಾಂಟೇಶನ್, ಕಾಫಿತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಪರಿಚಯಿಸಿದ್ದೇನೆ ಎಂದರು ಹುಸೇನಿ.
ಅಪರೂಪದ ಜನಪದೀಯ ಕಲಾಪ್ರಕಾರ ಉಳಿಸುವಲ್ಲಿ ಇಂತಹ ಕಲಾವಿದರ ಪಾತ್ರ ಹಿರಿದಾದುದು. ಅವರ ಶ್ರಮ ಸರಕಾರ ಗುರುತಿಸಬೇಕು. ಪ್ರಚಾರದಿಂದ ದೂರವೇ ಉಳಿದಿರುವ ಹುಸೇನಿ ಊರೂರು ತಿರುಗಿ ಕಲೆಯ ಅರಿವು ಮೂಡಿಸುತ್ತಿರುವುದು ಸಾಮಾನ್ಯ ಕಾರ್ಯವಲ್ಲ. -ಸುಬ್ರಹ್ಮಣ್ಯ ಶೆಟ್ಟಿ ಕಾರ್ಯಾಗಾರ ಸಂಘಟಕ