ಆ್ಯಪ್ನಗರ

ಏಳುಪಟ್ಣ ಮೊಗವೀರ ಸಂಯುಕ್ತ ಮಹಾಸಭಾದಿಂದ ಸಾಮೂಹಿಕ ಸಮುದ್ರ ಪೂಜೆ

ಸಮುದ್ರದಲ್ಲಿ ಜೀವನ ನಿರ್ವಹಿಸುವ ಕೆಲಸಗಾರರಿಗೆ ಸಮುದ್ರ ರಾಜನ ಅನುಗ್ರಹವಿರಲಿ. ತಂದೆ ತಾಯಿಯ ಅನುಗ್ರಹವಿಲ್ಲದೇ ಯಾವ ಮಕ್ಕಳೂ ಏಳಿಗೆಯನ್ನು ಪಡೆಯಲು ಸಾಧ್ಯವಿಲ್ಲ. ಯಾರು ತಂದೆ ತಾಯಿಯನ್ನು ಸುಖದಿಂದ ನೋಡುತ್ತಾರೋ ಅವರು ಜೀವನದಲ್ಲಿ ಸುಖಿಯಾಗಿರುತ್ತಾರೆ ಎಂದು ಕದ್ರಿ ಶ್ರೀಕ್ಷೇತ್ರ ಸುವರ್ಣ ಕದಳೀ ಮಠ ಮಠಾಧಿಪತಿ ಶ್ರೀರಾಜಯೋಗಿ ನಿರ್ಮಲನಾಥಜೀ ಮಹಾರಾಜ್‌ ಹೇಳಿದರು.

Vijaya Karnataka 16 Aug 2019, 4:08 pm
ಸುರತ್ಕಲ್‌: ಸಮುದ್ರದಲ್ಲಿ ಜೀವನ ನಿರ್ವಹಿಸುವ ಕೆಲಸಗಾರರಿಗೆ ಸಮುದ್ರ ರಾಜನ ಅನುಗ್ರಹವಿರಲಿ. ತಂದೆ ತಾಯಿಯ ಅನುಗ್ರಹವಿಲ್ಲದೇ ಯಾವ ಮಕ್ಕಳೂ ಏಳಿಗೆಯನ್ನು ಪಡೆಯಲು ಸಾಧ್ಯವಿಲ್ಲ. ಯಾರು ತಂದೆ ತಾಯಿಯನ್ನು ಸುಖದಿಂದ ನೋಡುತ್ತಾರೋ ಅವರು ಜೀವನದಲ್ಲಿ ಸುಖಿಯಾಗಿರುತ್ತಾರೆ ಎಂದು ಕದ್ರಿ ಶ್ರೀಕ್ಷೇತ್ರ ಸುವರ್ಣ ಕದಳೀ ಮಠ ಮಠಾಧಿಪತಿ ಶ್ರೀರಾಜಯೋಗಿ ನಿರ್ಮಲನಾಥಜೀ ಮಹಾರಾಜ್‌ ಹೇಳಿದರು.
Vijaya Karnataka Web MNR-15SUR-TANNERU BHAVI


ಮಂಗಳೂರು ಏಳು ಪಟ್ಣಮೊಗವೀರ ಸಂಯುಕ್ತ ಮಹಾಸಭಾ ವತಿಯಿಂದ ಜರುಗಿದ ಸಾಮೂಹಿಕ ಸಮುದ್ರ ಪೂಜೆಯಲ್ಲಿ ಸಮುದ್ರಕ್ಕೆ ಹಾಲೆರೆದು ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಕಾಂಚನ್‌ ಮೋಟಾರ್ಸ್‌ ನ ಮಾಲೀಕ ಪ್ರಸಾದ್‌ ರಾಜ್‌ ಕಾಂಚನ್‌ ಮಾತನಾಡಿ, ಮೊಗವೀರ ಸಮುದಾಯ ಎಲ್ಲಕ್ಕಿಂತ ಮುಂದೆ ಬಂದ ಸಮುದಾಯ. ಶಿಸ್ತು ಬದ್ಧ ನೀತಿ ಹಿರಿಯರು ಪಾಲಿಸಿದ್ದರಿಂದ ಪ್ರಪಂಚದಲ್ಲಿ ಮುಂದೆ ಇದೆ ಎಂದು ನುಡಿದರು.

ದಕ ಮೊಗವೀರ ಮಹಾಜನ ಸಂಘ ಉಪಾಧ್ಯಕ್ಷ ದೇವದಾಸ ಬೋಳೂರು, ಮತ್ಸ್ಯೋದ್ಯಮಿ ಹಾಗೂ ಸಮಾಜ ಸೇವಕ ಲೋಕನಾಥ ಪುತ್ರನ್‌ ಪಡುಹೊಯಿಗೆ, ಮಾಧವ ಸಾಲ್ಯಾನ್‌, ಅಧ್ಯಕ್ಷ ಸುಭಾಶ್ಚಂದ್ರ ಕಾಂಚನ್‌, ಬೋಳೂರು ಗ್ರಾಮದ ಗುರಿಕಾರ ತಾರಾನಾಥ ಪುತ್ರನ್‌, ಬೊಕ್ಕಪಟ್ಣ ಗ್ರಾಮ ಗುರಿಕಾರ ನಾರಾಯಣ ಕೋಟ್ಯಾನ್‌,ಕುದ್ರೋಳಿ 3 ನೇ ಗ್ರಾಮದ ಗುರಿಕಾರ ಪ್ರಕಾಶ್‌ ಕರ್ಕೇರ, ಕುದ್ರೋಳಿ 2ನೇ ಗ್ರಾಮದ ಮೋಹನ್‌ ದಾಸ್‌ ಸುವರ್ಣ, ಬೆಂಗ್ರೆ ಜನಾರ್ದನ ಸುವರ್ಣ, ಮೋಹನ್‌ ಗುರಿಕಾರ ಪಡುಹೊಯಿಗೆ, ಬಾಲಕೃಷ್ಣ ತಿಂಗಳಾಯ ಹೊಯಿಗೆ ಬಜಾರ್‌, ನಾರಾಯಣ ಗುರಿಕಾರ ಬೋಳಾರು, ಶರತ್‌ ತಿಂಗಳಾಯ ಗುರಿಕಾರ ಜಪ್ಪು ಉಪಸ್ಥಿತರಿದ್ದರು.

ರಾಘವ ಬೋಳೂರು ಸ್ಬಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ಯಾಮಸುಂದರ್‌ ಕಾಂಚನ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ