ಆ್ಯಪ್ನಗರ

'ಸಾರಿ ವಾಕ್‌ ಆ್ಯಂಡ್‌ ರನ್‌ ಸ್ಪರ್ಧೆ'ಯಲ್ಲಿ ಮಿಂಚಿದ ಮಂಗಳೂರು ಮಹಿಳೆಯರು

ಮಂಗಳೂರಿನಲ್ಲಿ ನಡೆಯುತ್ತಿರುವ 'ಸಾರಿ ವಾಕ್‌ ಆ್ಯಂಡ್‌ ರನ್‌ ಸ್ಪರ್ಧೆ'ಯಲ್ಲಿ ಮಹಿಳೆಯರು ಮಿಂಚಿದರು.

Vijaya Karnataka Web 29 Sep 2019, 11:44 am
ಮಂಗಳೂರು: ಮೆಡಿಮೇಡ್‌ ಸೊಲ್ಯೂಷನ್ಸ್‌ ಸಂಸ್ಥೆ, ವಿಜಯ ಕರ್ನಾಟಕ, ಲಯನ್ಸ್‌ ಕ್ಲಬ್‌ ಮಂಗಳೂರು, ಇನ್ನರ್‌ ವ್ಹೀಲ್ ಕ್ಲಬ್‌ ಮತ್ತು ನಾನಾ ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ನಡೆಯುತ್ತಿರುವ 'ಸಾರಿ ವಾಕ್‌ ಆ್ಯಂಡ್‌ ರನ್‌ ಸ್ಪರ್ಧೆ'ಗೆ ಚಾಲನೆ ಸಿಕ್ಕಿದೆ.

ವೆನ್ಲಾಕ್‌ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜೇಶ್ವರಿ, ಮಹಾನಗರಪಾಲಿಕೆ ಉಪ ಆಯುಕ್ತೆ ಗಾಯತ್ರಿ ನಾಯಕ್‌, ಆಸರೆ ಚಾರಿಟೆಬಲ್‌ ಟ್ರಸ್ಟ್‌ನ ಮುಖ್ಯಸ್ಥೆ ಡಾ. ಆಶಾಜ್ಯೋತಿ ರೈ, ಕನ್ನಡ ಚಿತ್ರ ನಟಿ ತನುಜಾ ಪವಾರ್‌, ಕನ್ನಡ ಮತ್ತು ತುಳು ಚಿತ್ರನಟಿ ನವ್ಯಾ ಪೂಜಾರಿ, ಸುಕನ್ಯಾ, ಮಿಸ್‌ ಯುನಿವರ್ಸ್‌ ಸುದೀಕ್ಷಾ ಕಿರಣ್‌, ಸಂಗೀತ ಕಲಾವಿದೆ ವಿಭಾ ಶ್ರೀನಿವಾಸ್‌ ನಾಯಕ್‌ ಸೇರಿದಂತೆ ನಾನಾ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಮಹಿಳೆಯರಿಗೆ ಸ್ಫೂರ್ತಿದಾಯಕ ಮಾದರಿ ಕಾರ್ಯಕ್ರಮ ಎಂದು ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶಾಂತಾರಾಮ ಶೆಟ್ಟಿ ಪ್ರಶಂಸಿಸಿದ್ದಾರೆ.

ಶನಿವಾರ ನಗರದ ಎಂಜಿ ರಸ್ತೆಯ ದೀಪಾ ಕಂಫರ್ಟ್‌ ಹೋಟೆಲ್‌ನ 'ಸಾರಿ ವಾಕ್‌ ಆ್ಯಂಡ್‌ ರನ್‌' ಸ್ಪರ್ಧೆಯ ಕಿಟ್‌ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಂತಾರಾಮ ಶೆಟ್ಟಿ, ಮಹಿಳೆಯರು ಆರೋಗ್ಯ ಬಗ್ಗೆ ಕಾಳಜಿ ವಹಿಸುವ ದೃಷ್ಟಿಕೋನದೊಂದಿಗೆ ಜಾಗೃತಿಗಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಮೂಲಕ ಗೃಹಿಣಿಯರಿಗೆ ಹೊಸತನದೊಂದಿಗೆ ಆತ್ಮಸ್ಥೈರ್ಯ ತುಂಬಿಸುವ ಕಾರ್ಯಕ್ರಮ ಎಂದರು.

ಗಮನ ಸೆಳೆದ ಪ್ರದರ್ಶನ

ಶನಿವಾರ ನಡೆದ ಕಿಟ್‌ ವಿತರಣಾ ಕಾರ್ಯಕ್ರಮದ ಸಂದರ್ಭ ಏರ್ಪಡಿಸಲಾಗಿದ್ದ ನಾನಾ ಉತ್ಪನ್ನಗಳ ಮಾರಾಟ ಮಳಿಗೆ ಮಹಿಳೆಯರನ್ನು ಸೆಳೆದವು. ಕೌಪತಿ ಎನ್ನುವ ಗೋವಿನ ಪಂಚಗವ್ಯಗಳನ್ನೇ ಉಪಯೋಗಿಸಿ ತಯಾರಿಸಿದ ಸೋಪು, ಮೂಗಿ ಡ್ರಾಪ್‌, ಅಗರಬತ್ತಿಗಳು, ಸೆಗಣಿ ಹಾಗೂ ಆವೆ ಮಣ್ಣಿನಿಂದ ತಯಾರಿಸಿದ ಹಣತೆ, ಗೋವು ಜನನಿ ಫಾಮ್‌ರ್‍ನ ಕಾಡು ಜೇನು, ಜೇನುಗೂಡಿನ ದೀಪಗಳು, ಧೂಪದ ಬತ್ತಿ, ರೋಸ್‌ ವಾಟರ್‌, ತೆಂಗಿನ ಎಣ್ಣೆ, ಸಿರಿ ಮಳಿಗೆ ದೇಸಿ ಉತ್ಪನ್ನಗಳು ಉಡುಪು ಹಾಗೂ ಡಿಟರ್ಜೆಂಟ್‌ ಸೋಪುಗಳು ಸೇರಿದಂತೆ ಸೌಂದರ್ಯ ವರ್ಧಕ ಉತ್ಪನ್ನಗಳು ಮಹಿಳಾಮಣಿಗಳ ಮನ ಸೆಳೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ