ಆ್ಯಪ್ನಗರ

ಮಂಗಳೂರಿನಲ್ಲೂ ಹಸಿರು ಬಣ್ಣಕ್ಕೆ ತಿರುಗಿದ ಕಡಲು: ಕೈಗಾರಿಕಾ ತ್ಯಾಜ್ಯದಿಂದ ಬಣ್ಣ ಬದಲು ಶಂಕೆ!

ನೀಲಿ ಬಣ್ಣದಿಂದ ಸಮುದ್ರ ಹಸಿರು ಬಣ್ಣಕ್ಕೆ ತಿರುಗಿದ್ದು, ಸಮುದ್ರದಲ್ಲಿ ಕೈಗಾರಿಕಾ ತ್ಯಾಜ್ಯ ಸೇರಿಕೊಂಡಿದೆ ಎಂದು ಶಂಕಿಸಲಾಗಿದೆ. ಇದರಿಂದ ಮೀನುಗಾರರರಿಗೆ ಸಂಕಷ್ಟ ಎದುರಾಗಿದ್ದು, ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮೀನುಗಾರರು ಸಂಬಂಧಪಟ್ಟವರಲ್ಲಿ ಆಗ್ರಹಿಸಿದ್ದಾರೆ.

Vijaya Karnataka Web 16 Sep 2020, 6:26 am
ಸುರತ್ಕಲ್‌: ಸುರತ್ಕಲ್‌, ಹೊಸಬೆಟ್ಟು, ಮುಕ್ಕ ಸಮುದ್ರದ ನೀರು ಸಾಧಾರಣ ನೀಲಿ ಬಣ್ಣದಿಂದ ಹಸಿರು ಬಣ್ಣಕ್ಕೆ ತಿರುಗಿದ್ದು ಸಮುದ್ರದಲ್ಲಿ ಅಪಾರ ಪ್ರಮಾಣದ ಕೈಗಾರಿಕಾ ತ್ಯಾಜ್ಯ ಸೇರಿ ಈ ರೀತಿಯಾಗಿರಬೇಕೆಂದು ಶಂಕಿಸಲಾಗಿದೆ.
Vijaya Karnataka Web Sea
ಸಾಂದರ್ಭಿಕ ಚಿತ್ರ


ಹಸಿರು ಕೆಸರಿನಂತಹ ರಾಡಿ ನೀರು ಬಲೆಗೆ ಸಿಕ್ಕಿಕೊಳ್ಳುತ್ತಿದ್ದು ಇದರಿಂದ ಮೀನುಗಾರಿಕೆಗೂ ತೊಂದರೆಯಾಗುತ್ತಿದೆ ಎಂದು ಮೀನುಗಾರರು ಹೇಳಿದ್ದಾರೆ. ಈ ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಿಕೊಡಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.

ಹಿಂದಿನ ವರ್ಷ ಡಾಮರು ತ್ಯಾಜ್ಯ ಸಂಗ್ರಹದಿಂದ ಡಿಸೆಂಬರ್‌ ನಿಂದ ಸುಮಾರು 5ತಿಂಗಳು ಕಾಲ ತೀರ ಮೀನುಗಾರಿಕೆ ಕೈತಪ್ಪಿತ್ತು. ಮಂಗಳವಾರ ಕಡಲು ಮತ್ತೆ ಬಹುತೇಕ ಸಾಧಾರಣ ಬಣ್ಣಕ್ಕೆ ಬಂದಿದ್ದು ಬಲೆ ಮಾತ್ರ ಹಸಿರು ಬಣ್ಣ ಲೇಪಿತವಾಗಿತ್ತು ಮೀನುಗಳ ಪ್ರಮಾಣ ಕಡಿಮೆಯಾಗಿತ್ತು ಎಂದು ಮೀನುಗಾರರು ತಿಳಿಸಿದ್ದಾರೆ.

ಈ ಬಗ್ಗೆ ತಾನು ಪರಿಶೀಲನೆ ನಡೆಸುತ್ತೇನೆ ಎಂದು ಪರಿಸರಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಕೀರ್ತಿಕುಮಾರ್‌, ಸೂಕ್ತ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಶಾಸಕ ಡಾ ವೈ ಭರತ್‌ ಶೆಟ್ಟಿ ಅವರು ತಿಳಿಸಿದ್ದಾರೆ.

ಕೈಗಾರಿಕಾ ತ್ಯಾಜ್ಯದ ನೀರಿನಿಂದ ಅಲ್ಲದೇ ಕೈಗಾರಿಕಾ ಕೊಳವೆಯನ್ನು ಸಮುದ್ರ ನೀರಿಗೆ ಬಿಡುವುದರಿಂದ ಈ ರೀತಿ ಆಗಿದೆ. ಜಿಡ್ಡಿನಂಶದ ನೀರಿನಿಂದ ಮೀನುಗಾರಿಕೆ ನಡೆಸಲು ಕೂಡಾ ಕಷ್ಟವಾಗಿದೆ.
ಸಂದೀಪ್‌ ಗುಡ್ಡೆಕೊಪ್ಲ ಮೀನುಗಾರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ