ಆ್ಯಪ್ನಗರ

ಮಂಗಳೂರು: ಬಹುಮಹಡಿ ಕಟ್ಟಡದಿಂದ ಬಿದ್ದು ಸೆಕ್ಯುರಿಟಿ ಸಾವು!

ಬಹುಮಹಡಿ ವಾಣಿಜ್ಯ ಮತ್ತು ವಸತಿ ಸಂಕೀರ್ಣದ ಮೇಲಿನಿಂದ ಕೆಳಗೆ ಬಿದ್ದು ಸೆಕ್ಯುರಿಟಿ ಗಾರ್ಡ್‌ ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.ತೊಕ್ಕೊಟ್ಟು ಚೆಂಬುಗುಡ್ಡೆ ನಿವಾಸಿ ಮುತ್ತುರಾಜ್‌ ಮೃತ ದುರ್ದೈವಿ.

Vijaya Karnataka 23 Nov 2020, 12:11 pm
ತೊಕ್ಕೊಟ್ಟು: ಉಳ್ಳಾಲ ನಗರಸಭೆ ಕಟ್ಟಡದ ಮುಂಭಾಗದಲ್ಲಿರುವ ಬಹುಮಹಡಿ ವಾಣಿಜ್ಯ ಮತ್ತು ವಸತಿ ಸಂಕೀರ್ಣದ ಮೇಲಿನಿಂದ ಕೆಳಗೆ ಬಿದ್ದು ಸೆಕ್ಯುರಿಟಿ ಗಾರ್ಡ್‌ ದಾರುಣವಾಗಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.
Vijaya Karnataka Web Crime
Representative Image


ತೊಕ್ಕೊಟ್ಟು ಚೆಂಬುಗುಡ್ಡೆ ನಿವಾಸಿ ಮುತ್ತುರಾಜ್‌(45) ಮೃತರು. ಅವರು ಬಹುಮಹಡಿ ಕಟ್ಟಡದ ಮೇಲಿನ ಮಹಡಿಯ ನೀರಿನ ಟ್ಯಾಂಕ್‌ ಕ್ಲೀನ್‌ ಮಾಡುತ್ತಿರುವಾಗ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಉಳ್ಳಾಲ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಟ್ಟಡ ಮಾಲೀಕರ ಅಜಾಗರೂಕತೆಯೇ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಡಿ.10ರಿಂದ ಮಂಗಳೂರು-ಮೈಸೂರು ವಿಮಾನ ಸೇವೆ ಆರಂಭ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ