ಆ್ಯಪ್ನಗರ

ಕುವೈಟ್‌ನಲ್ಲೇ ಕುಳಿತು ಫೋರ್ಜರಿ ದಾಖಲೆ , 7 ಆಂಧ್ರ ನಿವಾಸಿಗಳ ಬಂಧನ

ಉದ್ಯೋಗ ಬಯಸಿ ಕುವೈಟ್‌ಗೆ ತೆರಳುವವರಿಗೆ ಭಾರತೀಯ ರಾಯಭಾರ ಕಚೇರಿ ಹಾಗೂ ಕುವೈಟ್‌ನ ವಿದೇಶಾಂಗ ಸಚಿವಾಲಯದ ನಕಲಿ ಸಹಿ ಹಾಗೂ ಮೊಹರು ಬಳಸಿ ವಾಹನ ದಾಖಲೆ ಮಾಡಿಕೊಡುತ್ತಿದ್ದ ಆರೋಪದ ಮೇಲೆ ಆಂದ್ರದ 7 ಮಂದಿಯನ್ನು ಬಂಧಿಸಲಾಗಿದೆ.

Vijaya Karnataka Web 26 Nov 2019, 9:17 am
ಮಂಗಳೂರು: ಉದ್ಯೋಗ ಬಯಸಿ ಕುವೈಟ್‌ಗೆ ತೆರಳುವವರಿಗೆ ಭಾರತೀಯ ರಾಯಭಾರ ಕಚೇರಿ ಹಾಗೂ ಕುವೈತ್‌ನ ವಿದೇಶಾಂಗ ಸಚಿವಾಲಯದ ನಕಲಿ ಸಹಿ ಹಾಗೂ ಮೊಹರು ಬಳಸಿ ವಾಹನ ದಾಖಲೆ ತಯಾರಿ ಮಾಡಿಕೊಡುತ್ತಿದ್ದ ಆರೋಪದ ಮೇಲೆ 7 ಭಾರತೀಯ ನಿವಾಸಿಗಳನ್ನು ಕುವೈಟ್‌ ತನಿಖಾಧಿಕಾರಿಗಳು ಬಂಧಿಸಿದ್ದಾರೆ.
Vijaya Karnataka Web arrest


ಬಂಧಿತ 7 ಮಂದಿಯೂ ಆಂಧ್ರಪ್ರದೇಶ ನಿವಾಸಿಗಳೆಂದು ತಿಳಿದು ಬಂದಿದೆ. ಉದ್ಯೋಗ ಬಯಸಿ ಕುವೈಟ್‌ಗೆ ತೆರಳುವವರಿಗೆ ದಾಖಲೆ ಹಾಗೂ ಇತರ ಸರ್ಟಿಫಿಕೆಟ್‌ಗಳನ್ನು ಫೋರ್ಜರಿಯಾಗಿ ಸೃಷ್ಟಿಸಿ ತಿಂಗಳಿಗೆ ಕೋಟ್ಯಂತರ ರೂ. ವಂಚನೆ ಮಾಡುತ್ತಿದ್ದರೆಂದು ತಿಳಿದುಬಂದಿದೆ.

ಪ್ರಕರಣದ ವಿವರ: ಕುವೈಟ್‌ಗೆ ಕೆಲಸಕ್ಕೆ ತೆರಳಿದ ಭಾರತೀಯರಿಗೆ ತಮ್ಮ ಮೂಲ ಪರವಾನಗಿ ಹಾಜರುಪಡಿಸಿ ಕುವೈಟ್‌ ಪರವಾನಗಿ ಪಡೆಯಲು ಮತ್ತು ಅಪ್‌ಗ್ರೇಡ್‌ ಮಾಡಬೇಕಾಗುತ್ತದೆ. ಇದಕ್ಕೆ ತಾಂತ್ರಿಕ ಕೆಲಸಗಳಿರುವ ಕಾರಣ ಹಲವು ದಿನಗಳೇ ಬೇಕಾಗುತ್ತದೆ. ಈ ಉದ್ಯೋಗಿಗಳನ್ನೇ ಟಾರ್ಗೆಟ್‌ ಮಾಡುವ ಆರೋಪಿಗಳು ಶೀಘ್ರದಲ್ಲೇ ಸರ್ಟಿಫಿಕೆಟ್‌, ಡಾಕ್ಯುಮೆಂಟ್‌ ಮಾಡಿಕೊಡುವುದಾಗಿ ಹೇಳಿ ದಿನಾರ್‌ ಲೆಕ್ಕದಲ್ಲಿ ವ್ಯವಹಾರ ಕುದುರಿಸುತ್ತಾರೆ. ಇದನ್ನೇ ನಂಬಿದ ಗ್ರಾಹಕರು ಬಣ್ಣದ ಮಾತಿಗೆ ಮರಳಾಗಿ ಅವರಲ್ಲಿಯೇ ಡಾಕ್ಯುಮೆಂಟ್‌ ಮಾಡಲು ಸಮ್ಮತಿ ಸೂಚಿಸುತ್ತಾರೆ. ಆರೋಪಿಗಳು ರುಜು ಮತ್ತು ಮೊಹರು ಪೋರ್ಜರಿ ಮಾಡಿ ದಾಖಲೆಗಳನ್ನು ನೀಡುತ್ತಾರೆ.

ಕುವೈಟ್‌ನಲ್ಲಿ ಜೀತದಾಳುವಾಗಿದ್ದ ಮಂಗಳೂರಿಗನಿಗೆ ಕೊನೆಗೂ ಮುಕ್ತಿ, ತಾಯ್ನಾಡಿಗೆ ಮರಳಿದ ನೆಲ್ಸನ್

ಹಗರಣದ ಹಿಂದೆ ದೊಡ್ಡ ಜಾಲ: ಇದೊಂದು ದೊಡ್ಡ ಹಗರಣವಾಗಿದ್ದು, ಇದರ ಹಿಂದೆ ಇನ್ನಷ್ಟು ದೊಡ್ಡ ಜಾಲವಿರುವ ಅನುಮಾನವಿದೆ. ವಂಚಕರ ಜಾಲಕ್ಕೆ ಬಿದ್ದು ನಕಲಿ ಸರ್ಟಿಫಿಕೆಟ್‌ ಪಡೆದುಕೊಂಡವರು ಬಂಧನಕ್ಕೆ ಒಳಗಾದರೆ ಅತ್ಯಂತ ದೊಡ್ಡ ಸಂಕಷ್ಟಕ್ಕೆ ಸಿಲುಕುವುದಲ್ಲದೆ, ದೀರ್ಘಕಾಲದ ಸೆರೆವಾಸ ಅನುಭವಿಸುವ ಸಾಧ್ಯತೆ ಇರುವುದಾಗಿ ಅನಿವಾಸಿ ಭಾರತೀಯ ಮೋಹನ್‌ದಾಸ್‌ ಕಾಮತ್‌ ಮಂಜೇಶ್ವರ ಸಲಹೆ ನೀಡಿದ್ದಾರೆ.

ದುಬಾರಿ ಏರ್ ಇಂಡಿಯಾ, ಮಂಗಳೂರು ಬಿಟ್ಟು ಕಣ್ಣೂರು ವಿಮಾನ ನಿಲ್ದಾಣದತ್ತ ಮುಖ ಮಾಡಿದ ಕರಾವಳಿಗರು!

ಪಾಕಿಸ್ತಾನ, ಬಾಂಗ್ಲಾದೇಶ ಮುಂತಾದ ರಾಷ್ಟ್ರಗಳ ಜನರು ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿ ಈಗಲೂ ನರಕಯಾತನೆ ಅನುಭವಿಸುತ್ತಿದ್ದಾರೆ. ಭಾರತೀಯ ರಾಯಭಾರ ಕಚೇರಿ ಹಾಗೂ ಕುವೈತ್‌ನ ವಿದೇಶಾಂಗ ಸಚಿವಾಲಯದ ನಕಲಿ ಸಹಿ ಹಾಗೂ ಮೊಹರು ಬಳಸಿ ವಾಹನ ದಾಖಲೆ ತಯಾರಿ ಮಾಡಿಕೊಡುತ್ತಿರುವುದಕ್ಕೆ ಸಾಕ್ಷಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ