ಆ್ಯಪ್ನಗರ

ಶಬರಿಮಲೆಗೆ ತೆರಳಲು ಯತ್ನಿಸುತ್ತಿದ್ದ ಯುವತಿಯರನ್ನು ತಡೆದ ವೃತಧಾರಿಗಳು

ಶಬರಿಮಲೆಗೆ ತೆರಳುತ್ತಿದ್ದ ಇಬ್ಬರು ಯುವತಿ ಸೇರಿದಂತೆ ಮೂವರನ್ನು ಚೆಂಗನ್ನೂರು ಸಮೀಪ ಅಯ್ಯಪ್ಪ ವ್ರತಧಾರಿಗಳು ತಡೆದ ಘಟನೆ ಶನಿವಾರ ಸಂಜೆ ನಡೆದಿದೆ.

Vijaya Karnataka 13 Jan 2019, 3:00 pm
ಮಂಗಳೂರು : ಶಬರಿಮಲೆಗೆ ತೆರಳುತ್ತಿದ್ದ ಇಬ್ಬರು ಯುವತಿ ಸೇರಿದಂತೆ ಮೂವರನ್ನು ಚೆಂಗನ್ನೂರು ಸಮೀಪ ಅಯ್ಯಪ್ಪ ವ್ರತಧಾರಿಗಳು ತಡೆದ ಘಟನೆ ಶನಿವಾರ ಸಂಜೆ ನಡೆದಿದೆ.
Vijaya Karnataka Web shabarimle youn women prevented
ಶಬರಿಮಲೆಗೆ ತೆರಳಲು ಯತ್ನಿಸುತ್ತಿದ್ದ ಯುವತಿಯರನ್ನು ತಡೆದ ವೃತಧಾರಿಗಳು


ರೈಲಿನಲ್ಲಿ ತೆರಳಲು ಚೆಂಗನ್ನೂರಿಗೆ 20ವರ್ಷದ ಇಬ್ಬರು ಯುವತಿಯರು ಮತ್ತು 40ವರ್ಷದ ಮಹಿಳೆ ಬಂದಿದ್ದರು. ಬಳಿಕ ಬಸ್‌ನಲ್ಲಿ ಪಂಪೆಗೆ ತೆರಳಲು ಪ್ರಯತ್ನಿಸುತ್ತಿದ್ದಾಗ,ಗಮನಿಸಿದ ಅಯ್ಯಪ್ಪ ವ್ರತಧಾರಿಗಳು ತಡೆದು ವಿಚಾರಿಸಿದರು. ಈ ಸಂದರ್ಭ ವಾಗ್ವಾದ ಆರಂಭವಾಗಿದ್ದು, ಆತಂಕಕ್ಕೆ ಒಳಗಾದ ಇಬ್ಬರು ಅಲ್ಲಿಂದ ಪರಾರಿಯಾದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಒಬ್ಬ ಯುವತಿಯನ್ನು ವಶಕ್ಕೆ ಪಡೆದರು.

ಚೆಂಗನ್ನೂರು ಪೊಲೀಸ್‌ ಠಾಣೆಯಲ್ಲಿ ಯುವತಿಯ ವಿಚಾರಣೆ ನಡೆಯುತ್ತಿದೆ ಎಂದು ದ.ಕ. ಜಿಲ್ಲೆಯಿಂದ ತೆರಳಿದ ಅಯ್ಯಪ್ಪ ವ್ರತಧಾರಿ ಸುರೇಶ್‌ ಕಾಪಿಕಾಡು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ