ಆ್ಯಪ್ನಗರ

ಕೊರೊನಾ ವೈರಸ್‌ ಎಫೆಕ್ಟ್‌: ಪ್ರಥಮ ಬಾರಿಗೆ ಶಂಕರಪುರ ಮಲ್ಲಿಗೆ ಕಟ್ಟೆ ಬಂದ್‌

ಇಂದು ಶಂಕರಪುರ ಮಲ್ಲಿಗೆ ಹೂವಿಗೆ ದರ ನಿಗದಿ, ಖರೀದಿ, ವಿಕ್ರಯ ನಡೆದಿಲ್ಲ. ಮಲ್ಲಿಗೆ ವ್ಯವಹಾರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಇಂತಹದೊಂದು ವಿದ್ಯಮಾನ ಘಟಿಸಿದೆ.

Vijaya Karnataka Web 26 Mar 2020, 5:11 pm
ಹರೀಶ್‌ ಕಟಪಾಡಿ
Vijaya Karnataka Web ಶಂಕರಪುರ ಮಲ್ಲಿಗೆ
ಶಂಕರಪುರ ಮಲ್ಲಿಗೆ


ಸರಕಾರದ ಆದೇಶದಂತೆ ಲಾಕ್‌ಡೌನ್‌ ಘೋಷಣೆಯಾಗಿರುವುದರಿಂದ ಬಹುತೇಕ ವ್ಯಾಪಾರ ವ್ಯವಹಾರಗಳು ಸ್ಥಗಿತಗೊಂಡಿದ್ದ ಹಿನ್ನಲೆಯಲ್ಲಿ ವರ್ಷದ 365 ದಿನಗಳಲ್ಲೂ ಶಂಕರಪುರ ಮಲ್ಲಿಗೆ ಹೂವಿನ ವ್ಯವಹಾರದ ಹೊಣೆ ನಿರ್ವಹಿಸುತ್ತಿರುವ ಶಂಕರಪುರದ ಮಲ್ಲಿಗೆ ಹೂವಿನ ಕಟ್ಟೆ ಮಂಗಳವಾರದಿಂದ ತನ್ನ ವ್ಯವಹಾರಗಳನ್ನು ಸ್ಥಗಿತಗೊಳಿಸಿದೆ.

ಹಾಗಾಗಿ ಇಂದು ಶಂಕರಪುರ ಮಲ್ಲಿಗೆ ಹೂವಿಗೆ ದರ ನಿಗದಿ, ಖರೀದಿ, ವಿಕ್ರಯ ನಡೆದಿಲ್ಲ. ಮಲ್ಲಿಗೆ ವ್ಯವಹಾರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಇಂತಹದೊಂದು ವಿದ್ಯಮಾನ ಘಟಿಸಿದೆ. ಈ ಬಗ್ಗೆ ಬೆಳೆಗಾರಿಗೆ ಬೆಳಗ್ಗೆಯೇ ಮಾಹಿತಿ ರವಾನಿಸಿರುವ ಕಟ್ಟೆಯ ಯಜಮಾನರು ಬಂದ್‌ ಹಿನ್ನಲೆಯಲ್ಲಿವ್ಯವಹಾರ ನಡೆಸಲಾಗದ ತಮ್ಮ ಅಸಾಹಯತೆಯನ್ನು ತೋಡಿಕೊಂಡಿದ್ದು ಮಾರ್ಚ್ 31ರ ತನಕ ಯಾರೂ ಹೂ ಕಟ್ಟೆಗೆ ತರದಂತೆ ತಿಳಿಸಿದ್ದಾರೆ.

ಬೇಡಿಕೆಯಿಲ್ಲದೆ ತೊಂದರೆ: ಲಾಕ್‌ಡೌನ್‌ನ ಕಾರಣ ಹೂವಿನ ಸಾಗಾಟ ಹಾಗೂ ಚಿಲ್ಲರೆ ಮಾರಾಟವೂ ಸಾಧ್ಯವಿಲ್ಲದಿರುವುದು ಒಂದು ಕಾರಣವಾದರೆ ಯಾವುದೇ ಜಾತ್ರೆ, ನೇಮ, ಮದುವೆ ಸಹಿತ ಶುಭ ಸಮಾರಂಭಗಳಿಗೆ ಬ್ರೇಕ್‌ ಬಿದ್ದಿರುವುದರಿಂದಲೂ ಹೋವಿಗೆ ಬೇಡಿಕೆಯಿಲ್ಲದಂತಾಗಿದೆ. ಕ್ರೆತ್ರೖಸ್ತರಲ್ಲೂ ಈಸ್ಟರ್‌ ತನಕ ಕಪ್ಪುದಿನದ ಆಚರಣೆಯಿರುವುದರಿಂದ ಮದುವೆ ಸಹಿತ ಯಾವುದೇ ಕಾರ್ಯಕ್ರಮಗಳು ನಡೆಯದ ಕಾರಣ ಹೋವಿಗೆ ಎಲ್ಲೂಬೇಡಿಕೆಯಿಲ್ಲದಂತಾಗಿದೆ

ಹೂವಿಗೆ ಬೇಡಿಕೆಯಿಲ್ಲದಿದ್ದರೂ ಗಿಡಗಳ ಆರೋಗ್ಯದ ದೃಷ್ಠಿಯಿಂದ ಹೂವುಗಳನ್ನು ಗಿಡದಿಂದ ಕೀಳುವುದು ಅನಿವಾರ್ಯವಾದ ಕಾರಣ ಬೆಳೆಗಾರರು ಹೂಗಳನ್ನು ಕಿತ್ತು ಬಿಸಾಡಿದ್ದಾರೆ. ಕೆಲವರು ಕಟ್ಟಿ ಇಟ್ಟಿದ್ದ ಹೂವಿನ ಅಟ್ಟೆಯನ್ನು ಯುಗಾದಿ ಹಬ್ಬದ ಹಿನ್ನಲೆಯಲ್ಲಿಒಂದಷ್ಟು ಹೂವುಗಳನ್ನು ಸ್ಥಳೀಯ ಚಿಲ್ಲರೆ ವ್ಯಪಾರಿಗಳು ಕೊಂಡುಕೊಂಡಿದ್ದರೂ ಹೆಚ್ಚಿನ ಹೂವಿಗೆ 50 ರೂ. ಕನಿಷ್ಠ ಬೆಲೆಗೂ ಕೇಳುವವರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು.

ಬೇಡಿಕೆಯಿಲ್ಲದೆ ಇರುವಾಗ ವ್ಯವಹಾರ ನಡೆಸಿದರೆ ಒಪ್ಪಂದದಂತೆ ಬೆಳೆಗಾರರಿಗೆ 90 ರೂ. ಕನಿಷ್ಟ ದರ ನೀಡಲೇ ಬೇಕಾಗಿರುವ ಕಾರಣ ಕಟ್ಟೆಯವರು ವ್ಯವಹಾರ ಸ್ಥಗಿತಗೊಳಿಸುವ ನಿರ್ಣಯ ತೆಗೆದುಕೊಂಡು ಮಾರುಕಟ್ಟೆ ಸ್ಥಗಿತಗೊಳಿಸಿದ್ದಾರೆ. ಬೇಡಿಗೆಯಿರುವಾಗ ಗರಿಷ್ಠ 1200 ರೂ. ಗಿಂತ ಹೆಚ್ಚು ಬೆಲೆ ನೀಡದ ಕಟ್ಟೆಯವರು ಈಗ ಬೇಡಿಕೆಯಿಲ್ಲದಾಗ ಬೆಳೆಗಾರರ ಬೆನ್ನಿಗೆ ನಿಲ್ಲಬೇಕಾಗಿತ್ತು ಎನ್ನುವ ಗುಸುಗುಸು ಬೆಳಗಾರರ ವಲಯದಿಂದ ಕೇಳಿ ಬಂದಿದೆ. ಈಗ ಮಾರ್ಚ್ 31ರ ವರೆಗೆ ಲಾಕ್‌ಡೌನ್‌ ಇರುವುದರಿಂದ ಬೆಳೆಗಾರರು ಸಂಪೂರ್ಣ ನಷ್ಟ ಅನುಭವಿಸುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ