ಆ್ಯಪ್ನಗರ

ಶ್ರೀಕೃಷ್ಣನ ವಿಶ್ವರೂಪ ದರ್ಶನವೇ ಮಾನವ ಹಕ್ಕಿನ ಸಂಕೇತ

ಮಹಾಭಾರತ ಯುದ್ಧವೇ ಮಾನವ ಹಕ್ಕುಗಳಿಗಾಗಿ ನಡೆಯಿತು. ಶ್ರೀಧಿಕೃಷ್ಣನ ವಿಶ್ವರೂಪ ದರ್ಶನವೇ ಮಾನವ ಹಕ್ಕಿನ ಸಂಕೇತ ಎಂದು ದಕ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರಾದ ಕಾಡ್ಲೂರು ಸತ್ಯನಾರಾಯಣಾಚಾರ್ಯ ಹೇಳಿದರು.

Vijaya Karnataka 11 Dec 2018, 4:06 pm
ಮೂಲ್ಕಿ: ಮಹಾಭಾರತ ಯುದ್ಧವೇ ಮಾನವ ಹಕ್ಕುಗಳಿಗಾಗಿ ನಡೆಯಿತು. ಶ್ರೀಧಿಕೃಷ್ಣನ ವಿಶ್ವರೂಪ ದರ್ಶನವೇ ಮಾನವ ಹಕ್ಕಿನ ಸಂಕೇತ ಎಂದು ದಕ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರಾದ ಕಾಡ್ಲೂರು ಸತ್ಯನಾರಾಯಣಾಚಾರ್ಯ ಹೇಳಿದರು.
Vijaya Karnataka Web shreekrishna vishwaroopa
ಶ್ರೀಕೃಷ್ಣನ ವಿಶ್ವರೂಪ ದರ್ಶನವೇ ಮಾನವ ಹಕ್ಕಿನ ಸಂಕೇತ


ಮೂಲ್ಕಿಯ ಕೆಎಸ್‌ ರಾವ್‌ ನಗರದ ಮಹಿಳಾ ಸಮುದಾಯ ಭವನದಲ್ಲಿ ಸೋಮವಾರ ಸಂಜೆ ದಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ,ಪೊಲೀಸ್‌ ಇಲಾಖೆ ಮತ್ತು ಮೂಲ್ಕಿ ನಗರ ಪಂಚಾಯಿತಿಗಳಆಶ್ರಯದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

70 ವರ್ಷಗಳ ಹಿಂದೆ ಡಿಸೆಂಬರ್‌ 10ರಂದು ವಿಶ್ವ ಸಂಸ್ಥೆ ಮಾನವ ಹಕ್ಕುಗಳನ್ನು ಜಾರಿಗೆ ತಂದಿತು. 25 ವರ್ಷಗಳ ಹಿಂದೆ ಭಾರತವು ಮಾನವ ಹಕ್ಕುಗಳ ಕಾಯಿಧಿದೆ ಜಾರಿಗೆ ತಂದಿತು.ಇದರ ಅಂಗವಾಗಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಸಮಾಜದ ಏಳಿಗೆಗಾಗಿ ಇತರರಿಗೆ ತೊಂದರೆ ಮಾಡದೆ ಸಹಬಾಳ್ವೆಗೆ ಒತ್ತು ನೀಡಿ ಜೀವನ ಸಾಗಿಸಿದರೆ ಅದೇ ಮಾನವ ಹಕ್ಕು.ಅದರ ಬಗ್ಗೆ ಹೆಚ್ಚು ಚಿಂತನೆ ನಡೆಸಬೇಕಾಗಿದೆ ಎಂದರು.

ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುರಳೀಧರ ಪೈ ಬಿ. ಮಾತನಾಡಿ, ಇಡೀ ಪ್ರಪಂಚದ ಜೀವಿಗಳೆಲ್ಲ ಒಂದು ಎಂಬ ಧ್ಯೇಯವೇ ವಿಶ್ವ ಮಾನವ ಹಕ್ಕು. ಇದೇ ಹಿನ್ನೆಲೆಯಲ್ಲಿ ಕಾನೂನು ಜಾಗೃತಿ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ನಾಗರಿಕನೂ ದೇಶದ ಕಾನೂನುಗಳನ್ನು ಅರಿತಿರಬೇಕು. ಈ ಮೂಲಕ ಸ್ವಸ್ಥ ಸಮಾಜ ಸಾಧ್ಯವಿದೆ ಎಂದರು.

ಕಾನೂನು ಮಾಹಿತಿ ನೀಡಿದ ಮಂಗಳೂರು ನ್ಯಾಯವಾದಿ ಎ.ಉದಯಾನಂದ, ಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸಿಕೊಡುವುದೇ ಮಾನವ ಹಕ್ಕು. ಹಕ್ಕಿನ ಜತೆಗೆ ಕರ್ತವ್ಯಗಳೂ ಇವೆ.ಅದನ್ನು ಮಾನವೀಯ ನೆಲೆಯಲ್ಲಿ ನಿಭಾಯಿಸಬೇಕು. ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ತಿಳಿಯಪಡಿಸುವುದು ಅತ್ಯಗತ್ಯ ಎಂದರು.

ಮೂಲ್ಕಿ ನಪಂ ಅಧ್ಯಕ್ಷ ಸುನಿಲ್‌ ಆಳ್ವ ಅಧ್ಯಕ್ಷ ತೆ ವಹಿಸಿ ಶುಭ ಹಾರೈಸಿದರು. ಮೂಲ್ಕಿ ಸಿಪಿಐ ಅನಂತಪದ್ಮನಾಭ ಮುಖ್ಯ ಅತಿಥಿಯಾಗಿದ್ದರು.

ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಮಲ್ಲನ ಗೌಡರು ಸ್ವಾಗತಿಸಿದರು.ಶಿವಮೂರ್ತಿ ಎಚ್‌.ಜೆ. ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ