ಆ್ಯಪ್ನಗರ

ತಿಲಕವಿಡದವರು ಹಿಂದೂಗಳಲ್ವಾ?: 'ನಾಮ' ವಿವಾದಕ್ಕೆ 'ಬರೆ' ಎಳೆದ ಸಿದ್ದರಾಮಯ್ಯ

ಉದ್ದುದ್ದ ನಾಮ ಎಳೆಯುವವರು ಬಿಜೆಪಿಯವರು. ನಾವು ಚಿಕ್ಕ ನಾಮ ಹಾಕಿಕೊಳ್ಳುತ್ತೇವೆ. ದೊಡ್ಡ ನಾಮ ಹಾಕಿದವರನ್ನು ಕಂಡರೆ ಮಾತ್ರ ನಮಗೆ ಭಯ. ಯಾವ ಸಂದರ್ಭದಲ್ಲಿ ಹೇಳಿದೆ ಎಂದು ಅರ್ಥ ಮಾಡಿಕೊಳ್ಳಿ ಎಂದು ಸಿದ್ದರಾಮಯ್ಯ ತಮ್ಮ 'ನಾಮ' ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದರು.

Vijaya Karnataka Web 6 Mar 2019, 4:15 pm
ಮಂಗಳೂರು: ನಾಮ ಹಾಕಿದವರನ್ನು ನೋಡಿದರೆ ಭಯ ಆಗುತ್ತದೆ ಎಂಬ ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ತನ್ನ ಹೇಳಿಕೆಗೆ ಮಂಗಳೂರಿನಲ್ಲಿ ಸ್ಪಷ್ಟೀಕರಣ ನೀಡಿದರು.
Vijaya Karnataka Web Siddaramaiah new


'ನಾನು ಯಾವ ಸಂದರ್ಭದಲ್ಲಿ ಹೇಳಿದ್ದೇನೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಹೇಳಿದ್ದು ಬಿಜೆಪಿಯವರು ಹಾಕಿಕೊಳ್ಳುವ ನಾಮದ ಬಗ್ಗೆ. ನಾಮವನ್ನು ಉದ್ದುದ್ದಕ್ಕೆ ಎಳೆದುಕೊಳ್ಳುವವರು ಬಿಜೆಪಿಯವರು. ನಾವು ಒಂದು ಬೊಟ್ಟು ಇಡುತ್ತೇವೆ ಅಷ್ಟೆ. ಚಿಕ್ಕದಾಗಿ ನಾಮ ಹಾಕಿಕೊಂಡರೆ ಪರವಾಗಿಲ್ಲ. ಉದ್ದುದ್ದವಾಗಿ ನಾಮ ಎಳೆದುಕೊಂಡವರನ್ನು ಕಂಡರೆ ನನಗೆ ಭಯ ಅಂತ ಹೇಳಿದ್ದೆ. ಇದರಲ್ಲಿ ತಪ್ಪೇನು, ಅವರು ಕುಂಕುಮವನ್ನು ಹಾಕಿಕೊಂಡು ಮೇಲೆ ಎಳೆದುಕೊಳ್ಳುತ್ತಾರೆ. ನೀವು ಹಾಗೆ ಹಾಕಿಕೊಳ್ಳಬೇಡಿ, ಸ್ವಲ್ಪ ಹಾಕಿಕೊಳ್ಳಿ ಅಂತ ಹೇಳಿದ್ದೆ' ಎಂದು ಮಾಜಿ ಸಿಎಂ ಸಮರ್ಥಿಸಿಕೊಂಡರು.



ನಾಮ ಹಾಕಿಕೊಳ್ಳದವರು ನಾನ್-ಹಿಂದುಗಳಾ? ನಾವು ಹುಡುಗರಾಗಿದ್ದಾಗ ವಿಭೂತಿ ಹಾಕಿಕೊಳ್ಳುತ್ತಿದ್ದೆವು. ಈಗ ಹಾಕಿಕೊಳ್ಳಲ್ಲ ಎಂದು ಅವರು ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ