ಆ್ಯಪ್ನಗರ

ಶಾಂತಿವನದಲ್ಲಿ ಸಂಗೀತ ಆಲಿಸಿದ ಸಿದ್ದರಾಮಯ್ಯ

ಧರ್ಮಸ್ಥಳದ ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ಚೆನ್ನೈ ಮೂಲದ ಅಂತಾರಾಷ್ಟ್ರೀಯ ಖ್ಯಾತ ಕಲಾವಿದೆ, ಶಾಂತಿವನದಲ್ಲಿ ಚಿಕಿತ್ಸೆಗಾಗಿ ಬಂದಿರುವ ಸಾಧಕಿ ವಿದುಷಿ ಸಹನಾ ಸಾಮ್ರಾಜ್‌ ಅವರಿಂದ ಸೋಮವಾರ ಸಂಜೆ ಶಾಂತಿವನದಲ್ಲಿ ಗಾನ ಸೌರಭ ಕಾರ‍್ಯಕ್ರಮ ನಡೆಯಿತು.

Vijaya Karnataka 26 Jun 2018, 7:56 am
ಬೆಳ್ತಂಗಡಿ: ಧರ್ಮಸ್ಥಳದ ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ಚೆನ್ನೈ ಮೂಲದ ಅಂತಾರಾಷ್ಟ್ರೀಯ ಖ್ಯಾತ ಕಲಾವಿದೆ, ಶಾಂತಿವನದಲ್ಲಿ ಚಿಕಿತ್ಸೆಗಾಗಿ ಬಂದಿರುವ ಸಾಧಕಿ ವಿದುಷಿ ಸಹನಾ ಸಾಮ್ರಾಜ್‌ ಅವರಿಂದ ಸೋಮವಾರ ಸಂಜೆ ಶಾಂತಿವನದಲ್ಲಿ ಗಾನ ಸೌರಭ ಕಾರ‍್ಯಕ್ರಮ ನಡೆಯಿತು.
Vijaya Karnataka Web siddaramaiah dharmasthala


ಎಳೆಯ ವಯಸ್ಸಿನಲ್ಲಿಯೇ, ವಿವಿಗಳಿಂದ, ರಿಯಾಲಿಟಿ ಶೋಗಳಿಂದ, ದೂರದರ್ಶನ, ರೇಡಿಯೋ ಮೊದಲಾದವುಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಸಹನಾ ಅವರು, ಸೋಮವಾರ ಸಂಜೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶಾಂತಿವನ ಸಂಸ್ಥೆಯ ವತಿಯಿಂದ ಪ್ರಕೃತಿ ಚಿಕಿತ್ಸಾಲಯದಲ್ಲಿ ಸುಮಾರು ಒಂದೂವರೆ ಗಂಟೆ ಕಾಲ ಶಾಸ್ತ್ರೀಯ ಸಂಗೀತವನ್ನು ನಡೆಸಿಕೊಟ್ಟರು. ಇವರೊಡನೆ ಮೃದಂಗದಲ್ಲಿ ಪುತ್ತೂರಿನ ನಿಕ್ಷಿತ್‌, ವಯೋಲಿನ್‌ನಲ್ಲಿ ಶಿವಮೊಗ್ಗ ಮತ್ತೂರಿನ ವಿಶ್ವಜಿತ್‌ ಎಂ. ವಿ. ಸಹಕರಿಸಿದರು.

ಸಂಗೀತದಲ್ಲಿ ತಲ್ಲೀನರಾದ ಮಾಜಿ ಸಿ.ಎಂ.ಸಿದ್ದರಾಮಯ್ಯ: ಸಂಜೆಯ ವಾಕಿಂಗ್‌ ಮುಗಿಸಿ,ಸಂಗೀತ ಗಾನಸೌರಭದಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಅವರು ಕಾರ‍್ಯಕ್ರಮದ ಕೊನೆಯವರೆಗೂ ಸಂಗೀತವನ್ನು ಆಸ್ಪಾದಿಸಿದರು. ಕಳೆದ ಒಂದು ವಾರದಿಂದ ಶಾಂತಿವನವಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನೆಲ್ಲಾ ಒತ್ತಡವನ್ನು ಮರೆತು ಉಲ್ಲಾಸಭರಿತರಾಗಿ ಸಂಗೀತವನ್ನು ಆಸ್ವಾದಿಸುತ್ತಾ ಇದ್ದದ್ದು ಕಂಡು ಬಂತು. ಕಾರ‍್ಯಕ್ರಮದಲ್ಲಿ ಭಕ್ತಿ ಗಾನದ ರಸಧಾರೆ ಹರಿದು ಬಂತು. ಶಾಂತಿವನದ ಸಾಧಕರು, ವೈದ್ಯರು, ಸಿಬ್ಬಂದಿ ಹಾಗೂ ಆಗಮಿಸಿದ ಗಣ್ಯರು ಕೂಡ ಗಾನ ಸೌರಭದಲ್ಲಿ ಪಾಲ್ಗೊಂಡು ಸಂಗೀತವನ್ನು ಆಲಿಸಿ, ಖುಷಿ ಪಧಿಟ್ಟಧಿರು.

ಕಾರ್ಯಕ್ರಮವನ್ನು ನಡೆಸಿಕೊಟ್ಟ ಸಹನಾ ಸಾಮ್ರಾಜ್‌, ನಿಕ್ಷಿತ್‌ ಹಾಗೂ ವಿಶ್ವಜಿತ್‌ ಅವರನ್ನು ಮಾಜಿ ಸಿ.ಎಂ. ಸಿದ್ದರಾಮಯ್ಯ, ಶಾಂತಿವನ ಸಂಸ್ಥೆಯ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಹಾಗೂ ಮುಖ್ಯ ವೈದಾಧಿಕಾರಿ ಡಾ. ಪ್ರಶಾಂತ್‌ ಶೆಟ್ಟಿ ಅವರು ಗೌರವಿಸಿದರು. ಈ ಸಂದರ್ಭ ಎಂಎಲ್‌ಸಿ ಐವನ್‌ ಡಿಸೋಜ, ಮಾಜಿ ಶಾಸಕ ಗೋಪಾಲ ಪೂಜಾರಿ, ಏನೆಪೋಯ ಸಂಸ್ಥೆಯ ಅಧ್ಯಕ್ಷ ಅಬ್ದುಲ್‌ ಕುಂಞಿ, ಯು.ಟಿ.ಇಫ್ತಿಕಾರ್‌, ಯೋಗ ಮತ್ತು ನೈತಿಕ ಶಿಕ್ಷ ಣ ಯೋಜನೆ ನಿರ್ದೇಶಕ ಡಾ.ಐ.ಶಶಿಕಾಂತ್‌ ಜೈನ್‌, ಆಯುಷ್‌ ಆಡಳಿತಾಧಿಕಾರಿ ಮಂಜುನಾಥ್‌, ಮಂಗಳೂರಿನ ಸಂಗೀತ ವಿದ್ವಾನ್‌ ನಿತ್ಯಾನಂದ ರಾವ್‌, ದೇವಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣ, ಜಮಾ ಉಗ್ರಾಣದ ಹಿರಿಯ ಮುತ್ಸದ್ದಿ ಬಿ. ಭುಜಬಲಿ, ಮಲ್ಲಿನಾಥ್‌ ಜೈನ್‌, ನಿವೃತ್ತ ಪ್ರಾಧ್ಯಾಪಕ ಉದಯ ಕುಮಾರ್‌ ಮಲ್ಲ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ