ಆ್ಯಪ್ನಗರ

ಸಿದ್ಧಕಟ್ಟೆ: ಜೀವನ ಕೌಶಲ್ಯ ತರಬೇತಿ

ಸಿದ್ದಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಡಶಾಲೆ ವಿಭಾಗದಲ್ಲಿ ಜೀವನ ಕೌಶಲ್ಯ ತರಬೇತಿ ಕಾರಾರ‍ಯಗಾರಕ್ಕೆ ಸೋಮವಾರ ಚಾಲನೆ ದೊರೆಯಿತು.

Vijaya Karnataka 5 Jun 2019, 5:00 am
Vijaya Karnataka Web siddhakatte life style
ಸಿದ್ಧಕಟ್ಟೆ: ಜೀವನ ಕೌಶಲ್ಯ ತರಬೇತಿ
ಬಂಟ್ವಾಳ: ಸಿದ್ದಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಡಶಾಲೆ ವಿಭಾಗದಲ್ಲಿ ಜೀವನ ಕೌಶಲ್ಯ ತರಬೇತಿ ಕಾರಾರ‍ಯಗಾರಕ್ಕೆ ಸೋಮವಾರ ಚಾಲನೆ ದೊರೆಯಿತು.

ರೋಟರಿ ಕ್ಲಬ್‌ ಬಂಟ್ವಾಳ, ಇಂಟರಾಕ್ಟ್ ಕ್ಲಬ್‌ ಪ್ರೌಢಶಾಲೆ ವಿಭಾಗ ಸಿದ್ದಕಟ್ಟೆ ಮತ್ತು ಲೈಫ್‌ಸ್ಕಿಲ್‌ ಟ್ರೈನಿಂಗ್‌ ಸೆಂಟರ್‌ ಬಿ.ಸಿ.ರೋಡ್‌ ಸಹಯೋಗದಲ್ಲಿ ಕಾರ‍್ಯಕ್ರಮ ಆಯೋಜಿಸಲಾಗಿತ್ತು.

ಬಂಟ್ವಾಳ ರೋಟರಿ ಕ್ಲಬ್‌ ಅಧ್ಯಕ್ಷೆ ಶಿವಾನಿ ಬಾಳಿಗಾ ಕಾರ‍್ಯಕ್ರಮ ಉದ್ಘಾಟಿಸಿದರು. ತಾಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು ಮಾತನಾಡಿ, 'ಪ್ರತಿಯೊಬ್ಬರೂ ತಮ್ಮಲ್ಲಿರುವ ದೌರ್ಬಲ್ಯಗಳನ್ನು ಗುರುತಿಸಿ ಅದನ್ನು ಸಾಮರ್ಥ್ಯಗಳನ್ನಾಗಿ ಪರಿವರ್ತಿಸಿಕೊಂಡಾಗ ಬದುಕಿನ ಹಾದಿ ಸುಗಮವಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಶಾಲೆಗಳಲ್ಲಿ ನಡೆಯಬೇಕಾದ ಅನಿವಾರ್ಯತೆ ಇದೆ' ಎಂದು ಅವರು ಹೇಳಿದರು.

ಸಂಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಶೆಟ್ಟಿ ಅಧ್ಯಕ್ಷ ತೆ ವಹಿಸಿದ್ದರು. ಪಂಚಾಯಿತಿ ಸದಸ್ಯ ಶ್ರೀಧರ್‌ ಎಸ್‌.ಪಿ., ಸುಲೋಚನಾ, ಶಾಲಾ ವೈಸ್‌ ಪ್ರಿನ್ಸಿಪಾಲ್‌ ರಮಾನಂದ, ಲೈಫ್‌ಸ್ಕಿಲ್‌ ಟ್ರೈನಿಂಗ್‌ ಸೆಂಟರ್‌ ನಿರ್ದೇಶಕ ಗೋಪಾಲ ಅಂಚನ್‌, ರೋಟರಿ ಕ್ಲಬ್‌ ಕಾರ್ಯದರ್ಶಿ ಸ್ಮಿತಾ ಉಪಸ್ಥಿತರಿದ್ದರು. ಶಿಕ್ಷ ಕಿ ಮಾರ್ಗರೇಟ್‌ ಪಿಂಟೋ ಸ್ವಾಗತಿಸಿದರು. ಶಿಕ್ಷ ಕ ಮಹೇಶ್‌ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಸ್ವ ಅರಿವು, ಸಂವಹನ ಕೌಶಲ್ಯ, ನಾಯಕತ್ವ, ಮಾತುಗಾರಿಕೆ, ವ್ಯಕ್ತಿತ್ವ ವಿಕಸನ, ವೃತ್ತಿ ಆಸಕ್ತಿ, ಸಮಾಜವನ್ನು ಅರ್ಥ ಮಾಡುವಿಕೆ, ಕಲಿಕಾ ಕೌಶಲ್ಯ ಮೊದಲಾದ ವಿಷಯಗಳಲ್ಲಿ ತರಬೇತಿ ನಡೆಯಿತು. ಗೋಪಾಲ ಅಂಚನ್‌, ಉದಯ ಕುಮಾರ್‌ ಜ್ಯೋತಿಗುಡ್ಡೆ, ಪ್ರತಾಪ್‌ ಚೆಂಡ್ತಿಮಾರ್‌, ಪ್ರತಿಮಾ ಬಿ.ಸಿ.ರೋಡ್‌ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ