ಆ್ಯಪ್ನಗರ

ದಕ್ಷಿಣ ಕನ್ನಡ: ಅಮ್ಮನ ಯಾತನೆ ನೋಡಲಾಗದೆ ನದಿಗೆ ಹಾರಿ ಪ್ರಾಣ ಕಳೆದುಕೊಂಡ ಮಗ.!

ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿಯ ಸಂಕಟ ನೋಡಲಾರದೆ ಮಗನೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.

Vijaya Karnataka Web 9 Feb 2021, 4:02 pm
ಬಂಟ್ವಾಳ: ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿಯ ಸಂಕಟ ನೋಡಲಾಗದ ಮಗನೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದ ಪಾಣೆಮಂಗಳೂರಿನಲ್ಲಿ ನಡೆದಿದೆ.
Vijaya Karnataka Web niraj


ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಪಂತಡ್ಕ ನಿವಾಸಿ ನೀರಜ್(30) ಎಂಬ ಯುವಕ ಸೋಮವಾರ ರಾತ್ರಿ ನೇತ್ರಾಚತಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಮೊಬೈಲ್ ಸ್ಟೇಟಸ್‌ನಲ್ಲಿ ತನ್ನ ತಾಯಿಯ ಸಂಕಟ ಮತ್ತು ಅದರಿಂದಾಗಿ ತನಗಾಗಿರುವ ನೋವನ್ನು ಬಹಿರಂಗಪಡಿಸಿದ್ದಾರೆ.

ಬೈಕ್‌ ಸವಾರನಿಗೆ ಬೂಟುಗಾಲಿನಿಂದ ಒದ್ದ ಪೇದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

’ಓ ಯಮದೇವನೇ, ಹೆತ್ತ ತಾಯಿ ಸಾಯೋ ಮುನ್ನ ಕರೆದುಕೋ ಒಮ್ಮೆ ನನ್ನ, ಅಮ್ಮಾ ಕ್ಷಮಿಸಿ’ ಹೀಗೆಂದು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡ ನೀರಜ್, ನಂತರ ನದಿಗೆ ಹಾರಿದ್ದಾರೆ. ಮಂಗಳವಾರ ಸ್ಥಳೀಯ ಈಜುಗಾರ ಮೊಹಮ್ಮದ್ ನಂದಾವರ ಹಾಗೂ ತಂಡ, ಬಂಟ್ವಾಳ ಅಗ್ನಿಶಾಮಕ ದಳದ ತಂಡ ಹುಡುಕಾಟ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಲ್ಲಿಯ ಮೈಸೂರು.. ಎಲ್ಲಿಯ ವಿಜಯಪುರ..? ನಾಪತ್ತೆಯಾದ ಗೃಹಿಣಿ ಫೇಸ್‌ಬುಕ್‌ ಗೆಳೆಯನ ಜತೆ ಪತ್ತೆ

”ನನಗೇನೇ ಯಾಕೆ ಈ ಕಷ್ಟ. ನೋವಿದ್ದರೂ ನಗೋದೇ ಆಗೋಯ್ತು. ನನ್ಮೇಲೆ ದೇವರಿಗೂ ಕೂಡಾ, ಸುಖ ಕೊಟ್ರೆ ನೋವು ಗೊತ್ತಾಗಲ್ಲ. ನೋವು ಕೊಟ್ರೆ ಸುಖ ಗೊತ್ತಾಗಲ್ಲ ಅಂತ ನನಗೆ ನೋವೇ ಕೊಟ್ಬಿಟ್ಟ..” ಎಂದು ನೀರಜ್ ಅದಕ್ಕೂ ಮೊದಲು ಸ್ಟೇಟಸ್ ಹಾಕಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ