ಆ್ಯಪ್ನಗರ

ಬಾಗಿಲು ಬಡಿದರೆಂದು ತೆರೆದರೆ ಹಲ್ಲೆ ನಡೆಸಿ ದರೋಡೆಗೈದರು

ಮೊಡಂಕಾಪುವಿನಲ್ಲಿ ಬಾಗಿಲು ಬಡಿದ ಸದ್ದು ಕೇಳಿ ಮನೆಯೊಡೆಯ ಬಾಗಿಲು ತೆಗೆಯುವಾಗ ಆಗಂತುಕರು ಮಾರಕಾಯುಧಗಳಿಂದ ಹೊಡೆದು ಲೂಟಿ ಮಾಡಿದ್ದಾರೆ.

Vijaya Karnataka Web 9 Aug 2018, 12:27 pm
ಬಂಟ್ವಾಳ: ಮೊಡಂಕಾಪುವಿನಲ್ಲಿ ಬಾಗಿಲು ಬಡಿದ ಸದ್ದು ಕೇಳಿ ಮನೆಯೊಡೆಯ ಬಾಗಿಲು ತೆಗೆಯುವಾಗ ಆಗಂತುಕರು ಮಾರಕಾಯುಧಗಳಿಂದ ಹೊಡೆದು ಲೂಟಿ ಮಾಡಿದ್ದಾರೆ.
Vijaya Karnataka Web house.


ಜನವಸತಿ ಇರುವ ಪ್ರದೇಶದಲ್ಲೇ ಇಂಥ ಘಟನೆ ನಡೆದಿರುವುದು ದುರದೃಷ್ಟಕರ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆ ಮಾತನಾಡಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ಇಂಥ ಕೃತ್ಯಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ತಿಳಿಸಿದ್ದಾರೆ.

ನಿವೃತ್ತ ಬ್ಯಾಂಕ್ ಉದ್ಯೋಗಿ ಜನಾರ್ದನ ಹೊಳ್ಳ (58) ಎಂಬವರು ಮೊಡಂಕಾಪು ಕಾರ್ಮೆಲ್ ಕಾಲೇಜು ಬಳಿ ಇರುವ ತನ್ನ ಮನೆಯಲ್ಲಿ ಪತ್ನಿಯೊಂದಿಗೆ ವಾಸಿಸುತ್ತಿದ್ದಾರೆ. ರಾತ್ರಿ 9.30ಕ್ಕೆ ಕಾಲಿಂಗ್ ಬೆಲ್ ಆಗಿದೆ. ಮಗ ಬಂದಿರಬಹುದು ಎಂದು ಭಾವಿಸಿ ಹೊಳ್ಳ ಅವರು ಬಾಗಿಲು ತೆಗೆದ ಸಂದರ್ಭ ಏಕಾಏಕಿ ಅಪರಿಚಿತರು ತಲೆಗೆ ಹೊಡೆದು ಕುತ್ತಿಗೆಯಲ್ಲಿದ್ದ ಬಂಗಾರದ ಸರ ಕಿತ್ತುಕೊಂಡಿದ್ದಾರೆ. ಆಗಂತುಕರು ಮನೆಯನ್ನು ಜಾಲಾಡಿ ತೆರಳಿದ್ದಾರೆ. ಹೊಳ್ಳ ಅವರ ಪತ್ನಿ ಸಹಾಯಕ್ಕಾಗಿ ಬೊಬ್ಬೆ ಹೊಡೆದು ಸುತ್ತಮುತ್ತಲಿನವರಿಗೆ ವಿಷಯ ತಿಳಿದಿದ್ದು, ಬಳಿಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.

ಕೈಕಂಬ ಕ್ರಾಸ್ ನಿಂದ ಪೊಳಲಿ ಮಾರ್ಗದ ಕಡೆಗೆ ಹೋಗುವ ದಾರಿಯಲ್ಲಿ ಹೊಳ್ಳ ಅವರ ಮನೆ ಇದೆ. ಕೂಗಳತೆಯ ದೂರದಲ್ಲೇ ಬೇರೆ ಮನೆಗಳಿವೆ. ಈ ಘಟನೆಯಿಂದ ಬಿ.ಸಿ.ರೋಡ್ ಪರಿಸರದ ಜನರಲ್ಲಿ ಆತಂಕವುಂಟಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ